ಅಥಣಿ: ಅಥಣಿ ಪೊಲೀಸರ ಭರ್ಜರಿ ಕಾರ್ಯಾರಣೆ ಅಂತರರಾಜ್ಯ ಕಳ್ಳರ ಬಂಧನ ಅಥಣಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪುಸಲಾಯಿಸಿ ಕಳ್ಳತನ ಮಾಡಿದ್ದ ಇಬ್ಬರು ಮಹಿಳೆಯರನ್ನು ಬಂಧಿಸುವಲ್ಲಿ ಯಶ್ವಯಾಗಿದ್ದು, ಮಹಾರಾಷ್ಟçದ ಕೋಲ್ಲಾಪೂರ ಮೂಲದ ಹೇಮಾ ಧರ್ಮೇಂದ್ರ ಕಸಬೇಕರ, ನೀಲಂ ವಿಜಯ ಕಾಂಬಳೆ ಇಬ್ಬರನ್ನು ಬಂಧಿಸಿದ್ದು ಅವರಿಂದ ಬಂಗಾರದ ಬೋರಮಾಳ ೦೭ ಗ್ರಾಂ ತೂಕದ್ದು ೧,೧೨,೦೦೦ ರೂ.ಗಳು ಮತ್ತು ಅಥಣಿ ಪೋಲಿಸ್ ಠಾಣೆ ಒಟ್ಟು ೪ ಪ್ರಕರಣಗಳಲ್ಲಿ ೪೨.೫ ಗ್ರಾಂ ಬಂಗಾರದ ಆಭರಣಗಳು ೬,೮೦,೦೦೦ ಒಟ್ಟು ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ
ಪ್ರಕರಣವನ್ನು ಪತ್ತೆ ಮಾಡಲು ಬೆಳಗಾವಿ ಎಸ್ ಪಿ ಕೆ ರಾಮರಾಜನ್ ಹೆಚ್ಚುವರಿ ಎಸ್ಪಿ ಆರ್ ಬಿ ಬಸರಗಿ, ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ಜಿ ಎಸ್ ಉಪ್ಪಾರ, ಪಿಎಸ್ಐ ಮಲ್ಲಿಕಾರ್ಜುನ ತಳವಾರ ನೇತೃತ್ವದ ತನಿಖಾ ತಂಡದಲ್ಲಿ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎ ಎಈರಕರ, ಶ್ರೀಮತಿ ಜೆ ಆರ್ ಅಸೋದೆ, ಮಹಾಂತೇಶ ಪಾಟೀಲ, ಎ. ಬಿ. ಹೋಸಲ್ಕರ, ಎಮ್.ಎಮ್ ಖೋತ, ವಿ ವಿ ಗಾಯಕವಾಡ, ಎಸ್ ಎಸ್ ಸನದಿ, ಜೆ ಹೆಚ್ ಡಾಂಗೆ, ಭೀ ಎಮ್ ತಳವಾರ, ಕುಮಾರಿ ಜೆ ಎಸ್ ಬೆಕ್ಕೇರಿ ಮತ್ತು ವಿನೋಧ ಠಕ್ಕಣ್ಣವರ ಭಾಗಿಯಾಗಿ ಪ್ರಕರಣವನ್ನು ಭೇದಿಸಿದ್ದು ಕಾರ್ಯವನ್ನು ಬೆಳಗಾವಿ ಎಸ್ಪಿ ಪಿ ಕೆ ರಾಜರಾಜನ್ ಅವರು ಶ್ಲಾಘಿಸಿದ್ದಾರೆ
