Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರ ಬೇಡಿಕೆ ಈಡೇರಿಸಲು ಸಿಎಮ್, ಸಕ್ಕರೆ ಸಚಿವರಿಗೆ ಮನವಿ ಮಾಡುತ್ತೇನೆ: ಬಾಬಾಸಾಹೇಬ ಪಾಟೀಲ

 
ಬೈಲಹೊಂಗಲ.ಪ್ರಸಕ್ತ ಬೆಳಗಾವಿ ಜಿಲ್ಲೆಯಲ್ಲಿ ಹಾಗೂ ರಾಜ್ಯದ ತುಂಬ ಉಗ್ರ ಸ್ವರೂಪ ಪಡೆದಿರುವ ರೈತ ಸಂಘದ ಮತ್ತು ರೈತರ ಬೇಡಿಕೆಗಾಗಿ ಒಂದು ಟನ ಕಬ್ಬಿಗೆ ರೂ. 3500/- ಸರ್ಕಾರದಿಂದ ದರ ನಿಗದಿ ಮಾಡಲು ಹೋರಾಟ ಮಾಡುತ್ತಿರುವ ರೈತ ಸಂಘದ ಹೋರಾಟವು ಯೋಗ್ಯವಾಗಿದ್ದು ಅದಕ್ಕಾಗಿ ಸರ್ಕಾರ ರೈತರ  ಪರವಾಗಿ ಸಿ ಎಮ್ ಸಿದ್ರಾಮಯ್ಯ ಅವರು

   ತುರ್ತು ರೈತರ ಸಭೆಯನ್ನು ಕರೆದು ಅವರ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಸಿ ಎಮ್ ಸಿದ್ರಾಮಯ್ಯ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಮಾಡಲು ವಿನಂತಿ ಮಾಡುತ್ತೇನೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಹೇಳಿದರು.

     ಅವರು ಸೋಮವಾರದಂದು ಪಟ್ಟಣದ ಚನ್ನಮ್ಮ ಸರ್ಕಲ್ ಹತ್ತಿರ ರೈತರು ಆಯೋಜನೆ ಮಾಡಿರುವ ಕಬ್ಬಿಗೆ ರೂ. 3500/- ನೀಡಲು ದರ ನಿಗದಿ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಲು ಒತ್ತಾಯಿಸಿ ಧರಣಿ ಸತ್ಯಾಗ್ರಹ ಹೋರಾಟ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿ ಈ ಕುರಿತು ನಾನು ಈಗಾಗಲೇ ಮುಖ್ಯ ಮಂತ್ರಿ ಸಿದ್ರಾಮಯ್ಯ ಹಾಗೂ ಸಕ್ಕರೆ ಸಚಿವ ಅವರಲ್ಲಿ ಪತ್ರದ ಮೂಲಕ ಮನವಿ ಮಾಡಿದ್ದೇನೆ. ಆದಷ್ಟು ಬೇಗ ರೈತರ ಬೇಡಿಕೆ ಈಡೇರಿಸಬೇಕು ಮತ್ತು ನಾನು ಎಂದಿಗೂ ರೈತರ ಪರವಾಗಿದ್ದೇನೆ ಎಂದರು.

    ಮಾಜಿ ಶಾಸಕ ವಿ ಆಯ ಪಾಟೀಲ ಮಾತನಾಡಿ ರೈತ ಸಂಘದ ಹೋರಾಟ ಕೆಲವು ದಿನಗಳಿಂದ ಪ್ರಯೋಜನಕಾರಿಯಾಗಿ ಒಗ್ಗಟ್ಟು ಪ್ರದರ್ಶನ ಕಾಣತಾ ಇರಲಿಲ್ಲ ಆದರೆ ಪ್ರಸಕ್ತ ಹೋರಾಟ ನೋಡಿದರೆ ರೈತ ಸಂಘದಲ್ಲಿ ಚೈತನ್ಯ ಬಂದಿದೆ.ಸರ್ಕಾರದ ಈ ರೈತರ ಸಮಸ್ಯೆಗೆ ಗಮನ ಹರಿಸಿ ರೈತರ ಪರವಾಗಿ ಕೆಲಸ ಮಾಡಿ ದರ ನಿಗದಿ ಮಾಡಬೇಕು ಎಂದರು.

    ಜೆ ಡಿ ಎಸ್ ಮುಖಂಡ ಶಂಕರ ಮಾಡಲಗಿ ಮಾತನಾಡಿ ಸರ್ಕಾರ ಎಚ್ಛೆಟ್ಟು ರೈತರ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವದೆಂದರು.

   ಇದೆ ಸಂದರ್ಭದಲ್ಲಿ ಈ ರೈತರ ಹೋರಾಟಕ್ಕೆ ವಕೀಲರ ಸಂಘ ಬೆಂಬಲ ಸೂಚಿಸಿತು.

   ಈ ರೈತ ಹೋರಾಟದಲ್ಲಿ  ಶಶಿಕಾಂತ ನಾಯ್ಕ, ರೈತ ಹೋರಾಟಗಾರ, ರೈತ ಸೇವಾ ಸಂಘದ ಅಧ್ಯಕ್ಷ ಶಂಕರ ಬೋಳನ್ನವರ, ಭೀರಪ್ಪಾ ದೇಶನೂರ, ಮಲ್ಲಿಕಾರ್ಜುನ ಹುಂಬಿ, ಶಿವರಂಜನ ಬೋಳನ್ನವರ, ರಫೀಕ್ ಬಡೇಘರ, ಬಸವರಾಜ ಮೋಕಾಸಿ, ಬಸನಗೌಡ ಪಾಟೀಲ, ಬಸವರಾಜ ಉಪ್ಪಾರ, ಸುರೇಶ ವಾಲಿ, ಮಹಾಂತೇಶ ಕಮತ, ಸೋಮಪ್ಪ ಬೆಳಕೂಡ, ಬಸವರಾಜ ಹಣ್ಣಿಕೇರಿ,ಮಹಾಂತೇಶ ಗೌರಿ, ಶ್ರೀಕಾಂತ ಶಿರಹಟ್ಟಿ, ದಾಸಪ್ಪಗೌಡ ಕುಸಲಾಪುರ, ಸುರೇಶ ಹೊಳಿ, ವಕೀಲರ ಸಂಘದ ಅಧ್ಯಕ್ಷ ಎಮ್ ಆರ್ ಮೇಳವಂಕಿ, ಉಪಾಧ್ಯಕ್ಷ ಎ ಎಮ್ ಸಿದ್ರಾಮನಿ, ಪಿ ಆರ್ ಮರಕಟ್ಟಿ,ಎಮ್ ಎಮ್ ಮಠದ, ಎಮ್ ವಾಯ್ ಸೋಮಣ್ಣವರ, ಶಶಿಧರ ಚಿಕ್ಕೋಡಿ, ಬಿ ಸಿ ಸಂಗೊಳ್ಳಿ, ಸಂಗಮೇಶ ಸಂಪಗಾಂವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ