ಮೇ 10 ಹೇಮರಡ್ಡಿ ಮಲ್ಲಮ್ಮ ಜಯಂತಿ ವೀರಶೈವ ಲಿಂಗಾಯತ ರಡ್ಡಿ ಸಂಘ ಪುನರ್ಚನೆ

MK HasiruKranti
ಮೇ 10 ಹೇಮರಡ್ಡಿ ಮಲ್ಲಮ್ಮ ಜಯಂತಿ ವೀರಶೈವ ಲಿಂಗಾಯತ ರಡ್ಡಿ ಸಂಘ ಪುನರ್ಚನೆ
WhatsApp Group Join Now
Telegram Group Join Now
ಬಳ್ಳಾರಿ, ಏ.16: ಬರುವ ಮೇ 10 ರಂದು ನಗರದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಭಕ್ತಿಭಾವ, ಸಡಗರ ಸಂಭ್ರಮದಿಂದ ಆಚರಿಸಲು ವೀರಶೈವ ಲಿಂಗಾಯತ ರಡ್ಡಿ ಸಂಘ ನಿರ್ಧರಿಸಿದೆ.
ನಗರದ ಬಸವ ಭವನದಲ್ಲಿ ನಿನ್ನೆ ಸಂಜೆ ಸಭೆ ಸೇರಿದ ಸಂಘದ ಸದಸ್ಯರು, ಮುಖಂಡರು, ಕಳೆದ ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಕಳೆದ ವರ್ಷದಂತೆ ಜಿಲ್ಲಾಡಳಿತದ ಸಹಕಾರದಿಂದ ವಿಜೃಂಭಣೆಯಿಂದ ಆಚರಿಸಲು ಚರ್ಚಿಸಿದರು.
ಈ ಕುರಿತಂತೆ ಜಿಲ್ಲಾಡಳಿತ ಕರೆಯುವ ಪೂರ್ವ ಸಿದ್ದತಾ ಸಭೆಯಲ್ಲಿ. ಮಲ್ಲಮ್ಮ ಜಯಂತಿ ಸಮಾರಂಭವನ್ನು ನಗರದ ಬಸವ ಭವದಲ್ಲಿ ಅಂದು ಸಂಜೆ ಹಮ್ಮಿಕೊಳ್ಳೋಣ. ಅದಕ್ಕೂ ಮುನ್ನ ಮಲ್ಲಮ್ಮಳ ಭಾವಚಿತ್ರದ ಮೆರವಣಿಗೆಯನ್ನು ದುರ್ಗಮ್ಮ ದೇವಸ್ಥಾನದಿಂದ ಬಸವ ಭವನದ ವರೆಗೆ ಹಮ್ಮಿಕೊಳ್ಳಬೇಕು. ಇದಕ್ಕಾಗಿ ಹಳ್ಳಿಗಳಿಗೆ ತೆರಳಿ ರಡ್ಡಿ ಸಮುದಾಯದ ಜನತೆ ಜಯಂತಿ ಕಾರ್ಯಕ್ರಮಕ್ಕೆ ಬರುವಂತೆ ಕರಪತ್ರ ನೀಡಿ ಆಹ್ವಾನಿಸಲು. ಸಮಾರಂಭದ ನಂತರ ಪ್ರಸಾದ ವ್ಯವಸ್ಥೆ ಮಾಡಲು ತೀರ್ಮಾನಿಸಿತು.
ಉಳಿಸಂತೆ ಉಪನ್ಯಾಸ, ಸನ್ಮಾನ ಮೊದಲಾದವುಗಳ ಬಗ್ಗೆ ಜಿಲ್ಲಾಡಳಿತ ಕರೆಯುವ ಸಭೆಯಲ್ಲಿ ಅಂತಿಮಗೊಳಿಸಲು ನಿರ್ಣಯಿಸಲಾಯ್ತು.
ಇದೇ ವೇಳೆ ವೀರಶೈವ ಲಿಂಗಾಯತ ರಡ್ಡಿ ಸಂಘವನ್ನು ಪುನರ್ವರಚಿಸಲು ನಿರ್ಧರಿಸಿ. ಹಳಬರು ಮತ್ತು ಹೊಸಬರನ್ನು ಒಳಗೊಂಡ ಈ ಮುಂದಿನ. 21 ಹೆಸರುಗಳನ್ನು ಅಂತಿಮಗೊಳಿಸಲಾಯ್ತು. ಡಾ ಎಸ್.ಜೆ.ವಿ.ಮಹಿಪಾಲ್, ಎನ್.ಅಯ್ಯಪ್ಪ, ಜೆ.ಎಸ್.ನೇಪಾಕ್ಷಪ್ಪ, ರವಿರಾಜಶೇಖರ ರಡ್ಡಿ, ಜೋಳದರಾಶಿ ಬಸವರಾಜ್, ಟಿ.ವಿರುಪಾಕ್ಷಗೌಡ, ಸಂಗನಕಲ್ಲು ಯುಧಿಷ್ಟರ, ಬಿ.ರವೀಂದ್ರನಾಥ, ಕೆರೆನಳ್ಳಿ ಚಂದ್ರಶೇಖರ, ಅಭಿನಂದನ್ ಪಾಟೀಲ್, ಎನ್ ಚಂದ್ರಶೇಖರ ಯರಂಗಳಿ, ಡಾ.ಭಾಗ್ಯಲಕ್ಷ್ಮಿ, ಟಿ.ಎಂ.ಜಡೇಶ, ಮಿಂಚೇರಿ ನರೇಂದ್ರಬಾಬು, ಸಂಜೀವರಾಯನಕೋಟೆ ಸೋಮನಗೌಡ, ಕೆ.ನಂದೀಶ್ ಕುಮಾರ್, ಬಣಾಪುರ ನಾಗರಾಜ, ಜೆ.ಬಿ.ಸುಮಂಗಳ, ಗೋನಾಳ್ ಮುರಹರಗೌಡ, ಹೆಚ್.ಮಹಾಬಲೇಶ್ವರಗೌಡ, ಹೆಚ್.ವೀರಭದ್ರಗೌಡ ಇವರನ್ನು ಅಂತಿಮಗೊಳಿಸಿದ್ದು. ಇವರಲ್ಲಿ ಪದಾಧಿಕಾರಿಗಳನ್ನು ಕೆಲ ದಿನಗಳಲ್ಲಿ ಆಯ್ಕೆ ಮಾಡಲು ಸೂಚಿಸಿದೆ.
ಇನ್ನು ಮಹಿಳಾ, ಘಟಕ, ಬಳ್ಳಾರಿ ತಾಲೂಕು ಘಟಕ, ಯುವ ಘಟಕಗಳನ್ನು ರಚಿಸುವ ಬಗ್ಗೆಯೂ ಚರ್ಚಿಸಲಾಯ್ತು. ಸಭೆಯಲ್ಲಿ ರಡ್ಡಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article