ರಾಮದುರ್ಗ:
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ೨೦೨೬ ರಿಂದ ೩೧ ರ ಅವಧಿಗೆ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ನಡೆಯಿತು.
ತಾಲೂಕು ಘಟಕದ ಕಾರ್ಯಕಾರಿ ಸಮಿತಿ ೧೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪ ಮಹಿಳಾ ಮೀಸಲಾತಿ ಸ್ಥಾನಗಳು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಾಮಾನ್ಯ ಕ್ಷೇತ್ರದ ೮ ಸ್ಥಾನಗಳಿಗೆ ೧೦ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಶುಕ್ರವಾರ ನಡೆದ ಚುನಾವಣೆಯಲ್ಲಿ ಸುರೇಶ ವೆಂ. ಪಾಟೀಲ, ಅಶೋಕ ವೆಂ. ಬೂದಿ, ಲಕ್ಷ್ಮಣ ಮು. ಅಣ್ಣಿಗೇರಿ, ನಿಂಗಪ್ಪ ಲ. ಭಜಂತ್ರಿ, ಫರಪ್ಪ ನಿಂ. ಕುಂಬಾರ, ಅಶೋಕ ಶಿ. ಗಾಣಗಿ, ಶಿವಲಿಂಗಪ್ಪ ಚ. ಹುರಕಡ್ಲಿ, ರವೀಂದ್ರ ನಾ. ಕೀಲಿಪುಟ್ಟಿ ಸೇರಿದಂತೆ ೮ ಜನ ಆಯ್ಕೆಗೊಂಡರು.
ಮಹಿಳಾ ಮೀಸಲಾತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್.ಕೆ. ಅಂಬಲೆ, ಆರ್.ಎಚ್. ಭಾಶಾ, ಟಿ.ಎಸ್. ಹಿರಿಚನ್ನವರ, ಎಂ.ಬಿ. ಪಾಣಿ ಅವಿರೋಧವಾಗಿ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ಮುಖಂಡರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಚುನಾವಣೆಯಲ್ಲಿ ಆಯ್ಕೆಗೊಂಡ ಎಲ್ಲ ಸದ್ಯರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.