Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾರ್ಯನೀರತ ಪತ್ರಕರ್ತರ ಸಂಘದ ಚುನಾವಣೆ : ಅಶೋಕ ಯಡಳ್ಳಿ ಮತಯಾಚನೆ

ಇಂಡಿ: ಕರ್ನಾಟಕ ಕಾರ್ಯನೀರತ ಪತ್ರಕರ್ತರ ಸಂಘ ರಿ.ಬೆಂಗಳೂರು ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಇದೇ.ನ ೯ರಂದು ಜರುಗಲಿರುವ ಚುನಾವಣೆ ಪ್ರಚಾರಾರ್ಥವಾಗಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಟಿವಿ೯ ವಿಜಯಪುರ ಜಿಲ್ಲಾ ವರದಿಗಾರ ಅಶೋಕ ಯಡಳ್ಳಿ ಅವರು ಜಿಲ್ಲಾ ಪತ್ರಿಕಾ ಮಿತ್ರರೊಂದಿಗೆ ಪಟ್ಟಣದ ನೌಕರರ ಸಭಾ ಭವಭನದಲ್ಲಿ ಇಂಡಿ ಕಾನಿಪ ಸಂಘದ ಸರ್ವ ಸದಸ್ಯರು ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಅಶೋಕ ಯಡಳ್ಳಿ ಮತಯಾಚನೆ ಮಾಡಿ ಮಾತನಾಡಿ ಈಗಾಗಲೆ ಪತ್ರಕರ್ತರ ನೊವು ನಲಿವುಗಳ ಬಗ್ಗೆ ನನಗೆ ಸಂಪೂರ್ಣ ಪರಿಜ್ಞಾನವಿದ್ದು ಅವರ ಕಷ್ಟು ಸುಖಗಳಿಗೆ ಸ್ಪಂದಿಸುತ್ತಾ ಬಂದಿದ್ದೆನೆ. ಹಾಗೆ ನಮ್ಮ ಸಂಘದ ಎಳಿಗೆಗಾಗಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಅವುಗಳನ್ನು ಕಾರ್ಯ ರೂಪಕ್ಕೆ ತರಬೇಕು ಎಂಬ ಚಿಂತನೆ ಇದೆ. ಗ್ರಾಮಿಣ ಭಾಗ ಪತ್ರಿಕಾ ಮಿತ್ರರೊಂದಿಗೆ ನಿಕಟ ಸಂಪರ್ಕದಲ್ಲಿದ್ದುಕೊಂಡು ನಿಮ್ಮ ಆಗು ಹೊಗುಗಳ ಬಗ್ಗೆ ನಮ್ಮ ಸಂಘದಲ್ಲಿ ಚರ್ಚಿಸುಚ ಮೂಲಕ ಕಾರ್ಯ ರೂಪಕ್ಕೆ ತರಲು ಎಲ್ಲರೊಂದಿಗೆ ಒಟ್ಟಾಗಿ ಶ್ರಮಿಸುತ್ತೆವೆ. ಆದ್ದರಿಂದ ತಾವು ನನಗೆ ಮತ ನೀಡುವ ಮೂಲಕ ಅವಕಾಶ ಮಾಡಿ ಕೊಡಬೇಕು ಎಂದು ಮನಿ ಮಾಡಿ ಮತಯಾಚನೆ ಮಾಡಿದರು.
ಮಾಜಿ ಕಾನಿಪ ಸಂಘದ ಅಧ್ಯಕ್ಷರಾದ ಶರಣು ಮಸಳಿ, ರಾಜು ಕೊಂಡಗೂಳಿ ಹಾಗೂ ಇಂದು ಶೇಖರ ಮಣ್ಣೂರ, ಶಶಿಕಾಂತ ಮೇಂಡೆಗಾರ, ದೇವೆಂದ್ರ ಹೇಳವರ. ಯು.ಟಿ.ಕೋಳೆಕರ ಮುಂತಾದವರು ಮಾತನಾಡಿ ಕಾನಿಪ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಶೋಕ ಯಡಳ್ಳಿ ಪರವಾಗಿ ಮತಯಾಚಿಸಿ ಕಳೇದ ಸುಮಾರು ೧೮ ವರ್ಷಗಳ ಕಾಲ ವಿಜಯಪುರ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು ನಮ್ಮ ಸಂಘದ ಎಳಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೆ ಇಲ್ಲಿಯವರೆಗೆ ಸಂಘದ ಯಾವುದೆ ಚುನಾವಣೆಯಗಳಲ್ಲಿ ನಿಲ್ಲದೆ ಇದ್ದರು ಸಹ ಸಕ್ರಿಯವಾಗಿ ನಮ್ಮ ಸಂಘದ ಚುನಾವಣೆಗಳಲ್ಲಿ ಎಲ್ಲರ ಜೊತೆ ಬೆರೆತು ಬೆಂಬಲ ನೀಡುತ್ತಾ ಬಂದಿದ್ದಾರೆ. ಹಾಗಾಗಿ ಇವರನ್ನು ಈ ಬಾರಿ ಕಾನಿಪ ಸಂಘದ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಸದಾಶಯದಿಂದ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿದೆ. ಆದ್ದರಿಂದ ಎಲ್ಲ ನಮ್ಮ ಕಾನಿಪ ಸಂಘದ ಸರ್ವ ಸದಸ್ಯರು ಅಶೋಕ ಯಡಳ್ಳಿಯವರಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ರಾಜಕುಮಾರ ಚಾಬುಕಸವಾರ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ಪತ್ರಿಕಾ ಮಿತ್ರರಾದ ಸಿತಾರಾಮ ಕುಲಕರ್ಣಿ, ಪ್ರಕಾಶ ಬೇಣ್ಣುರ, ಸಮೀರ ಇನಾಮದಾರ, ಗುರುರಾಜ ಗದ್ದನಕೇರಿ, ಮೋಹನ ಕುಲಕರ್ಣಿ, ರಾಹುಲ ಆಪ್ಟೆ, ಸುಧಿಂದ್ರ ಕುಲಕರ್ಣಿ, ಕಾನಿಪ ಇಂಡಿ ಘಟಕದ ಅದ್ಯಕ್ಷ ಸಬುಶಾಮಾ ಹವಾಲ್ದಾರ, ಉಮೇಶ ಬಳಬಟ್ಟಿ, ಸದ್ದಾಮ ಜಮಾದಾರ, ಯಲಗೊಂಡ ಬೇವನೂರ, ಲಕ್ಷ್ಮಣ ಹಿರೇಕುರಬರ, ಅರವಿಂದ ಖಡೆಖಡೆ, ಭೀರಪ್ಪ ಹೊಸುರ, ಸಿದ್ದು ಹತ್ತಳ್ಳಿ, ಶಂಕರ ಜಮಾದಾರ, ಅಶೋಕ ಕುಲಕರ್ಣಿ, ಲಾಲಸಿಂಗ ರಾಠೋಡ, ಅಲ್ಲಬಾಕ್ಷ ಗೊರೆ, ನಾಗರಾಜ ಆಸಂಗಿ, ಆನಂದ ಗಣಾಚಾರಿ, ಹಸನ ಮುಜಾವರ, ಜಹಾಂಗಿರ ದೇಸಾಯಿ, ಪ್ರವಿಣ ಮಠ, ಸೇರಿದಂತೆ ಅನೇಕರು ಇದ್ದರು.

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ