Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಾ. ಪ್ರಭಾಕರ ಬ. ಕೋರೆಯವರ 77 ನೇ ಹುಟ್ಟುಹಬ್ಬ: ಅರ್ಥಪೂರ್ಣವಾಗಿ ಆಚರಣೆ

ಮತ್ತಿಕೊಪ್ಪ: ಡಾ. ಪ್ರಭಾಕರ ಬ. ಕೋರೆಯವರ ೭೭ ನೇ ಹುಟ್ಟುಹಬ್ಬದ ನಿಮಿತ್ಯ ಕೆವಿಕೆಗಳ ಸುವರ್ಣ ಮಹೋತ್ಸವದ ಜ್ಯೋತಿ ಆಗಮನ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಬ. ಕೋರೆಯವರ ೭೭ ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಡಾ. ಪ್ರಭಾಕರ ಬ. ಕೋರೆಯವರ ಜನ್ಮದಿನದ ನಿಮಿತ್ಯ ಕೃಷಿ ವಿಜ್ಞಾನ ಕೇಂದ್ರಗಳ ಸುವರ್ಣ ಮಹೋತ್ಸವದ ಜ್ಯೋತಿಯನ್ನು ಕೆವಿಕೆ ಆವರಣದಲ್ಲಿ ಸ್ವಾಗತಿಸಲಾಯಿತು. ಕೆವಿಕೆಗಳ ಸುವರ್ಣ ಮಹೋತ್ಸವದ ಜ್ಯೋತಿಯನ್ನು ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶ್ರೀ. ಬಿ.ಆರ್. ಪಾಟೀಲ ಸ್ವೀಕರಿಸಿದರು. ನಂತರ, ಕೆವಿಕೆ ಪ್ರವೇಶ  ದ್ವಾರದಿಂದ ಆಡಳಿತ ಭವನದ ವರಗೆ ರೈತರು, ರೈತ ಮಹಿಳೆಯರು, ಕೃಷಿ ಸಖಿ, ಪಶು ಸಖಿ ಹಾಗೂ ಕೇಂದ್ರದ ವಿಜ್ಞಾನಿಗಳು ಭಾಗವಹಿಸಿ ಬೃಹತ್ ಮೆರಣಿಗೆಯಲ್ಲಿ ಕುಂಭ ಮತ್ತು ಡೊಳ್ಳು ವಾದ್ಯಗಳೊಂದಿಗೆ
ಜ್ಯೋತಿಯನ್ನು ತರಲಾಯಿತು.



ನಂತರ, ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರದ ಕಾರ್ಯಾಧ್ಯಕ್ಷ ಮಾತನಾಡಿ, ಅನ್ನದಾತರ ಹಾಗೂ ಕೃಷಿ ಕ್ಷೇತ್ರದ ಉನ್ನತಿಗೆ ಸದಾ ಶ್ರಮಿಸುತ್ತಾ ಬಂದಿರುವ ಡಾ. ಪ್ರಭಾಕರ ಬ. ಕೋರೆಯವರ ಮಾರ್ಗದರ್ಶನದಲ್ಲಿ ಕೃಷಿ ವಿಜ್ಞಾನ ಕೇಂದ್ರವು ಅಲ್ಪಾವಧಿಯಲ್ಲಿಯೇ ಅಪರಿಮಿತ ಸಾಧನೆ ಮಾಡಿ
ಯಶಸ್ವಿಯಾಗಿದೆ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ.

ಮಾನ್ಯರ ಮಾರ್ಗದರ್ಶನದಲ್ಲಿ ರೈತರಿಗೆ ಬೇಕಾದ ರಸಗೊಬ್ಬರಗಳು, ಕೀಟನಾಶಕ, ಕೃಷಿ ಸಾಮಗ್ರಿ, ಒಂದೇ ಸೂರಿನಡಿ ಯೋಗ್ಯ ದರದಲ್ಲಿ ಲಭ್ಯವಾಗಿಸುವ ದೃಷ್ಠಿಯಿಂದ ೨೦೨೦ ರಲ್ಲಿ ಕೆವಿಕೆ ಆವರಣದಲ್ಲಿ ಕಿಸಾನ್ ಬಜಾರ್ ತೆರೆಯಲಾಗಿದ್ದು ರೈತರಿಗೆ ಸೇವೆಯನ್ನು ಒದಗಿಸುತ್ತಿದೆ ಜೊತೆಗೆ, ಕೇಂದ್ರದಲ್ಲಿ ಮಾದರಿ ಹನಿ ನೀರಾವರಿ ಪದ್ಧತಿಯನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಂಡಿರುವುದು ಇವರ ರೈತ ಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.

ಕೆವಿಕೆಗಳ ಸುವರ್ಣ ಮಹೋತ್ಸವದ ಜ್ಯೋತಿಯ ಸ್ವೀಕಾರ ಸಮಾರಂಭದಲ್ಲಿ ಕೇಂದ್ರದ ಶ್ರೀಮತಿ. ಶ್ರೀದೇವಿ ಬಿ. ಅಂಗಡಿ, ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು, ಕೆವಿಕೆ, ಮತ್ತಿಕೊಪ್ಪ
ಪ್ರಾಸ್ತಾವಿಕವಾಗಿ ಮಾತನಾಡಿ, ಸುವರ್ಣ ಮಹೋತ್ಸವದ ಜ್ಯೋತಿಯನ್ನು ದೇಶದ ಎಲ್ಲ ಕೆವಿಕೆಗಳಿಗೆ ಸಂಚಾರ ಮಾಡುತ್ತದೆ. ಈ ಜ್ಯೋತಿಯು ಕೃಷಿ ವಿಜ್ಞಾನದ ಜ್ಞಾನ ಜ್ಯೋತಿಯಾಗಿ ರೈತರಿಗೆ ಮಾರ್ಗದರ್ಶನದ ಜಾಗೃತಿ ಮಾಡಿಸುವ ಸಂಕೇತವಾಗಿದೆ. ಇದು ಮೊದಲು ಕೇರಳದ ಇಡುಕ್ಕಿ ಯಿಂದ ಪ್ರಾರಂಭಗೊಂಡು ಮತ್ತಿಕೊಪ್ಪ ಮುಖಾಂತರ ತುಕ್ಕಾನಟ್ಟಿ ಕೆವಿಕೆಗೆ
ಹೋಗಿ ಮುಂದೆ ಕೇಂದ್ರದ ವಲಯ ಕಛೇರಿ, ಬೆಂಗಳೂರಿಗೆ ಸೇರುತ್ತದೆ ಎಂದು ತಿಳಿಸಿದರು.

ಮಾನ್ಯ ಡಾ. ಪ್ರಭಾಕರ ಬ. ಕೋರೆಯವರ ೭೭ ನೇ ಹುಟ್ಟುಹಬ್ಬದ ಭಾಗವಾಗಿ ಕೃಷಿ ಸಖಿ, ಪಶು ಸಖಿ ಹಾಗೂ ರೈತ ಮಹಿಳೆಯರಿಗೆ ತೃಣಧಾನ್ಯ ಮಿಶ್ರಿತ ಅಡುಗೆ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು ಹಾಗೂ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ  ಧಾರವಾಡ ಕೆವಿಕೆಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ.ಎಸ್. ಎನ್.
ಕಾಂಬ್ರೇಕರ್ ಹಾಗೂ ತಾಲೂಕು ಪಂಚಾಯತನ ಶ್ರೀ. ಮಹೇಶ ಭಜಂತ್ರಿ, ಕುಮಾರಿ ಭಾಗ್ಯ ಭಾಗವಹಿಸಿದ್ದರು. ಕೇಂದ್ರದ ವಿಜ್ಞಾನಿ ಎಸ್.ಎಂ. ವಾರದ ವರದಿ ಮಂಡಿಸಿದರು. ಇಡೀ ದಿನ ನಡೆದ ಕಾರ್ಯಕ್ರಮಗಳಲ್ಲಿ ೩೦೦ ಹೆಚ್ಚು ರೈತ, ರೈತ ಮಹಿಳೆಯರು ಹಾಗೂ ಕೃಷಿ ಸಖಿ ಮತ್ತು ಪಶು ಸಖಿಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ