ಅಥಣಿ-ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಸಭಾ ಭವನದಲ್ಲಿ ಇಸ್ಲಾಂ ಧರ್ಮದ ಪವಿತ್ರ ಯಾತ್ರಾ ಸ್ಥಳವಾದ ಹಜ್ಜ ಯಾತ್ರೆಗೆ ತೆರಳಲಿರುವ ಅಬ್ದುಲಅಜೀಜ ಇಮಾಮಹುಸೇನ ಡಾಂಗೆ ಮತ್ತು ಅವರ ಶ್ರೀಮತಿ ರಜೀಯಾಬಾನು ಅಬ್ದುಲಅಜೀಜ ಡಾಂಗೆ, ಅನ್ವರ ಮಹ್ಮದಅಲಿ ನದಾಫ್ ಮತ್ತು ಅವರ ಶ್ರೀಮತಿ ಖುರ್ಷಿದಾ ಅನ್ವರ ನದಾಫ್ ಮಾಜಿ ಪುರಸಭೆ ಅಧ್ಯಕ್ಷರು, ಮಲಿಕ ಇಬ್ರಾಹಿಂಸಾಬ ಡಾಂಗೆ ಮತ್ತು ಅವರ ಶ್ರೀಮತಿ ಶಾಹಿದಾಬಾನು ಮಲಿಕ ಡಾಂಗೆ ಈ ಎಲ್ಲಾ ದಂಪತಿಗಳಿಗೆ ಹಜ್ಜ್ ಯಾತ್ರೆ ಸುಖಕರವಾಗಿರಲೆಂದು ಸತ್ಕರಿಸಿ ಹಾರೈಸಲಾಯಿತು. ಸಂಘದ ಅಧ್ಯಕ್ಷರಾದ ಸುಭಾಸ ಗಂ ಬೆಳಕೂಡ ಉಪಾಧ್ಯಕ್ಷರಾದ ಇಸ್ಮಾಯಿಲ್ ಮ ಕಳ್ಳಿಮನಿ ನಿರ್ದೇಶಕರಾದ ಬಸಪ್ಪ ಚಿ ಮುಗಳಖೋಡ, ಲಕ್ಕಪ್ಪ ಲ ಪೂಜೇರಿ , ಗೊಡಚಪ್ಪ ಕ ಮುರಗೋಡ , ಬಸವರಾಜ ಬ ಬೆಳಕೂಡ , ವಿಶಾಲ ಸ ಶೀಲವಂತ ಹಾಗೂ ಪ್ರಧಾನ ವ್ಯವಸ್ಥಾಪಕರಾದ ರಮೇಶ ಶ್ ವಂಟಗೂಡಿ ಮತ್ತು ಸಿಬ್ಬಂದಿಗಳು ಸತ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
