ಮುಗಳಖೋಡ (5) ಸಂಪ್ರದಾಯದಂತೆ ಪ್ರತಿ ವರ್ಷದಂತೆ ಸುಕ್ಷೇತ್ರ ಮುಗಳಖೋಡ ಪಟ್ಟಣದಲ್ಲಿ ಮಳೆ ಬೆಳೆಯಿಂದ ಸುಖ ಸಮೃದ್ಧಿಹೊಂದಿ ಆರೊಗ್ಯಯುತ ಜೀವನ ಕಳೆಯಲು ಎಪ್ರಿಲ್ 24 ರಿಂದ ಮೇ 8 ರವರೆಗೆ ದೇವತೆಗಳ ಹೆಸರಿನಲ್ಲಿ ವೃತಾಚರಣೆ ನಿಮಿತ್ಯ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಮಾಡಿ ಶ್ರೀ ಗಜಾನನ ವೃತ್ತದ ಗಜಾನನ ಮಂದಿರದ ಆವರಣದಲ್ಲಿ ಪಟ್ಟಣದ ಹಾಗೂ ಸುತ್ತಲಿನ ಗ್ರಾಮದ ಭಜನಾ ಕಲಾವಿದರಿಂದ ಭಕ್ತಿಯ ತತ್ವ ಪದಗಳ ಭಜನೆ ಕಾರ್ಯಕ್ರಮ ಆಯೋಜಿಸಿದ್ದು ಈ ಸಂದರ್ಭದಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ ಕ್ಷೇತ್ರದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅಂಬಲಿ ಪ್ರಸಾದ ಸೇವೆ ವ್ಯವಸ್ಥೆ ಕಲ್ಪಿಸಲಾಗಿದೆ, ಶುಕ್ರವಾರ 8 ರಂದು ಬೆಳಿಗ್ಗೆ ಎಲ್ಲ ದೇವಮಂದಿರಗಳಲ್ಲಿ ಅಭಿಷೇಕ ಮಂತ್ರ ಘೋಷಣೆ ಯೊಂದಿಗೆ ಪೂಜೆ ನೈವೇದ್ಯ ಅರ್ಪಿಸಿ ವಾರದ ವೃತಾಚರಣೆ ಸಂಪನ್ನಗೊಳ್ಳುವುದು ಪಟ್ಟಣದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿ ಎಂದು ವೃತಾಚರಣೆ ವ್ಯವಸ್ಥಾಪಕ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .