Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಧರ್ಮಸ್ಥಳದ ವಿರುದ್ದ ಅಪಪ್ರಚಾರ ಮಾಡುವವರ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಕಾಗವಾಡ:ಧರ್ಮಸ್ಥಳ ವಿರುದ್ದ ಅಪಪ್ರಚಾರ ನಡೆಸುವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕಾಗವಾಡ ಪಟ್ಟಣದಲ್ಲಿ ಧರ್ಮಸ್ಥಳ ಭಕ್ತಾಭಿಮಾನ ಬಳಗದಿಂದ ಬೃಹತ್ ಪಾದಯಾತ್ರೆ ಜರುಗಿತು.


 ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶೇಡಬಾಳ ಗ್ರಾಮದಲ್ಲಿ ಪ್ರಾರಂಭವಾದ ಪಾದಯಾತ್ರೆಯು ಕಾಗವಾಡ ಪಟ್ಟಣದ ವಿವಿಧ ಗಲ್ಲಿಗಳಲ್ಲಿ ಸಂಚರಿಸಿ ಮಲ್ಲಿಕಾರ್ಜುನ ಮೈದಾನದಲ್ಲಿ ಎಲ್ಲ ಭಕ್ತರು ಸಮೂಹ ಜಮಾವಣೆಗೊಂಡಿತು.


 ಪ್ರತಿಭಟನಾನಿರತನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಶೀತಲ್ ಪಾಟೀಲ್,ಅನೇಕ ವರ್ಷಗಳಿಂದ ಧರ್ಮಸ್ಥಳದಲ್ಲಿ ಪುಣ್ಯಕಾರ್ಯಗಳನ್ನು ಮಾಡುತ್ತಾ ದೇಶದ ತುಂಬೆಲ್ಲ ಬಡಜನರ ಕಷ್ಟಕ್ಕೆ ಸಹಾಯ ಮಾಡುತ್ತಾ,ಎಲ್ಲ ವರ್ಗಗಳ ಶ್ರೆಯೋಭಿವೃದ್ದಿಗಾಗಿ ದುಡಿಯುತ್ತಿರುವ ಡಾ.ವಿರೇಂದ್ರ ಹೆಗಡೆ ಅವರಿಗೆ ಹಾಗೂ ಧರ್ನಸ್ಥಳದ ಹೆಸರು ಹಾಳು ಮಾಡಲು ಪೀತೂರಿ ಮಾಡುತ್ತಿರುವವರ ಮೇಲೆ ಹಾಗೂ ಸಮೀರ್,ಮಹೇಶ್ ಶೆಟ್ಟಿ ತಿಮರೊಡಿ,ಗಿರೀಶ ಮಟ್ಟನ್ನವರ,ಸಂತೋಷ ಶೆಟ್ಟಿ,ಜಯಂತ್ ಟಿ ಹಾಗೂ ಇವರ ಸಹಚರರ ಮೇಲೆ ಸೂಕ್ತ ತನಿಖೆ ಕೈಗೊಳ್ಳಬೆಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.


ನಂತರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ಸಂಜಯ ನಾಡಗೌಡಾ ಮಾತನಾಡಿ,ಅನೇಕ ಸಲ ಡಾ.ವಿರೇಂದ್ರ ಹೆಗ್ಗಡೆ ಮೇಲೆ ಇಂತಹ ಅಪವಾದಗಳು ಬಂದಿವೆ ಅಂತಹ ಎಲ್ಲ ಅಪವಾದದಿಂದ ಮುಕ್ತರಾಗಿದ್ದಾರೆ ಈ ಅಪವಾದಿಂದ ಕೂಡ ಮುಕ್ತರಾಗುತ್ತಾರೆ.ಶತ್ರುಗಳು ಮಾಡುತ್ತಿರುವ ಹುನ್ನಾರ ಫಲಿಸಲು ಸಾಧ್ಯವಿಲ್ಲ.ಸರ್ಕಾರವು ರಚಿಸಿದ ಎಸ್ಐಟಿಯಿಂದ ಸತ್ಯ ಹೊರಬರುತ್ತದೆ ಅವರು ಆರೋಪ ಮುಕ್ತರಾಗಿ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿದರು.


ಇದೆ ವೇಳೆ ತಹಶಿಲ್ದಾರ ರವೀಂದ್ರ ಹಾದಿಮನಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ,ಸಂಜಯ ಕುಚನೂರೆ,ಅಭಯ ಅಕಿವಾಟೆ,ಅರುಣ ಫರಾಂಡೆ,ವಿನಾಯಕ ಬಾಗಡೆ,ವಿಜಯಾ ಗಾರಗೆ,ಬಾನು ನದಾಫ್,ಶೈಲಜಾ ಗೌಂಡಾಜೆ ಮಾತನಾಡಿದರು.


ಈ ವೇಳೆ ಅಣ್ಣಾಸಾಬ ಪಾಟೀಲ್,ಅರುಣ ಗಾಣಿಗೇರ,

ಸಂಜಯ ತಳವಲ್ಕರ್,ಕಾಕಾ ಪಾಟೀಲ್,ಅರುಣ ಗಣೇಶವಾಡಿ,ಶ್ರೀಪಾಲ ಮುನವಳಿಈಶ್ವರ ಕಾಂಬಳೆ,ವಿನಾಯಕ ಚೌಗಲಾ,ದಾದಾ ಪಾಟೀಲ್,ದೀಪಕ ಪಾಟೀಲ್,ಪ್ರಕಾಶ ಔಗಲಾ,ಸಚಿನ್ ಕವಟಗೆ,ಚಿದಾನಂದ ಮಾಳಿ,ಅಮೀನ ಶೇಖ,ವಜ್ರಕುಮಾರ ಮಗದುಮ್,ಪ್ರಮೋದ ಹಸೂರೆ,ಮಹಾವೀರ ದೇಸಾಯಿ,ಮೆಹ್ರಾಬಾನು ಮನಗೂಳಿ,ಟಿ.ಕೆ ಧೋತರೆ ಸೇರಿದಂತೆ ಸಾವಿರಾರು ಭಕ್ತ ಸಮೂಹ ಪಾಲ್ಗೊಂಡಿದ್ದರು.


ಇದೆ ವೇಳೆ ಡಾ ವೀರೆಂದ್ರ ಹೇಗಡೆ ಪೋಟೋ ಜೋತೆಗೆ ನಮ್ಮ ಪೂಜ್ಯರು ನಮ್ಮ ಹೆಮ್ಮೆ ಎಂದು ನಾಮಫಲಕಗಳನ್ನು ಪ್ರದರ್ಶನ ಮಾಡಿದರು.ಪಾದಯಾತ್ರೆ ಮೆರವಣಿಗೆಯಲ್ಲಿ ಮಹಿಳೆಯರೂ ಅಪಪ್ರಚಾರ ಮಾಡುವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ