Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಂತ್ರಜ್ಞಾನದ ಮೂಲಕ ಕಳೆದುಕೊಂಡ ೨೧ ಮೊಬೈಲಗಳನ್ನು ಹುಡುಕಿ ಕೊಟ್ಟ ಪೊಲಿಸರು

ಹುನಗುಂದ; ಠಾಣಾ ವ್ಯಾಪ್ತಿಯಲ್ಲಿ ಸುಮಾರು ಒಂದು ತಿಂಗಳಲ್ಲಿ ಕಳೆದುಕೊಂಡ ಮೊಬೈಲಗಳನ್ನು ನೂತನ ಯ್ಯಾಪ್ ತಂತ್ರಜ್ಞಾನದ ಮೂಲಕ ಶೀಘ್ರದಲ್ಲಿ ಪತ್ತೆ ಹಚ್ಚಿ ೨೧ ಮೊಬೈಲಗಳನ್ನು ಹುಡುಕಿ ಮತ್ತೆ ಮಾಲಿಕನಿಗೆ ಕೊಡಲುವಲ್ಲಿ ಹುನಗುಂದ ಠಾಣಾ ಪೊಲಿಸ್ ಸಿಬ್ಬಂದಿಗಳ ಕಾರ್‍ಯ ಶ್ಲಾಘನೀಯವೆಂದು ಕಾನೂನು ಸುವ್ಯವಸ್ಥೆ ಪಿಎಸ್‌ಐ ಪ್ರಕಾಶ ಡಿ. ಹೇಳಿದರು. ಇಲ್ಲಿನ ಪೊಲಿಸ್ ಠಾಣಾದಲ್ಲಿ ಸಿಕ್ಕಂತ ಮೋಬೈಲಗಳನ್ನು ವಿತರಿಸಿ ಅವರು ಮಾತನಾಡುತ್ತ ಕಳೆದುಕೊಂಡ ಮೋಬೈಲ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿ ಸೂಕ್ತಗಳನ್ನು ಒದಗಿಸಿದಾಗ ಇ ಲಾಸ್ಟ್ ಎನ್ನುವ ಹೊಸ ಯ್ಯಾಪ್ ಬಳಸಿ ಪೊಲಿಸ್ ಸಿಬ್ಬಂದಿ ಕಳೆದ ವಸ್ತುಗಳನ್ನು ಪತ್ತೆ ಹಚ್ಚಿರುತ್ತಾರೆ. ತಂತ್ರಜ್ಞಾನ ಬಹಳ ವೇಗದಲ್ಲಿರುವದರಿಂದ ಸಾರ್ವಜನಿಕರು ತಮ್ಮ ಪ್ರತಿಯೊಂದು ವಸ್ತುವಿನ ಬಗ್ಗೆ ಕಾಳಜಿ ವಹಿಸಿ ರಕ್ಷಿಸಿಕೊಳ್ಳಬೇಕು. ನಿಷ್ಕಾಳಜಿಯಾದರೆ ಕಳೆದ ವಸ್ತು ಸಿಗಬಹುದು ಸಿಗಲಿಕ್ಕಿಲ್ಲ ಆದರೂ ಎಚ್ಚರಿಕೆ ಇರಬೇಕು ಎಂದರು. ಅಪರಾಧ ವಿಭಾಗದ ಪಿಎಸ್‌ಐ ಎಂ.ಎಸ್. ಮಹಾರಾಜನವರ ಮಾತನಾಡಿ ಸಾರ್ವಜನಿಕರ ರಕ್ಷಣೆಗೆ, ಕಳ್ಳತನ ಪತ್ತೆ ಹಚ್ಚುವಲ್ಲಿ, ಸಮಾಜದಲ್ಲಿ ಶಾಂತಿ ಕಾಪಾಡಲು ಪೊಲಿಸ್ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುತ್ತದೆ. ಆದಾಗ್ಯೂ ಸಹಿತಿ ಎಲ್ಲೊ ಒಂದು ದುರ್ಘಟಣೆ ನಡೆಯುತ್ತದೆ. ಅದು ಯಾವ ಕಾಲಕ್ಕೂ ಪೊಲಿಸ್ ಇಲಾಖೆಯಿಂದ ತಪ್ಪಿಸಿಕೊಳ್ಳಲು ಅಸಾಧ್ಯ ಎಂದರು. ಪೊಲಿಸ್ ಸಿಬ್ಬಂದಿಗಳಾದ ನಾಗರಾಜ ಕುಂದರಗಿ, ಬಸವರಾಜ ಗೌಡರ, ಎನ್.ಸಿ. ಪಾಟೀಲ, ವಿಜಯ ರಾಠೋಡ, ಶಿವರಾಜ ವಾಲಿಕಾರ, ಎಸ್.ವೈ.ಬಜಂತ್ರಿ ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ