ಬಳ್ಳಾರಿ..01:.. ವಿಶ್ವ ವಿಖ್ಯಾತ ಚಲನಚಿತ್ರ ನಟ ನಂದಮೂರಿ ತಾರಕ ರಾಮಾರಾವು ಎಂದು ಮೇಯರ್ ಗಾದೆಪ್ಪ ನುಡಿದರು. ಏನ್.ಟಿ.ಆರ್ ಜಯಂತಿ ಅಂಗವಾಗಿ ತುಂಗ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್, ಭೀಮನೇನಿ ಸಹೋದರರು, ಅಖಿಲ ಕರ್ನಾಟಕ ಎನ್. ಟಿ. ಆರ್ ಸೇವಾಸಮಿತಿ, ಅಭಿಮಾನಿಗಳ ಸಂಯುಕ್ತ ಆಶ್ರಯದಲ್ಲಿ ಜೋಳದರಾಶಿ ದೊಡ್ಡನಗೌಡ ರಂಗಂದಿರದಲ್ಲಿ ನಡದ ಸಾಂಸ್ಕ್ರತಿಕ ಸಂಜೆ 2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಂತರ ಎನ್. ಟಿ. ಆರ್, ರಾಜ್ ಕುಮಾರ್ ಚಿತ್ರದ ನೃತ್ಯಗಳು ಪ್ರೇಕ್ಷಕರನ್ನು ರಂಜಿಸಿದವು. ಅತಿಥಿ ಗಳನ್ನು ಸನ್ಮಾನಿಸಿದರು. ಕಲಾವಿದರಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ತುಂಗ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ಕಾರ್ಯದರ್ಶಿ ರಾಮಚಂದ್ರ, ಭೇಮನೆನಿ ಪ್ರಸಾದ್, ಭಾಸ್ಕರ್ ನಾಯುಡು , ಮಾಜಿ ಮೇಯರ್ ರಾಜೇಶ್ವರಿ, ಸೇವಾಸಮಿತಿ ಅಧ್ಯಕ್ಷ ಬಸವರಾಜು, ಕಂಠಮನೇನಿ ರಾಮು, ಕಲಾವಿದ ನಾಗಭೂಷಣ್, ಶ್ರೀಜ, ಸಿದ್ಧರಾಮ ಕಲ್ಮಠ, ಅಹಿರಾಜು, ಕಾಳಿದಾಸ, ಶ್ರೀನಿವಾಸ್ ರೆಡ್ಡಿ, ಗೌಡ, ಶ್ರೀನಿವಾಸ್, ವೆಂಕಟೇಶ್,ರಾಮಂಜಿನೆಯುಲು, ವೆಂಕಟರಮಣ, ನೇತಿ ರಘುರಾಮ್, ಪಂಪಾಪತಿ, ವೆಂಕಟೇಶ್ವರ ರಾವ್ ಕಿನ್ನೂರೇಶ್ವರ್,ರಾಧಾ ಕೃಷ್ಣ, ಪರಿಮಳ, ,ಶೇಷಗಿರಿ, ಅನಿತ, ಪ್ರಕಾಶ್, ಕಲಾವಿದರು, ಅಭಿಮಾನಿಗಳು ಮುಂತಾದವರು ಇದ್ದರು.
