ರಾಮದುರ್ಗ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ೨೦೨೬ ರಿಂದ ೩೧ ರ ಅವಧಿಗೆ ಅಧ್ಯಕ್ಷ ಸೇರಿದಂತೆ ವಿವಿಧ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡಿವೆ ಎಂದು ಚುನಾವಣಾಧಿಕಾರಿ ಕೆ.ವೈ. ಗದಿಗೆನ್ನವರ ತಿಳಿಸಿದ್ದಾರೆ.
ತಾಲೂಕು ಘಟಕದ ಅಧ್ಯಕ್ಷರಾಗಿ ಸುರೇಶ ವೆಂಕಟೇಶ ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಶಿವಲಿಂಗಪ್ಪ Zನಬಸಪ್ಪ ಹುರಕಡ್ಲಿ, ಖಜಾಂಚಿಯಾಗಿ ರವೀಂದ್ರ ನಾರಾಯಣಪ್ಪ ಕೀಲಿಪುಟ್ಟಿ, ಉಪಾಧ್ಯಕ್ಷರಾಗಿ ನಿಂಗಪ್ಪ ಲಕ್ಷ್ಮಣ ಭಜಂತ್ರಿ, ಮಹಿಳಾ ಉಪಾಧ್ಯಕ್ಷರಾಗಿ ಮಹಾದೇವಿ ಭೀಮಪ್ಪ ಪಾಣಿ, ಸಾಮಾನ್ಯ ಸಹ ಕಾರ್ಯದರ್ಶಿಯಾಗಿ ರಜಿಯಾ ಹುಸೇನ ಬಾಶಾ, ಮಹಿಳಾ ಸಹ ಕಾರ್ಯದರ್ಶಿಯಾಗಿ ಶ್ರೀದೇವಿ ಕಲ್ಲಪ್ಪ ಅಂಬಲೆ, ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ ಶಿವಪ್ಪ ಗಾಣಗಿ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ತಾರಾಮತಿ ಸೊಲಬನಗೌಡ ಹಿರಿಚನ್ನವರ ಆಯ್ಕೆಗೊಡಿದ್ದಾರೆ ಎಂದು ತಿಳಿಸಿದರು.
ತಾಲೂಕಾ ಗೌರವಾಧ್ಯಕ್ಷರಾಗಿ ಪರಪ್ಪ ನಿಂಗಪ್ಪ ಕುಂಬಾರ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ ವೆಂಕಪ್ಪ ಬೂದಿ, ನಿರ್ದೇಶಕರಾಗಿ ಲಕ್ಷ್ಮಣ ಮುದಕಪ್ಪ ಅಣ್ಣಿಗೇರಿ ಆಯ್ಕೆಗೊಂಡಿದ್ದಾರೆ.
ಚುನಾವಣೆಯಲ್ಲಿ ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳಿಗೆ ಚುನಾವಣಾಧಿಕಾರಿ ಕೆ.ವೈ. ಗದಿಗೆನ್ನವರ ಪ್ರಮಾಣಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಯಾಗಿ ಎ.ಎ. ಮುರ್ತೋಜಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಅನೇಕ ಶಿಕ್ಷಕರು ಉಪಸ್ಥಿತಿದ್ದರು.
ನೂತನ ಅಧ್ಯಕ್ಷರ ಹೇಳಿಕೆ:
ತಾಲೂಕಿನ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಕರ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೇ ಸಂಘದ ಬೆಳವಣೆಗೆಗೆ ಶ್ರಮಿಸಲಾಗುವದು ಎಂದು ಹೇಳಿದರು.
