Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಐಟಿಎಂಗೆ ಮತ್ತೊಂದು ಕೀರ್ತಿ: ಡಾ. ಜಗದೀಶ್ ಅಂತರರಾಷ್ಟ್ರೀಯ ಸಂಶೋಧನಾ ಸಾಧನೆ

 

 

ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ (ಬಿಐಟಿಎಂ), ಬಳ್ಳಾರಿಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿAಗ್ ವಿಭಾಗದ ಪ್ರೊಫೆಸರ್ ಡಾ. ಜಗದೀಶ್ ಆರ್.ಎಂ. ಅವರು ತೈವಾನ್‌ನ ನ್ಯಾಷನಲ್ ಕೌಶಿಯುಂಗ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (ಎನ್.ಕೆ.ಯು.ಎಸ್.ಟಿ.) ಯ ಐಒಟಿ ಸೈಬರ್‌ಸಿಕ್ಯೂರಿಟಿ ಸಂಶೋಧನಾ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಪೋಸ್ಟ್ಡಾಕ್ಟರಲ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

 

ಈ ಸಂಶೋಧನಾ ಕಾರ್ಯಕ್ರಮವನ್ನು ಪ್ರೊ. ಚಿನ್-ಶಿಹ್ ಶೈ (ಎನ್.ಕೆ.ಯು.ಎಸ್.ಟಿ.) ಹಾಗೂ ಡಾ. ಮೊಹಮ್ಮದ್ ಅಲಿ ಹುಸ್ಸೇನ್, ಡೀನ್ (ಆರ್ & ಡಿ), ಶ್ರೀನಿಧಿ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಟೆಕ್ನಾಲಜಿ, ಹೈದರಾಬಾದ್ ಅವರ ಮಾರ್ಗದರ್ಶನದಲ್ಲಿ ಕೈಗೊಂಡಿದ್ದಾರೆ.

 

“ಐಒಟಿ ಬಳಸಿ ಬೆಳೆಗಳ ಮೇಲ್ವಿಚಾರಣೆಗಾಗಿ ಅಡಾಪ್ಟಿವ್ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನ” ಎಂಬ ಮಹತ್ವದ ಸಂಶೋಧನಾ ವಿಷಯದ ಮೇಲೆ ಕಾರ್ಯನಿರ್ವಹಿಸಿರುವ ಡಾ. ಜಗದೀಶ್ ಅವರು, ಈ ಶೈಕ್ಷಣಿಕ ಪ್ರಯಾಣವು ಅತ್ಯಂತ ಸಮೃದ್ಧ ಮತ್ತು ಜ್ಞಾನವರ್ಧಕ ಅನುಭವವಾಗಿದ್ದು, ಐಒಟಿ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ತಮ್ಮ ಸಂಶೋಧನಾ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

 

ಈ ಸಾಧನೆಯ ಕುರಿತು ಸಂಸ್ಥೆಯ ಅಧ್ಯಕ್ಷರಾದ ಡಾ. ಯಶವಂತ್ ಭೂಪಾಲ್ ಅವರು ಸಂತಸ ವ್ಯಕ್ತಪಡಿಸಿ, “ನಮ್ಮ ಸಂಸ್ಥೆಯ ಅಧ್ಯಾಪಕರು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಇದು ನಮ್ಮ ಸಂಸ್ಥೆಯ ಗೌರವವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ” ಎಂದು ತಿಳಿಸಿದ್ದಾರೆ.

 

ಸಂಸ್ಥೆಯ ನಿರ್ದೇಶಕರಾದ ವೈ. ಜೆ. ಪೃಥ್ವಿರಾಜ್ ಭೂಪಾಲ್ ಅವರು, “ಡಾ. ಜಗದೀಶ್ ಅವರ ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಸಂಶೋಧನೆ ಮತ್ತು ನವೀನತೆಯತ್ತ ಹೆಜ್ಜೆ ಇಡುವಂತೆ ಉತ್ತೇಜಿಸುತ್ತದೆ” ಎಂದು ಅಭಿನಂದಿಸಿದ್ದಾರೆ.

 

ಕಾಲೇಜಿನ ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ್ ಅವರು, “ಡಾ. ಜಗದೀಶ್ ಅವರ ಶ್ರಮ, ಸಮರ್ಪಣೆ ಮತ್ತು ಸಂಶೋಧನಾ ನಿಷ್ಠೆ ಪ್ರಶಂಸನೀಯವಾಗಿದ್ದು, ಅವರ ಸಾಧನೆ ಸಂಸ್ಥೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಇಂತಹ ಸಾಧನೆಗಳು ಇತರ ಅಧ್ಯಾಪಕರಿಗೂ ಮಾದರಿಯಾಗಲಿ” ಎಂದು ಶ್ಲಾಘಿಸಿದ್ದಾರೆ.

 

ಡೀನ್‌ಗಳು, ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಡಾ. ಜಗದೀಶ್ ಆರ್.ಎಂ. ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಣ್ಣಿನ ಫಲವತ್ತತೆಯ ರಕ್ಷಣೆ ಪ್ರತಿಯೊಬ್ಬರ  ಕರ್ತವ್ಯವಾಗಿದೆ:ಡಾ. ಎನ್ ಆರ್ ಸಾಲೀಮಠ ಅಕ್ಕಮಹಾದೇವಿ ಜಯಂತಿ ಉತ್ಸವ ವಿಜೃಂಭಣೆಯಿಂದ ಆಚರಣೆಧರ್ಮಚಕ್ರ ಆರಾಧನಾ ಮಹೋತ್ಸವಕ್ಕೆ ಚಾಲನೆಬಳ್ಳಾರಿಯಲ್ಲಿ ಸಂಭ್ರಮದ ಶ್ರೀ ಭಗೀರಥ ಜಯಂತ್ಯೋತ್ಸವಕರ್ನಾಟಕ ವಿಶ್ವವಿದ್ಯಾಲಯವು 75 ನೇ ವಾರ್ಷಿಕ ಘಟಿಕೋತ್ಸವ.: ಗೌರವ ಡಾಕ್ಟರೇಟ್ ಪದವಿ ಪ್ರಧಾನ.ಸುಚಿಕರವಾದ ಊಟ, ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳು ತಕ್ಷಣವೇ ನೀಡಲಿ: ಶಿವರೆಡ್ಡಿ, ಬಗನಾಳ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸ್ವಾಭಿಮಾನ ಸಂಘ ಹಾಗೂ ಗ್ರಾಮದ ಸಮಸ್ತ ದೈವ ಬಾಂಧವರಿಂದ ಉಚಿತ ಸಾಮೂಹಿಕ ಮದುವೆ ಮತ್ತು ಅಂಬೇಡ್ಕರ್ ಜಯಂತಿ ನಟನೆಯ ಮೂಲಕ ಜೀವನ ಮೌಲ್ಯಗಳನ್ನು ಬೋಧಿಸಿದ ವರನಟ ಡಾ.ರಾಜಕುಮಾರ್ ಕನ್ನಡದ ಶ್ರೇಷ್ಠ ರತ್ನ -ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮನಿರ್ದಿಷ್ಟ ಗುರಿ ಹಾಕಿಕೊಂಡು ಅಭ್ಯಾಸ ಮಾಡಿ : ಡಿಸಿ ಡಾ. ಆನಂದ ಕೆ. ಸಲಹೆರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ :  ಮಾಜಿ ಸಚಿವ ಕೆ. ಎಸ್  ಈಶ್ವರಪ್ಪ