ಕಾಗವಾಡ:ಆಧುನಿಕ ಯುಗದಲ್ಲಿ ಮೋಬೈಲ ದಾಸರಾಗುವದಕಿಂತ ಪುಸ್ತಕ ಪ್ರೇಮಿಯಾಗುವುದು ಜೀವನದ ಬಹುದೊಡ್ಡ ಸಾಧನೆ ಎಂದು ಅಥಣಿ ಎಸ್,ಎಸ್,ಎಮ್,ಎಸ್ ಕಾಲೇಜ ಉಪನ್ಯಾಸಕ ಅಶೋಕ ಕಾಂಬಳೆ ಹೇಳಿದರು
ಅವರು ದಿ. 18ರಂದು ತಾಲ್ಲೂಕಿನ ಐನಾಪೂರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಐನಾಪುರ ಆಯೋಜಿಸಿದ ಸನ್ 2025-26ಸಾಲಿನ ಸಾಂಸ್ಕೃತಿಕ, ಕ್ರೀಡೆ,ವಿವಿಧ ಚಟುವಟಿಕೆಗಳ ಸಮಾರೋಪ ಮತ್ತು ಬಿ.ಎ. ಬಿಕಾಂ ಅಂತಿಮ ವರ್ಷದವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು .ದ್ವೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಪದವಿ ಶಿಕ್ಷಣ ಎಂದರೆ ಪಠ್ಯ ಪುಸ್ತಕ ದ ಜ್ಞಾನಕಷ್ಟೇ ಸಿಮೀತವಲ್ಲ ಅದೊಂದು ಕನಸನ್ನು ನನಸಾಗಿಸುವ ವೇದಿಕೆ ಅದು ದಿಕ್ಸೂಚಿ ಶಿಕ್ಷಣದೊಂದಿಗೆ ಸಂಸ್ಕಾರ ಸೇರಿದಾಗ ಮಾತ್ರ ವ್ಯಕ್ತಿತ್ವ ಪರಿಪೂರ್ಣ ವಾಗುತ್ತದೆ ಯಾರು ಹೊಸದನ್ನು ಸೃಷಿಸಬಲ್ಲರೋ ಅವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಯ ಬಲ್ಲರೋ ಮೌಲ್ಯ ಗಳ ಜತೆಗೆ ಬಂದವರು ಮೌಲ್ಯ ಗಳನ್ನು ಉಳಿಸುತ್ತಾರೆ. ವಿದ್ಯಾರ್ಥಿಗಳು ಓದಿನ ಕಡೆ ಹಚ್ಚು ಗಮನಹರಿಸಬೇಕು ಓದು ಮಾತ್ರ ನಿಮ್ಮ ಬದುಕನ್ನು ರೂಪಿಸುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಎನ್ ಕೆ ಮಾಂಗ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ, ನೈತಿಕ ಮೌಲ್ಯಗಳು ಮಾನವೀಯತೆಯ ಗುಣಗಳನ್ನು ಮೈಗೂಡಿಸಿಕೊಂಡು ಅಧ್ಯಯನದಲ್ಲಿ ತೋಡಗಿದರೆ ಬದುಕು ಉಜ್ವಲವಾಗುತ್ತದೆ ಎಂದರು.
ಇ ಸಂದಭದಲ್ಲಿ ಕಾಲೇಜು ಅಭಿವೃದಿ ಸಮೀತಿ ಸದಸ್ಯ ಮುರಗೇಪ್ಪ ಮಹಾಜನ ,ಸ್ವಾತಿ ಪಾಟೀಲ,ಪ್ರಕಾಶ ಕೋರ್ಬು,ಮಹೇಶಸೋಲ್ಲಾಪುರ ಆರ್.ಬಿ ಬಸನ್ನವರ,ಶಂಕರ ನಡೋಣಿ ,ಸುದರ್ಶನ ಜೇಂತೆನ್ನವರ,ಅರವಿಂದ ಕಾರ್ಚಿ, ವೇದಿಕೆಯ ಮೇಲಿದರು. ಉಪನ್ಯಾಸಕಿ ಶಾಂತಾ ಬಂಗಾರಿ, ಉಪನ್ಯಾಸಕ ಪರಶುರಾಮ ಹರಳೆ,ಕಪೀಲ ಕಾಂಬಳೆ, ಸುಧೀರ ಬೇಡರ,ಕುತುಬುದ್ದಿನ ವಾಗನಗೇರಿ,
ಎಲ್ಲ ಭೋಧಕರು, ಸಿಬ್ಬಂದಿಗಳು ವಿದ್ಯಾರ್ಥಿ, ವಿದ್ಯಾರ್ಥಿ ನಿಯರು ಇದ್ದರು.ಕು ಪ್ರೀಯಾ ಗಾಣಿಗೇರ,ರಕ್ಷಿತಾ ದೇಸಾಯಿ,ನಿರೂಪಿಸಿದರು. ಪ್ರೊ.ಶೃತಿ ಹೆಚ್ ಸ್ವಾಗತಿಸಿದರು. ಪ್ರೊ.ಪಿ ಎಮ್ ಚೌಗಲಾ ಪರಿಚಯಿಸಿದರು. ಉಪನ್ಯಾಸಕ ಸೊಹಲ್ ಸತ್ತಿಕರ ವಂದಿಸಿದರು.
