ಬಳ್ಳಾರಿ,ಮೇ.೦8: ಅಸುಂಡಿ ಗ್ರಾಮದಲ್ಲಿ ಂIಆSಔ ಮತ್ತು ಸಾರ್ವನಿಕರ ಶಿಕ್ಷಣ ಉಳಿಸಿ ಸಮಿತಿಯ ವತಿಯಿಂದ ಮಕ್ಕಳ ಶಿಬಿರವನ್ನು ಆಯೋಜಿಸಲಾಗಿತ್ತು
ಈ ಸಂಧರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಗುರಳ್ಳಿ ರಾಜ ಮಾತನಾಡುತ್ತಾ, ಇಂದು ಸಾಮಾಜಿಕವಾಗಿ , ಸಾಂಸ್ಕೃತಿಕವಾಗಿ ಮೌಲ್ಯಗಳ ಅಧಃಪತನ ವಾಗುತ್ತಿದೆ, ಇಂತಹ ಸಂಧರ್ಭದಲ್ಲಿ ಸಮಾಜದಲ್ಲಿ ಉನ್ನತಿ ನೀತಿ ಮತ್ತು ಸಂಸ್ಕೃತಿ ಬೆಳಸಲು ಮಹಾನ್ ವ್ಯಕ್ತಿಗಳ ಜೀವನ ಮತ್ತು ಹೋರಾಟಗಳನ್ನು ಮಕ್ಕಳ ನಡುವೆ ಹರಡಬೇಕಿದೆ ಮತ್ತು ಅವರೊಂದಿಗೆ ಬೆರೆತು, ಮೌಲ್ಯಗಳ ತುಂಬಲು ಪ್ರಯತ್ನಿಸಬೇಕು, ಮೊಬೈಲ್ ಗೀಳಿನಿಂದ ಹೊರತರಲು ಸಾಮಾಜಿಕ ವಾತಾವರಣ ಸಹ ಮುಕ್ಯ, ಹಾಗಾಗಿ ಪೋಷಕರು ಸಹ ಇದರ ಬಗ್ಗೆ ಗಮನ ಹಾಕಬೇಕು ಮತ್ತು ಮಕ್ಕಳನ್ನು ಮೌಲ್ಯಯುತ ವರನ್ನಾಗಿ ಬೆಳೆಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಶಿವು, ಬಸವ, ದಾವೂದ್, ಚರಣ್, ಶಂಕರ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.