Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನು ಡಾ.ಅಂಬೇಡ್ಕರ್ ನೋಡಿ ಅರಿಯಬೇಕಿದೆ : ವಿಕ್ರಮ ಕರನಿಂಗ

ಸಂಕೇಶ್ವರ : ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡುವಲ್ಲಿ ಹಾಗೂ ಪ್ರಬುದ್ಧ ರಾಷ್ಟ್ರ ನಿರ್ಮಾಣದಲ್ಲಿ ಅಂಬೇಡ್ಕರ್ ಪಾತ್ರ ಅವಿಸ್ಮರಣೀಯವಾಗಿದ್ದು, ತಮ್ಮೆಲ್ಲರಿಗೂ ವಿದ್ಯಾಭ್ಯಾಸ, ಶಿಕ್ಷಣ ಓದು ಎಷ್ಟು ಮುಖ್ಯ ಎಂಬುದನ್ನು ಡಾ.ಅಂಬೇಡ್ಕರ್ ನೋಡಿ ಅರಿಯಬೇಕಿದೆ ಎಂದು ನ್ಯಾಯವಾದಿ ವಿಕ್ರಮ ಕರನಿಂಗ ಹೇಳಿದರು.

ಪಟ್ಟಣದ ಭೀಮನಗರದಲ್ಲಿನ ಗೌತಮ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿ.೫ ರಂದು ಡಾ! ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು
ನಡೆದಿದ್ದ ಪ್ರಬಂಧ ಸ್ಪರ್ಧೆಯಲ್ಲಿನ ವಿದ್ಯಾರ್ಥಿಗಳಿಗೆ ಭಾನುವಾರ ಪ್ರಶಸ್ತಿಯನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ! ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೩೫ ನೇ ಜಯಂತಿಯ ನಿಮಿತ್ತವಾಗಿ ಶ್ರೀಮತಿ ಗೋದಾಬಾಯಿ ಗೋವಿಂದ ಕರನಿಂಗ ಮೆಮೊರಿಯಲ್ ಫೌಂಡೇಷನ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ ಭೀಮ ನಗರ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಇಂದಿನ ಮಕ್ಕಳಿಗೆ ಅಂಬೇಡ್ಕರ್ ಅವರ ಹೋರಾಟದ ಜೀವನ, ಶಿಕ್ಷಣ, ಸಂಘಟನೆ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಲು ಈ ಪ್ರಬಂಧ ಸ್ಪರ್ಧೆ ನಡೆದಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಖುಷಿ ನೀಡಿದೆ ಎಂದರು.

ಎಸ್‌ಎಸ್‌ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರವೀಣ ಖಾತೆದಾರ ಇವರಿಂದ ಸತ್ಕರಿಸಲಾಯಿತು.

ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಲ್ಲಿನ ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಯಲ್ಲಿನ ವಿದ್ಯಾರ್ಥಿಗಳಿಗೆ ಪ್ರತೇಕವಾಗಿ ಬಹುಮಾನ ವಿತರಿಸಲಾಯಿತು ಪ್ರಥಮ ಬಹುಮಾನ ೩೦೦೧, ದ್ವೀತಿಯ ಬಹುಮಾನ ೨೦೦೧, ತೃತೀಯ ಬಹುಮಾನ ೧೦೦೧, ರೂ. ನಗದು ಮತ್ತು ಮೊಮೆಂಟೋವನ್ನು ಶ್ರೀಮತಿ ಗೋದಾಬಾಯಿ ಗೋವಿಂದ ಕರನಿಂಗ ಮೆಮೊರಿಯಲ್ ಫೌಂಡೇಷನ್ ಅವರಿಂದ ವಿತರಿಸಲಾಯಿತು.

ಪ್ರಾಥಮಿಕ ಶಾಲೆ ಕನ್ನಡ ವಿಭಾಗ : ರಿತೀಕಾ ಪ್ರಭಾಕರ ಪಾಟೀಲ, ಸಂಕೇಶ್ವರ, (ಪ್ರಥಮ ಬಹುಮಾನ) ಲಕ್ಷ್ಮೀ ಮನೋಜ ಬಸಟ್ಟಿ, ಸಂಕೇಶ್ವರ, (ದ್ವೀತಿಯ ಬಹುಮಾನ) ಅನನ್ಯಾ ಪ್ರಕಾಶ ಪೂರ್ವಿ, ಗಳತಗಾ, (ತೃತೀಯ ಬಹುಮಾನ)

ಪ್ರಾಥಮಿಕ ಶಾಲೆ ಇಂಗ್ಲಿಷ್ ವಿಭಾಗ : ಪೃಥ್ವಿ ಶಿವಪ್ಪಾ ಉರಬನಟ್ಟಿ, ಯರಗಟ್ಟಿ,(ಪ್ರಥಮ ಬಹುಮಾನ) ತನುಶ್ರೀ ರಾಜಶೇಖರ ಮಾರಿಹಾಳ, ಸಂಕೇಶ್ವರ (ದ್ವೀತಿಯ ಬಹುಮಾನ) ಅಪೇಕ್ಷಾ ಅಜೀತಕುಮಾರ ಉರಬನಟ್ಟಿ, ಹಿಡಕಲ್ ಡ್ಯಾಂ (ತೃತೀಯ ಬಹುಮಾನ)

ಪ್ರೌಢ ಶಾಲೆ ಕನ್ನಡ ವಿಭಾಗ : ವರ್ಷಿನಿ ಮಲ್ಲಿಕಾರ್ಜುನ ಮಗದುಮ್ಮ, ಯರಗಟ್ಟಿ (ಪ್ರಥಮ ಬಹುಮಾನ) ಶ್ರೀನಿಧಿ ಸಂಜು ಪೂಜಾರಿ (ದ್ವೀತಿಯ ಬಹುಮಾನ) ದೀಪಿಕಾ ಶಿವರುದ್ರ ಮಗದುಮ್ಮ , ನೇರಲಿ, (ತೃತೀಯ ಬಹುಮಾನ)

ಪ್ರೌಢ ಶಾಲೆ ಇಂಗ್ಲಿಷ್ ವಿಭಾಗ: ಅಭಿನವ ರಮೇಶ ನಡುಗೇರಿ, ಅಮ್ಮಣಗಿ (ಪ್ರಥಮ ಬಹುಮಾನ) ಸ್ಪೂರ್ತಿ ಸಂಜೀವಕುಮಾರ ತಳವಾರ ಸಂಕೇಶ್ವರ (ದ್ವೀತಿಯ ಬಹುಮಾನ) ಅವಜೀತ ಶ್ರೀಶೈಲ ಗಳತಗಿ (ತೃತೀಯ ಬಹುಮಾನ)

ಪ್ರೌಢ ಶಾಲಾ ಮರಾಠಿ ವಿಭಾಗ : ವಿಧಿಷಾ ನಾಮದೇವ ಪಾಟೀಲ ಸಂಕೇಶ್ವರ (ಪ್ರಥಮ ಬಹುಮಾನ) ಶ್ರಾವಣಿ ಸಚಿನ ಪಾಟೀಲ, ಸಂಕೇಶ್ವರ (ದ್ವೀತಿಯ ಬಹುಮಾನ) ವೀಣಾ ಬಾಲಕೃಷ್ಣ ಸುತಾರ ಸಂಕೇಶ್ವರ (ತೃತೀಯ ಬಹುಮಾನ) ತಮ್ಮದಾಗಿಸಿಕೊಂಡರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಅಧ್ಯಕ್ಷತೆಯನ್ನು ನಿಖಿಲ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ನಿಖಿಲ್ ನವೀನ ಗಂಗರೆಡ್ಡಿ, ಮುಖಂಡರಾದ ಪ್ರಮೋದ್ ಹೊಸಮನಿ, ಗಂಗಾರಾಮ ಭೂಸಗೋಳ, ಡಾ|| ಸುನಿಲ ಕಾಂಬಳೆ ಉಪನ್ಯಾಸಕರು, ಶಿಕ್ಷಕರಾದ ಭರತ್ ಪಾರ್ಥನಳ್ಳಿ, ಬಸವಂತ ಸತ್ಯನಾಯಕ, ಮಂಜುನಾಥ ಸತ್ಯನಾಯಿಕ, ರಾಜು ಸತ್ಯನಾಯಕ, ಪ್ರವೀಣ ಮಾಳಗೆ, ಕಿರಣ ಕಾಂಬಳೆ, ನಾಗರಾಜ ಕರನಿಂಗ, ವಿನಾಯಕ ಮಳನಾಯಿಕ ಸೇರಿದಂತೆ ಅನೇಕರು ಹಾಜರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ