Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಣದ ಜೊತೆಗೆ ಕೌಶಲ್ಯವು ಅವಶ್ಯಕ - ಬಿಇಓ ಬಸಣ್ಣವರ

ಜಮಖಂಡಿ;ಕೇವಲ ಶಿಕ್ಷಣದ ಪದವಿಗಳಿದ್ದರೇ ಸಾಲದು ಜೊತೆಗೆ ಕೌಶಲ್ಯವು ಅವಶ್ಯಕವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಪಠ್ಯದ ಜ್ಞಾನದ ಜೊತೆಗೆ ಕೌಶಲ್ಯ ವಿದ್ದವರು ಯಶಸ್ಸು ಪಡೆಯಲು ಸಾದ್ಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಹೇಳಿದರು. ನಗರದ ಅನ್ನಪೂರ್ಣೇಶ್ವರಿ ಹೊಟೆಲ್‌ನ ಸಭಾಭವನದಲ್ಲಿ ಚಿಲ್ಡ್ರನ್‌ ಆಫ್‌ಇಂಡಿಯಾ ಫೌಂಡೇಶನ್‌, ಚೈತನ್ಯ ಮಹಿಳಾ ಸಂಘ ಮುಧೋಳ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ದೇವದಾಸಿ ಮಹಿಳೆಯರು, ಮತ್ತು ಮಕ್ಕಳ ಸಮಸ್ಯೆಗಳು, ಪರಿಹಾರ ಎಂಭ ವಿಷಯದ ಮೇಲೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಜೊತೆಗೆ ಕೌಶಲ್ಯಕ್ಕೆ ಆದ್ಯತೆ ನೀಡಬೇಕು, ದೇವದಾಸಿ ಅನಿಷ್ಠ ಪದ್ಧತಿಯು ಸಂವಿಧಾನದ 16ನೇಯ ಆರ್ಟಿಕಲ್‌ ಪ್ರಕಾರ ಕಡ್ಡಾಯ ಶಿಕ್ಷಣದ ಹಕ್ಕು ಬಂದಾಗಿನಿಂದ ಕಡಿಮೆಯಾಗಿದೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಶಿಕ್ಷಣ ಕಡಿತಗೊಳಿಸಿದೆ ಎಂದು ಹೇಳಿದರು. ದೇವದಾಸಿ ಮಕ್ಕಳು ತಂದೆಯ ಹೆಸರು ಇರುವ ಜಾಗದಲ್ಲಿ ತಾಯಿಯ ಹೆಸರನ್ನು ನೋಂದಾಯಿಸ ಬಹುದಾಗಿದೆ. ದೇವದಾಸಿಯರ ಗಣತಿಯಲ್ಲಿ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು ಅಂದರೆ ಸರ್ಕಾರದ ಸೌಲತ್ತುಗಳನ್ನು ಪಡೆದು ಕೊಳ್ಳಬಹುದೆಂದು ಹೇಳಿದರು.ಚೈತನ್ಯ ಮಹಿಳಾ ಸಂಘದ ಅಧ್ಯಕ್ಷೆ ಮಧು ನಡುವಿನಮನಿ ಅವರು ಮಾತನಾಡಿ ಸಂಘದ ವತಿಯಿಂದ ದೇವದಾಸಿ ಮಹಿಳೆಯರ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಇದರಿಂದ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಿದೆ. ಕೌಶಲ್ಯಾಭಿವೃದ್ಧಿ ಪಡಿಸುವ ಶಿಬಿರಗಳನ್ನು, ತರಬತಿ ನೀಡುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಬಿ.ಜಿ.ಹಿರೇಮಠ ಮಾತನಾಡಿ 1984 ಹಾಗೂ 2007 ರಲ್ಲಿ ದೇವದಾಸಿಯರ ಸರ್ವೇ ನಡೆಸಲಾಗಿತ್ತು,ಪನ; ಸರ್ಕಾರ 2025 ಸಪ್ಟೆಂಬರ್‌ ನಿಂದ ಡಿಸೆಂಬರ ವರೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ಸರ್ವೆ ಕಾರ್ಯನಡೆಸುತ್ತಿದೆ. ತಾಲೂಕಿನಲ್ಲಿ 1574 ದೇವದಾಸಿಯರಿದ್ದು 1061 ಜನರ ಸರ್ವೇಕಾರ್ಯ ಮುಗಿದಿದೆ ಎಂದು ಮಾಹಿತಿ ನೀಡಿದರು. ಚೈತನ್ಯ ಮಹಿಳಾ ಸಂಘದ ರೇಖಾ ಗಾಡಿ ಮಾತನಾಡಿ ಸಂಘದ ಕಾರ್ಯವೈಖರಿಗಳನ್ನು ವಿವರಿಸಿದರು. ದೇವದಾಸಿಯರಿಗೆ ಬ್ಯಾಂಕ್‌ಗಳಲ್ಲಿ ಸಾಲಸೌಲಭ್ಯ, ವಸತಿ ಯೋಜನೆಯ ಅಡಿ ನಿವೇಶನ ಮಂಜೂರಾತಿ, ಜಮಿನು ಹಾಗೂ ಮನೆಗಳ ನವಿಕರಣಕ್ಕೆ ಸರ್ಕಾರದಿಂದ ಆರ್ಥಿಕ ಸಹಾಯ, 2ಸಾವಿರ ಇರುವ ಪಿಂಚಣಿಯನ್ನು 5 ಸಾವಿರಕ್ಕೆ ಹೆಚ್ಚಿಸಬೇಕು ಸರ್ಕಾರಿ ನೌಕರಿಗಳಲ್ಲಿ ರಿಜರ್ವೇಶನ್‌ ನೀಡುವ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಪತ್ರಕರ್ತ ಮಲ್ಲಪ್ಪ ಆಳಗಿ, ಮೋಹನ್‌ ಸಾವಂತ, ಸಮಾಜ ಕಲ್ಯಾಣ ಇಲಾಖೆಯ ಎಸ್‌.ಜಿ.ಪತ್ತಾರ ವೇದಿಕೆಯಲ್ಲಿದ್ದರು. ಕು.ಸ್ವಪ್ನಾಪ್ರಾರ್ಥನೆ, ಕು. ಸುಶ್ಮಿತಾ ಸ್ವಾಗತ ಹಾಗೂ ಕುಮಾರಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ರೇಖಾ ಗಾಡಿ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ