Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರ ಬೇಡಿಕೆ ಈಡೇರಿಸಲು ಸಿಎಮ್, ಸಕ್ಕರೆ ಸಚಿವರಿಗೆ ಮನವಿ ಮಾಡುತ್ತೇನೆ: ಬಾಬಾಸಾಹೇಬ ಪಾಟೀಲ

 
ಬೈಲಹೊಂಗಲ.ಪ್ರಸಕ್ತ ಬೆಳಗಾವಿ ಜಿಲ್ಲೆಯಲ್ಲಿ ಹಾಗೂ ರಾಜ್ಯದ ತುಂಬ ಉಗ್ರ ಸ್ವರೂಪ ಪಡೆದಿರುವ ರೈತ ಸಂಘದ ಮತ್ತು ರೈತರ ಬೇಡಿಕೆಗಾಗಿ ಒಂದು ಟನ ಕಬ್ಬಿಗೆ ರೂ. 3500/- ಸರ್ಕಾರದಿಂದ ದರ ನಿಗದಿ ಮಾಡಲು ಹೋರಾಟ ಮಾಡುತ್ತಿರುವ ರೈತ ಸಂಘದ ಹೋರಾಟವು ಯೋಗ್ಯವಾಗಿದ್ದು ಅದಕ್ಕಾಗಿ ಸರ್ಕಾರ ರೈತರ  ಪರವಾಗಿ ಸಿ ಎಮ್ ಸಿದ್ರಾಮಯ್ಯ ಅವರು

   ತುರ್ತು ರೈತರ ಸಭೆಯನ್ನು ಕರೆದು ಅವರ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಸಿ ಎಮ್ ಸಿದ್ರಾಮಯ್ಯ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಮಾಡಲು ವಿನಂತಿ ಮಾಡುತ್ತೇನೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಹೇಳಿದರು.

     ಅವರು ಸೋಮವಾರದಂದು ಪಟ್ಟಣದ ಚನ್ನಮ್ಮ ಸರ್ಕಲ್ ಹತ್ತಿರ ರೈತರು ಆಯೋಜನೆ ಮಾಡಿರುವ ಕಬ್ಬಿಗೆ ರೂ. 3500/- ನೀಡಲು ದರ ನಿಗದಿ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಲು ಒತ್ತಾಯಿಸಿ ಧರಣಿ ಸತ್ಯಾಗ್ರಹ ಹೋರಾಟ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿ ಈ ಕುರಿತು ನಾನು ಈಗಾಗಲೇ ಮುಖ್ಯ ಮಂತ್ರಿ ಸಿದ್ರಾಮಯ್ಯ ಹಾಗೂ ಸಕ್ಕರೆ ಸಚಿವ ಅವರಲ್ಲಿ ಪತ್ರದ ಮೂಲಕ ಮನವಿ ಮಾಡಿದ್ದೇನೆ. ಆದಷ್ಟು ಬೇಗ ರೈತರ ಬೇಡಿಕೆ ಈಡೇರಿಸಬೇಕು ಮತ್ತು ನಾನು ಎಂದಿಗೂ ರೈತರ ಪರವಾಗಿದ್ದೇನೆ ಎಂದರು.

    ಮಾಜಿ ಶಾಸಕ ವಿ ಆಯ ಪಾಟೀಲ ಮಾತನಾಡಿ ರೈತ ಸಂಘದ ಹೋರಾಟ ಕೆಲವು ದಿನಗಳಿಂದ ಪ್ರಯೋಜನಕಾರಿಯಾಗಿ ಒಗ್ಗಟ್ಟು ಪ್ರದರ್ಶನ ಕಾಣತಾ ಇರಲಿಲ್ಲ ಆದರೆ ಪ್ರಸಕ್ತ ಹೋರಾಟ ನೋಡಿದರೆ ರೈತ ಸಂಘದಲ್ಲಿ ಚೈತನ್ಯ ಬಂದಿದೆ.ಸರ್ಕಾರದ ಈ ರೈತರ ಸಮಸ್ಯೆಗೆ ಗಮನ ಹರಿಸಿ ರೈತರ ಪರವಾಗಿ ಕೆಲಸ ಮಾಡಿ ದರ ನಿಗದಿ ಮಾಡಬೇಕು ಎಂದರು.

    ಜೆ ಡಿ ಎಸ್ ಮುಖಂಡ ಶಂಕರ ಮಾಡಲಗಿ ಮಾತನಾಡಿ ಸರ್ಕಾರ ಎಚ್ಛೆಟ್ಟು ರೈತರ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವದೆಂದರು.

   ಇದೆ ಸಂದರ್ಭದಲ್ಲಿ ಈ ರೈತರ ಹೋರಾಟಕ್ಕೆ ವಕೀಲರ ಸಂಘ ಬೆಂಬಲ ಸೂಚಿಸಿತು.

   ಈ ರೈತ ಹೋರಾಟದಲ್ಲಿ  ಶಶಿಕಾಂತ ನಾಯ್ಕ, ರೈತ ಹೋರಾಟಗಾರ, ರೈತ ಸೇವಾ ಸಂಘದ ಅಧ್ಯಕ್ಷ ಶಂಕರ ಬೋಳನ್ನವರ, ಭೀರಪ್ಪಾ ದೇಶನೂರ, ಮಲ್ಲಿಕಾರ್ಜುನ ಹುಂಬಿ, ಶಿವರಂಜನ ಬೋಳನ್ನವರ, ರಫೀಕ್ ಬಡೇಘರ, ಬಸವರಾಜ ಮೋಕಾಸಿ, ಬಸನಗೌಡ ಪಾಟೀಲ, ಬಸವರಾಜ ಉಪ್ಪಾರ, ಸುರೇಶ ವಾಲಿ, ಮಹಾಂತೇಶ ಕಮತ, ಸೋಮಪ್ಪ ಬೆಳಕೂಡ, ಬಸವರಾಜ ಹಣ್ಣಿಕೇರಿ,ಮಹಾಂತೇಶ ಗೌರಿ, ಶ್ರೀಕಾಂತ ಶಿರಹಟ್ಟಿ, ದಾಸಪ್ಪಗೌಡ ಕುಸಲಾಪುರ, ಸುರೇಶ ಹೊಳಿ, ವಕೀಲರ ಸಂಘದ ಅಧ್ಯಕ್ಷ ಎಮ್ ಆರ್ ಮೇಳವಂಕಿ, ಉಪಾಧ್ಯಕ್ಷ ಎ ಎಮ್ ಸಿದ್ರಾಮನಿ, ಪಿ ಆರ್ ಮರಕಟ್ಟಿ,ಎಮ್ ಎಮ್ ಮಠದ, ಎಮ್ ವಾಯ್ ಸೋಮಣ್ಣವರ, ಶಶಿಧರ ಚಿಕ್ಕೋಡಿ, ಬಿ ಸಿ ಸಂಗೊಳ್ಳಿ, ಸಂಗಮೇಶ ಸಂಪಗಾಂವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*