Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾಂತ ಶಿವಯೋಗಿಗಳ 66 ನೇ ಜಾತ್ರಾ ಮಹೋತ್ಸವ

ಧಾರವಾಡ, ಏಪ್ರಿಲ್​ 22: ಧಾರವಾಡ ತಾಲೂಕಿನ ನರೇಂದ್ರ ಗ್ರಾಮದದಲ್ಲಿ ಜರುಗಲಿರುವ ಮಳೆಪ್ಪಜ್ಜ ಹಾಗೂ ಮೌನಯೋಗಿ ಮಹಾಂತ ಶಿವಯೋಗಿಗಳ ೬೬ ನೇ ಜಾತ್ರಾ ಮಹೋತ್ಸವದ ಅಂಗವಾಗಿ ಈ ಲೇಖನ.

ಮಹಾತಪಸ್ವಿ ನರೇಂದ್ರದ ಮಹಾಂತ ಶಿವಯೋಗಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮವು ಮೌನಯೋಗಿ, ಹಠಯೋಗಿಯೂ ಆದ ಮಹಾಂತ ಶಿವಯೋಗಿಗಳ ನೆಲೆಸಿದ ಪುಣ್ಯಕ್ಷೇತ್ರ. ಅವರ ಪವಾಡ, ಲೀಲೆಗಳು ಪ್ರಪಂಚಕ್ಕೆ ಪರಿಚಯವಾದ ತಾಣ.

ಬಾಗಲಕೋಟ ಬಳಿಯ ಶಿರೂರ ಗ್ರಾಮದ ಶಿಕ್ಷಕ ಚನಬಸಯ್ಯ ಮತ್ತು ಪತ್ನಿ ಗುರುಲಿಂಗಮ್ಮನವರ ಪುತ್ರರು. ಶಿಕ್ಷಕರಾಗಿದ್ದ ಚನಬಸಯ್ಯ ಸೇವೆ ಸಲ್ಲಿಸುತ್ತಿದ್ದ ಚಿಕ್ಕ ಅಲಗುಂಡಿಯಲ್ಲಿ ೧೯೧೮ ರ ಫೆ.೩ ರಂದು ಜನಿಸಿದ ಬಾಲಕ ಮಹಾಂತಯ್ಯ, ಮನೆಯಲ್ಲಿನ ಬಡತನದಿಂದ
ಬಾಗಲಕೋಟ ದೇಸಾಯರ ಮನೆಯಲ್ಲಿದ್ದು ಕಲಿಕೆ ಮುಂದುವರೆಸಿದರು.

ನಂತರ ಮುಲ್ಕಿ ಪರೀಕ್ಷೆಗೆ  ಬೆಳಗಾವಿಗೆ ಹೋಗಲು ಹಣ ಇಲ್ಲದ್ದರಿಂದ ತನಗೆ ಯಾರಾದರೂ ಹಣ ನೀಡಿಯಾರು ಎಂಬ ಕಾರಣದಿಂದ ಬಸವಣ್ಣನ ಗುಡಿಯ ಮುಂದೆ ಶಿರ್ಷಾಸನದಲ್ಲಿ ಇಪ್ಪತ್ತೊಂದು ದಿನಗಳು ನಿಂತವರು.

ಹಳ್ಳಿಗಾಡಿನ ಜನರ ಕಷ್ಟಗಳನ್ನು ಬಲು ಹತ್ತಿರದಿಂದ ಕಂಡಿದ್ದ ಮಹಾಂತರು, ಸರಕಾರದ ಸೌಲಭ್ಯಗಳನ್ನು ಒದಗಿಸಿಕೊಡುವುದು ಮಾತ್ರವಲ್ಲದೇ ಶಿಕ್ಷಣ ಮತ್ತು ಕಾಯಕದ ಮಹತ್ವವನ್ನು ಜನರಿಗೆ ತಿಳಿಸಕೊಟ್ಟರು.

ಬಳಿಕ ತಮ್ಮ ನೌಕರಿ ಬಿಟ್ಟು ತಂಗಡಗಿ ಗ್ರಾಮಕ್ಕೆ ಬಂದು ಅಲ್ಲಿಯೂ ನೆಲೆ ನಿಲ್ಲದೇ ಕೂಡಲ ಸಂಗಮಕ್ಕೆ ಬಂದು ಸಾಧನೆಯಲ್ಲಿ ತೊಡಗಿದರು.

ಅಲ್ಲಿಂದ ಮುಂದೆ ನವಲಗುಂದಕ್ಕೆ ಬಂದ ಮಹಾಂತಸ್ವಾಮೀಜಿ, ನಾಗಲಿಂಗನ ಸಮಾಧಿ ದರ್ಶನ, ನಂತರ ಯಲ್ಲಮ್ಮನಗುಡ್ಡಕ್ಕೆ ಹೋಗಿ ರೇಣುಕಾ ದೇವಿ ದರ್ಶನ ಬಳಿಕ ಸಮೀಪದ ಕರೀಕಟ್ಟಿ ಗ್ರಾಮಕ್ಕೆ ತೆರಳಿದರು.ಅಲ್ಲಿನ  ಹೊಲದಲ್ಲಿ ಮಹಾಲಿಂಗ ಹುದುಗಿ ಹೋಗಿದ್ದನ್ನು ತಮ್ಮ ದಿವ್ಯ ದೃಷ್ಠಿಯಿಂದ ಅರಿಕೆ ಮಾಡಿಕೊಟ್ಟರು.

ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಬಂದು ದರುಶನ ಪಡೆದು ಬಳಿಕ ನರೇಂದ್ರಕ್ಕೆ ಆಗಮಿಸಿದ ಮಹಾಂತಸ್ವಾಮೀಜಿ, ಗ್ರಾಮದಲ್ಲಿ ಮೂರು ದಿನಗಳ ಕಾಲ ಭಿಕ್ಷಾಟನೆ ನಡೆಸಿದರು. ಊರ ಮುಂದಿನ ಮುಳ್ಳು-ಕಂಟಿಗಳ ನಡುವೆ ಮುಸುಕು ಹಾಕಿಕೊಂಡಿದ್ದ ಮುರಿದು ಬಿದ್ದ ಶಿವಾಲಯ
ಕಂಡು, ಮಠದಲ್ಲಿನ ಮಳೆಪ್ಪಜ್ಜನ ಈಶ್ವರ ಮೂರ್ತಿ ಅಪ್ಪಿಕೊಂಡು ನಲಿದಾಡಿದರು.

ಅಂದೇ ತಮ್ಮ ಸಾಧನಾ ಕ್ಷೇತ್ರ ಇದೇ ಎಂದು ತೀರ್ಮಾನಿಸಿದರು. ಇದರಿಂದ ಸ್ಪೂರ್ತಿಗೊಂಡ ಮಹಾಂತಸ್ವಾಮೀಜಿ, ಮಠದ ಎದುರಿನ ಅರಳಿಮರದ ಕೆಳಗೆ ಬ್ರಹ್ಮಚರ್ಯ ಸಾಧನೆಗಾಗಿ ತಲೆ ಕೆಳಗಾಗಿ ನಿಂತರು. ಹೀಗೆ ಒಂಬತ್ತು ದಿನಗಳವರೆಗೆ ನಿಂತ ಸಂದರ್ಭದಲ್ಲೇ, ಮೂರು ತಿಂಗಳಿಂದ ಮಳೆ ಆಗಮನವನ್ನು ಕಾಯುತ್ತಿದ್ದ ಜನರು ಅರಳಿ ಮರದ ಹತ್ತಿರ ಸೇರಿದರು.ತಮ್ಮ ಗ್ರಾಮಕ್ಕೆ ಮಳೆ ಬರದಿರಲು ಈ
ಸ್ವಾಮಿಯೇ ಕಾರಣ ಎಂದು ಮಾತನಾಡಿಸಿದರು ಜೊತೆಗೆ ಹಳಿಯತೊಡಗಿದರು. ಆದರಿಂದ ಇದರಿಂದ ವಿಚಲಿತರಾಗದ ಸ್ವಾಮೀಜಿ ಕೈಸನ್ನೆ ಮೂಲಕ ಲೆಕ್ಕಣಿಕೆ ಮತ್ತು ಕಾಗದ ತರಿಸಿ, ಮುರಿದು ಬಿದ್ದ ಗುಡಿಯನ್ನು ಸೂರ್ಯೋದಯದ ಹೊತ್ತಿಗೆ ಜೀರ್ಣೋದ್ಧಾರ ಮಾಡಬೇಕು.

ಆಗ ಮಳೆ ಸುರಿದು ಜೀವನ ಸಮೃದ್ಧಿಯತ್ತ ಸಾಗಲಿದೆ ಎಂದರು.ಮೊದಲು ಹಿಂಜರಿದ ಜನರು, ನೋಡಿಯೇ ಬಿಡೋಣ ಎಂದು ಸೂರ್ಯೋದಯದೊಳಗೆ ಗುಡಿಯ ಜೀರ್ಣೋದ್ಧಾರ ಕಾರ್ಯ ಮಾಡಿ ಮುಗಿಸಿದರು. ಅದೇ ದಿನ ಸಂಜೆ ಧಾರಾಕಾರ ಸುರಿದಿದ್ದು ಅವರ ತಪೋಶಕ್ತಿಗೆ ಸಾಕ್ಷಿಯಾಯಿತು.

ಮಹಾಂತರ ಪವಾಡದಿಂದ ಆಶ್ಚರ್ಯಚಕಿತರಾದ ಗ್ರಾಮಸ್ಥರಿಗೆ ಅವರ ಮೇಲೆ ಭಕ್ತಿ-ಗೌರವಗಳು ಹೆಚ್ಚಾದವು. ನರೇಂದ್ರ ಮತ್ತು ಸುತ್ತಲಿನಗ್ರಾಮಗಳ ಜನರು ಸ್ವಾಮೀಜಿ ಕಡೆಗೆ ಬರಲಾರಂಭಿಸಿದರು. ಆಗ ಸ್ವಾಮೀಜಿ ಎಲ್ಲರೂ ಕೂಡಿ ಶಿವ ಭಜನೆ ಮಾಡಿರಿ,
ಮಳೆಪ್ಪಜ್ಜನು ನಿಮ್ಮೆಲ್ಲರಿಗೆ ಸುಖ-ಸಮೃದ್ಧಿ
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ