Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಕಲ ಭಕ್ತರನ್ನು ಉದ್ದರಿಸುವ ಆದಿ ಶಕ್ತಿ ಜಗನ್ಮಾತೆ ದುರ್ಗಾ ದೇವಿ : ಯಲ್ಲನಗೌಡ ಪಾಟೀಲ

ಮಹಾಲಿಂಗಪುರ 19:- ಹಿಂದೂಗಳ ಆರಾಧ್ಯ ದೇವಿ ಜಗನ್ಮಾತೆ ದುರ್ಗಾದೇವಿ ಅನೇಕ ಹೆಸರುಗಳಿಂದ ಪೂಜಿಸಲ್ಪಡುತ್ತಾಳೆ. ಉತ್ತರ ಭಾರತದಲ್ಲಿ ದುರ್ಗೆಯನ್ನು ಹೆಚ್ಚಾಗಿ ಪ್ರಾರ್ಥಿಸುತ್ತಾರೆ. ಹಿಂದೂ ದೇವಾನು ದೇವತೆಗಳಲ್ಲಿ ಅತ್ಯಂತ ಶಕ್ತಿಶಾಲಿ ಉಗ್ರವಾತಾರರಿ ಸ್ವರೂಪಳು ದುಷ್ಟ ರಾಕ್ಷಸ ಶಕ್ತಿಗಳನ್ನು ಸಂಹರಿಸಲು ಲೋಕಕಲ್ಯಾಣಕ್ಕಾಗಿ ಅವತಾರವೇತ್ತ ದೇವಿ ದೇವತೆಯನ್ನು ಯುದ್ಧದ ದೇವತೆ, ಶಕ್ತಿ ದೇವಿ, ಉಗ್ರ ಸ್ವರೂಪಿಣಿಯಾಗಿ ಪೂಜಿಸುತ್ತಾರೆ. ನಂಬಿದ ಭಕ್ತರಿಗೆ ಸಕಲ ಕರುಣಿಸುವ ಕರುಣಾಮಯಿ ತಾಯಿ ಸಕಲ ಮತ್ತೊದಾರಕಿಯಾಗಿದ್ದಾಳೆ. ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.
ಸ್ಥಳೀಯ ದುರ್ಗಾದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಗೆ ಪೂಜೆ ನೆರವೇರಿಸಿ ಮಾತನಾಡಿ ಧಾರ್ಮಿಕ ಮತ್ತು ಆಧ್ಯಾತ್ಮದ ನಾಡು ಭಾವಕತೆ ಬಿಡು ಶಾಂತಿಯ ತವರು ಮಹಾಮಹಿಮಾ ಪುರು? ಮಹಾಲಿಂಗೇಶ್ವರರ ತಪೋ ಭೂಮಿ ಮಹಾಲಿಂಗಪುರದ ದುರ್ಗಾದೇವಿಯ ಜಾತ್ರೆ ನಗರದ ಸರ್ವತೋಮುಖ ಅಭಿವೃದ್ಧಿಗೆ ತಾಯಿ ದುರ್ಗಾ ಮಾತೆ ಕೃಪೆ ತೋರುತ್ತಾಳೆ ಎಂದರು.
ನಂತರ ಮಾತನಾಡಿದ ಸಮಾಜದ ಮುಖಂಡರಾದ ಅರ್ಜುನ ಆನೇಪ್ಪಗೋಳ ಶ್ರೀ ಪರಬ್ರಹ್ಮರೂಪಿಣಿಯಾದ ಅಧಿಪರಾಶಕ್ತಿ ಶಾಕ್ತೇಯರ ಪರಬ್ರಹ್ಮ. ಶಕ್ತಿ ದೇವತೆ ಇವಳಿಲ್ಲದೆ ಎಲ್ಲವು ಚೈತನ್ಯಶೂನ್ಯ, ಜಡವಾಗಿ ಪರಿಣಮಿಸುತ್ತದೆ. ಇವಳಿಂದಲೇ ಹರಿಹರ ಬ್ರಹ್ಮರು ಉದಯ್. ಇವಳಿಂದಲೇ ಸೃಷ್ಠಿಯ ಅಂತ್ಯ. ಸೃಷ್ಠಿಯ ಆದಿಯಲ್ಲಿ ಉದಯಿಸಿದ ಇವಳನ್ನು ಆದಿಶಕ್ತಿ ಎಂದರೆ, ಪರಬ್ರಹ್ಮರೂಪಿಯಾಗಿ ಎಲ್ಲರಲ್ಲೂ ಚೈತನ್ಯಕಾರಕಳಾದ ಕಾರಣ ಪರಾಶಕ್ತಿ. ಶಕ್ತಿಯಿಲ್ಲದೆ ಎಲ್ಲವೂ ಜಡ, ಪ್ರತಿಯೊಂದು ಕಾರ್ಯದ ಕಾರಣವೂ ಶಕ್ತಿಯೇ ಬ್ರಹ್ಮನ ಸೃಷ್ಠಿ, ಹರಿಯ ಪಾಲನೆ, ಹರನ ಸಂಹಾರ ಈ ಎಲ್ಲವೂ ಶಕ್ತಿಯಿಂದಲೇ ನಡೆಯುವುದು ಮತ್ತು ಇವಳನ್ನೇ ದುರ್ಗಾ ಎಂದು ಕರೆಯುವುದು. ಇವಳನ್ನೇ ಪರಮೇಶ್ವರಿ, ಪರಶಿವೆ, ಮಹಾಮಾಯಾ, ಆದಿಮಾಯೇ, ಯೋಗನಿದ್ರಾ ನವ ಅವತಾರ ತಾಳಿ ನವದುರ್ಗೆ ಇನ್ನು ಅನೇಕ ಹೆಸರುಗಳಿಂದ ಇಡೀ ವಿಶ್ವದಾದ್ಯಂತ ಪೂಜಿಸಲ್ಪಡುತ್ತಾಳೆ ಮಹಾತಾಯಿ . ಜಾತ್ರೆ ಕಾರ್ಯ ನೆರವೇರಿದ್ದು ಅತ್ಯಂತ ಶ್ಲಾಘನಿಯವಾದುದು ದುರ್ಗಾದೇವಿ ಸಕಲವನ್ನೂ ಕರುಣಿಸಲಿ ಎಂದು ಹಾರೈಸಿದರು.
ದೇವಿ ಮೂರ್ತಿಗೆ ಶುಕ್ರವಾರ ಮುಂಜಾನೆ ವಿಶೇ? ಹೂವಿನ ಅಲಂಕಾರ ಹೋಮ್, ಹವನ, ಪಂಚ ಧಾನ್ಯ, ಪಂಚ ಪು?, ಪಂಚ ತೀರ್ಥಗಳಿಂದ ವಿಶೇ? ಪೂಜೆ ನೆರವೇರಿಸಿ ನಂತರ ಮಧ್ಯಾಹ್ನ ಮಹಾಮಂಗಳಾರತಿ, ಜರುಗಿ ಮಹಾಪ್ರಸಾದದೊಂದಿಗೆ ಜಾತ್ರೆ ಸಂಪನ್ನವಾಯಿತು.
ತೆರವು ಅರ್ಪಣೆ : ಆದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ ತೇರವು ಅರ್ಪಣೆ. ಶ್ರೀ ದುರ್ಗಾದೇವಿ ಜಾತ್ರೆ ನಿಮಿತ್ಯ ನಗರದ ಎಲ್ಲ ಹನುಮಾನ ಮಂದಿರಗಳಿಗೆ ಬ್ರಹತ್ ಚಪ್ಪಲಿ (ತೇರವು) ಗಳನ್ನು ಸಂಪ್ರದಾಯದಂತೆ ಹಲಗೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಹೋಗಿ ಅರ್ಪಿಸಿ ಮಾರುತಿ ಕೃಫೆಗೆ ಪಾತ್ರರಾದರು.
ಇಂದಿನ ಕಾರ್ಯಕ್ರಮದಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರು. ಮುಖಂಡರಾದ ಮಹಾಂತೇಶ ಹಿಟ್ಟಿನಮಠ, ಶೇಖರ ಅಂಗಡಿ, ವೆಂಕಣ್ಣ ಗುಂಡಾ, ಅಶೋಕಗೌಡ ಪಾಟೀಲ, ಶಂಕರಗೌಡ ಪಾಟೀಲ,ಮಹಾಲಿಂಗಪ್ಪ ಕೋಳಿಗುಡ್ಡ, ಮಹಾಲಿಂಗ ಕುಳ್ಳೊಳ್ಳಿ, ಮಹಾಲಿಂಗಪ್ಪ ಲಾತುರ,ಭೀಮಶಿ ಗೌಂಡಿ, ಶಿವಬಸು ಗೌಂಡಿ, ನಾಗಪ್ಪ ಗೌಂಡಿ, ಪ್ರಲ್ದಾದ ಉತ್ತೂರ, ಪ್ರಶಾಂತ್ ಮುಖೇನ್ನವರ, ಲಕ್ಷ್ಮಣ ಮಾಂಗ, ಅರ್ಜುನ್ ದೊಡಮನಿ, ರವಿ ಹಲಸಪ್ಪಗೋಳ, ಪುಂಡಲೀಕ ಮಿಲಟರಿ, ಮಾನಿಂಗಪ್ಪ ಸಣದಿ, ರವಿಗೌಡ ಪಾಟೀಲ, ರಾಜು ಚಮಕೇರಿ, ಸುನಿಲಗೌಡ ಪಾಟೀಲ, ವಿಜುಗೌಡ ಪಾಟೀಲ, ಹಣಮಂತ ಬುರುಡ,ಶಿವಾಜಿ ಪತ್ತಾರ, ಮಂಜು ಪತ್ತಾರ ಸೇರಿ ಹಲವರು ಉಪಸ್ಥಿತರಿದ್ದರು.ಈ ಸಂಧರ್ಭದಲ್ಲಿ ಗಣ್ಯಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ