Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ವಾಭಿಮಾನಿ ಬದುಕು ಹಾಕಿಕೊಟ್ಟವರು ಬಾಬಾಗೌಡ ಪಾಟೀಲರು.






ಬೈಲಹೊಂಗಲ: ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿ ರಾಷ್ಟ್ರಾದ್ಯಂತ ರೈತರ ಜಮಿನುಗಳಿಗೆ ರಸ್ತೆ ಮಾಡುವ ಗ್ರಾಮ ಸಡಕ್ ಯೋಜನೆಯ ರೂವಾರಿ ರೈತರಿಗೆ ಸ್ವಾಭಿಮಾನ ಬದುಕು ತೊರಿದ ಮಾಹಾನ್ ಚಿಂತಕ ಬಾಬಾಗೌಡ ಪಾಟೀಲರು ಎಂದು ಮಾಜಿ ಎಪಿಎಂಸಿ ಅಧ್ಯಕ್ಷ ಎಫ್.ಎಸ್‌. ಸಿದ್ದನಗೌಡರ ಹೇಳಿದರು.

    ನಗರದ ಸಂಗೊಳ್ಳಿ ರಾಯಣ್ಣ ಉದ್ಯಾನವನದಲ್ಲಿ ಮಂಗಳವಾರ ಮಾಜಿ ಕೇಂದ್ರ ಸಚಿವ ರೈತನಾಯಕ ದಿ.ಬಾಬಾಗೌಡ ಪಾಟೀಲರ 81ನೇ ಜನ್ಮದಿನೊತ್ಸವದಲ್ಲಿ ಮಾತನಾಡಿ, ಕಿತ್ತೂರು ನಾಡು ವೀರರ ಜನ್ಮಸ್ಥಾನವಾಗಿದ್ದು ರೈತ ಕುಟುಂಬದಲ್ಲಿ ಜನಿಸಿ ರೈತ ಸಂಘಟನೆ ಹುಟ್ಟುಹಾಕಿ ಈ ನಾಡಿಗೆ ರೈತನೆ ನಿಜವಾದ ನಾಯಕ ಅವನ ಹೆಸರಿನಿಂದ ಸೇವೆಮಾಡುವ ಸೋಗಿನಲ್ಲಿ ಕೃಷಿಕರನ್ನ ಶೋಷಣೆ ಮಾಡುವ ಜನನಾಯಕರಿಗೆ ಮತ್ತು ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುವದರೊಂದಿಗೆ ರೈತರ ಜ್ವಲಂತ ಅಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ರೈತರು ಸರ್ಕಾರಿ ಕಛೇರಿಗಳಿಗೆ ಬಂದರೆ ಅವರಿಗೆ ಯೊಗ್ಯ ಸ್ಥಾನ ಕಲ್ಪಿಸಿದ್ದುರು. ಲೊಕಸಭೆಗೆ ಪ್ರಥಮ ಬಾರಿಗೆ ಆಯ್ಕೆಯಾಗಿ ಅಟಲಜಿಯವರ ಸರ್ಕಾರದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳು ಇಂದಿಗೂ ಪ್ರಸ್ತುತವಾಗಿರುವದು ಶ್ಲಾಘನೀಯ   ಎಂದರು.

     ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹುಂಬಿ, ರಾಜ್ಯಾಧ್ಯಕ್ಷ ಬೀರಪ್ಪ ದೇಶನೂರ ಮಾತನಾಡಿ, ರೈತರ ನಾಯಕರಾಗಿ ಹೊರಹೊಮ್ಮಿದ್ದ ಬಾಬಾಗೌಡರು ಕಿತ್ತೂರು ಹಾಗೂ ಧಾರವಾಡ ಗ್ರಾಮೀಣ ಮತಕ್ಷೇತ್ರದಲ್ಲಿ ರೈತರು ಬುತ್ತಿ ಕಟ್ಟಿಕೊಂಡು ಚುನಾವಣಾ ಪ್ರಚಾರ ಮಾಡಿ ಹಣ, ಹೆಂಡ ತೋಳಬಲ ಹಾಗೂ ಯಾವುದೆ ರಾಜಕೀಯ ಹಿನ್ನಲೆಯ ಬೆಂಬಲವಿಲ್ಲದೆ  ಏಕಕಾಲಕ್ಕೆ ಶಾಸಕರಾಗಿ ಆಯ್ಕೆಯಾಗಿ ರಾಜ್ಯದ ಗಮನ ಸೆಳದಿದ್ದ ಇವರು ರಾಜ್ಯಕ್ಕೆ ರೈತರ ಶಕ್ತಿಯನ್ನು ಅನಾವರಣ ಮಾಡಿದ್ದರು.

      ರೈತ ನಾಯಕ ಶ್ರೀಕಾಂತ್ ಶಿರಹಟ್ಟಿ ಮಾತನಾಡಿ, ರೈತಪರ ಹೋರಾಟಗಾರ ಸಾಮಾಜಿಕ ಕಳಕಳಿಯಿಂದ ಮನೆ ಮಾತಾಗಿರುವ ಬಾಬಾಗೌಡರು ಜಾರಿಗೆ ತಂದಿರುವ ಗ್ರಾಮ ಸಡಕ್ ಯೋಜನೆಗೆ ಬಾಬಾಗವಡ ಪಾಟೀಲ ಗ್ರಾಮ ಸಡಕ್ ಯೋಜನೆ ಎಂದು ನಾಮಕರಣ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

‌   ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಬಾಬಾಗೌಡ ಪಾಟೀಲರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೆರಿಸಿದರು. ಅಣ್ಣಾಪ್ಪ ಗುಮತಿ, ಸುರೇಶ ವಾಲಿ, ಉಳವಪ್ಪ ಬಡ್ಡಿಮನಿ, ವಿಠಲ ಯಾಸಣ್ಣವರ, ಆನಂದಗೌಡ ಪಾಟೀಲ, ಅಪ್ಪಾಸಹೇಬ ಯಕ್ಕುಂಡಿ, ಶ್ರೀಶೈಲ ಬೊರಕನವರ, ಶಂಕರೆಪ್ಪ  ಕಡಕೊಳ, ಶಂಕರಯ್ಯ ಕುಲಕರ್ಣಿ, ರಾಮನಗೌಡ ಪಾಟೀಲ, ಭೂಪಾಲ ಅಕ್ಕಿ, ಭೀಮಣ್ಣ ಹುದಲಿ,  ನಾಗಪ್ಪ ಬಾಳೆಕುಂದರಗಿ, ಅಜ್ಜಪ್ಪ ಸಂಗೋಳ್ಳಿ, ರಾಘವೇಂದ್ರ ಶಿಗಿಹಳ್ಳಿ ಹಾಗೂ ಅನೇಕ ರೈತರು ಹಾಗೂ ರೈತಮಹಿಳೆಯರು ಇದ್ದರು.







Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ