Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಡಚಣ ತಾಲೂಕಿನ ರೈತರಿಗೆ ಕೆ. ಬಿ. ಜೆ. ಎನ್. ಎಲ್ ಅಧಿಕಾರಿಗಳು ಮಲತಾಯಿ ದೋರಣೆ ಮಾಡುತ್ತಿದ್ದಾರೆ : ಬಿರಾದಾರ

ಝಳಕಿ : ಚಡಚಣ ತಾಲೂಕಿನ ರೈತರಿಗೆ ಕೆ. ಬಿ. ಜೆ. ಎನ್. ಎಲ್ ಅಧಿಕಾರಿಗಳು ಮಲತಾಯಿ ದೋರಣೆ ಮಾಡುತ್ತಿದ್ದಾರೆ, ನಮ್ಮ ರೈತರು, ಜಾನುವಾರುಗಳಿಗೆ, ಜಮೀನುಗಳಿಗೆ ನೀರಿಲ್ಲದೆ ಗೊಳಾಡಿದರು ೨೩ - ಝಳಕಿ : ನಾಗಠಾಣ ಕ್ಷೇತ್ರದ ೩೫ ರಿಂದ ೪೬ರ ಡಿಸ್ಟ್ರಿಬ್ಯೂಟರ್ ಕಾಲುವೆಗೆ ನೀರು ಹಾರೈಸುವಂತೆ ಅಗ್ರಹಿಸಿ ರೈತರಿಂದ ರೈತರ ಕೂಗಿಗೆ ಸ್ಪಂದನೆ ಕೊಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರು ನಾಗನಾಥ ಬಿರಾದಾರ ಮಾತನಾಡಿದರು.
ನಾಗಠಾಣ ಕ್ಷೇತ್ರದ ೩೫ ರಿಂದ ೪೬ರ ಡಿಸ್ಟ್ರಿಬ್ಯೂಟರ್ ಕಾಲುವೆಗೆ ನೀರು ಹಾರೈಸುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಸದಸ್ಯರು ಮತ್ತು ಚಡಚಣ ತಾಲೂಕಾ ರೈತರಿಂದ ಝಳಕಿ ಕಾರ್ಯ ಪಾಲಕ ಅಭಿಯಂತರರು ಕೃ? ಭಾಗ್ಯ ಜಲ ನಿಗಮ ನಿಯಮಿತ ಕಚೇರಿ ಎದುರಿಗೆ ರೈತರಿಂದ ಬೃಹತ ಹೋರಾಟ ಹಮ್ಮಿಕೊಳ್ಳಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ವಿಜಯಪುರ ಜಿಲ್ಲಾ ಅಧ್ಯಕ್ಷರು ಸಂಗಮೇಶ ಸಗರ ಮಾತನಾಡಿ, ರೈತರಿಗೆ ಸರಿಯಾದ ನೀರು ಪೋರೈಕೆ ಮಾಡಬೇಕು, ಇಲ್ಲವಾದಲ್ಲಿ ನಾಳೆ ಮತ್ತೆ ಜನ, ಜಾನುವಾರುಗಳನ್ನು ತಂದು ಉಗ್ರ ಹೋರಾಟ ಮಾಡಲಾಗುವುದು ಎಂದರು.
ಅಧಿಕ್ಷಿತ ಅಭಿಯಂತರರು ಮನೋಜಕುಮಾರ ಗಡಬಳೆ ಮಾತನಾಡಿ, ಕುಡಿಯುವ ನೀರಿನ ಅಭಾವವಿದ್ದು, ಶುದ್ಧ ಘಟಕ ಮತ್ತು ಕೆರೆಗಳಿಗೆ ನೀರನ್ನು ತುಂಬಿಸಿ ನಂತರ ಕಾಲುವೆಗಳಿಗೆ ನೀರು ಹಾರೈಸುವಂತೆ ಆದೇಶವಿದ್ದು, ನಾವು ಅದನ್ನು ಪಾಲಿಸಬೇಕಾಗುತ್ತದೆ, ನಾನು ಯಾವ ರೈತರಿಗೂ ಅಸಹ್ಯ ಮಾತನಾಡಿಲ್ಲ, ಆದರೂಕೂಡ ನಾನು ರೈತರಲ್ಲಿ ಕ್ಷಮಾಪಣೆ ಕೇಳುತ್ತೇನೆ ಎಂದರು.
ದಯಾನಂದ ಕೋಳಿ ಮಾತನಾಡಿ ಸರ್ಕಾರ ನೀಡಿರುವ ಆದೇಶ ಪ್ರತಿ ನಮಗೆ ಕೊಡಿ, ರೈತರೆಂದರೆ ಮರ್ಯಾದೆ ಕೊಡದ ಅಧಿಕಾರಿಗಳಿಗೆ ಧಿಕ್ಕಾರ, ರೈತ ದೇಶದ ಬೆನ್ನೆಲಬು ಎಂದು ಭಾ?ಣ ಬಿಗಿಯುತ್ತೀರಿ, ರೈತರು ಕಚೇರಿಗೆ ಬಂದರೆ ಅಸಭ್ಯ ವರ್ತನೆ ಮಾಡುತ್ತೀರಿ, ನಾವುಗಳು ನಮಗೆ ನ್ಯಾಯ ಸಿಗುವ ವರೆಗೂ ಇಲ್ಲಿಂದ ಕಾಡೋಳಿದಿಲ್ಲ ಎಂದು ಘೋ?ಣೆ ಕೂಗಿದರು.
ಕಚೇರಿ ಎದುರಲ್ಲಿ ರೈತರೇ ಸ್ವತಃ ಅಡುಗೆ ಮಾಡಿ, ಕಚೇರಿ ಎದುರು ನೆಲದ ಮೇಲೆ ಕುಳಿತು ಉಪಹಾರ ಮಾಡಿ, ಮತ್ತೆ ಹೋರಾಟ ಮುಂದೆ ವರೆಸಿದರು.
ಇಂಡಿ ತಹಸೀಲ್ದಾರ ವಿಜಯ ಕಡಕಭಾವಿ ಮತ್ತು ಚಡಚಣ ತಹಸೀಲ್ದಾರ ಸಂಜಯ ಇಂಗಳೆ, ಝಳಕಿ ಠಾಣಾ ಅಧಿಕಾರಿಗಳು ಮಂಜುನಾಥ್ ತೀರಕನ್ನವರ ಮಧ್ಯಸ್ತಿಕೆ ವಹಿಸಿ, ರೈತರಿಗೆ ಅಸ್ವಾಸನೆ ನೀಡಿ, ಜಿಲ್ಲಾಧಿಕಾರಿಗಳೊಂದಿಗೆ ನೇರವಾಗಿ ಸಂದರ್ಶನ ನಡೆಸಿ ನೀರು ಪೋರೈಕೆ ಮಾಡಲಾಗುವದು ಎಂದು ತಿಳಿಸಿದರು ರೈತರು ಹೋರಾಟ ಅಂತ್ಯ ಗೊಳಿಸಿ ಅಧಿಕಾರಿಗಳೊಂದಿಗೆ ಸ್ಪಂದಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮತ್ತು ಹಸಿರು ಸೇನೆ ವಿಜಯಪುರ ಜಿಲ್ಲಾ ಅಧ್ಯಕ್ಷರು ಸಂಗಮೇಶ ಸಗರ, ದಯಾನಂದ ಕೋಳಿ, ವಸಂತ ಭೈರಾಮಡಿ, ಗುರುನಾಥ ಬಗಲಿ, ಎಮ್.ಎಚ್. ಪೂಜಾರಿ, ಖಾಜೀಸಾಬ ಗುರುನಾಳ, ರಾಜುಗೌಡ ಪಾಟೀಲ, ದಸ್ತಗೀರ ವಾಲಿಕಾರ, ಅಣ್ಣಾರಾಯ ಶಿರನಾಳ, ಸತೀಶ ತಳಕೇರಿ, ದಾನೇಶ್ ತಳಕೇರಿ, ಅಶೋಕ್ ಜಿತ್ತಿ, ಸೋಮನಾಥ ಮದಭಾವಿ, ಭೀಮಾಶಂಕರ್ ರಗಟೆ, ಸದಾಶಿವ ತೇಲಿ, ಸುರೇಶ ಮಾಳಾಬಾಗಿ, ಲಕ್ಷ್ಮಣ ಬೆಳ್ಳಿ, ಸಂತೋ? ಘೋಡಕೆ, ಖಾಜಾಮಿಯಾ ಪಿರಜಾದೆ, ಮಹೇಶ ವಗ್ಗಿ, ಲೋಣಿ (ಬಿಕೆ ), ಬರಡೋಲ, ಏಳಗಿ, ಹಲಸಂಗಿ, ಹತ್ತಳ್ಳಿ, ಹಾವಿನಾಳ, ಮಣನಂಕಲಗಿ, ಮರಗುರ, ತದ್ದೇವಾಡಿ, ಗೋಡಿಹಾಳ, ಉಮರಾಣಿ ಗ್ರಾಮದ ರೈತರು ಉಪಸ್ಥಿತರಿದ್ದರು.

 

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ