ಬೆಳಗಾವಿ. ಇಂದು ದಿ. 17-05-2026 ರವಿವಾರದಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವಾಯ್.ವಿಜಯೇಂದ್ರ ಅವರು ಬೆಳಗಾವಿ ಪ್ರವಾಸದ ಕೈಗೊಳ್ಳಲಿದ್ದಾರೆ.
ದಿ. 17-05-2026 ರವಿವಾರ ಬೆಳಿಗ್ಗೆ 8:20 ಘಂಟೆಗೆ ಗಂಟೆಗೆ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು, ಮುಂಜಾನೆ 10:00 ಘಂಟೆಗೆ ಖಾನಾಪುರ ತಾಲೂಕಿನ ಜಾಂಬೋಟಿ ಹತ್ತಿರದ ಕುಸಮಳ್ಳಿಯಲ್ಲಿರುವ ಕೈವಲ್ಯಂ ಪೌಂಡೇಶನ್,ಯೋಗ ರಿಟ್ರೀಟ್ ಸೆಂಟರ್ ದಲ್ಲಿ ಬಿಜೆಪಿಯಿಂದ ನಡೆಯುವ ಜಿಲ್ಲಾ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು, ನಂತರ ಮುಂಜಾನೆ 11:00 ಗಂಟೆಗೆ ರಸ್ತೆ ಮೂಲಕ ರಾಣೆಬೆನ್ನೂರಿಗೆ ತೆರಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
