ಮಿರಗಿ ಗೋಳಸಾರ ಗ್ರಾಮದ ಹಳ್ಳಕ್ಕೆ ಕಾಲುವೆ ಮೂಲಕ ನೀರು ಹರಿಸಲು ಪ್ರತಿಭಟನೆ

Pratibha Boi
ಮಿರಗಿ ಗೋಳಸಾರ ಗ್ರಾಮದ ಹಳ್ಳಕ್ಕೆ ಕಾಲುವೆ ಮೂಲಕ ನೀರು ಹರಿಸಲು ಪ್ರತಿಭಟನೆ
WhatsApp Group Join Now
Telegram Group Join Now

ಇಂಡಿ ತಾಲೂಕಿನ ಮಿರಗಿ ಹಳ್ಳ ಮತ್ತು ಗೋಳಸಾರ ಗ್ರಾಮಕ್ಕೆ ಕೃಷ್ಣಾ ಕಾಲುವೆ ಮುಖಾಂತರ ನೀರು ಹರಿಸಿ ನೀರಿನ ತೊಂದರೆ ತಪ್ಪಿಸಬೇಕೆಂದು ಆಗ್ರಹಿಸಿ ಇಂದು ಗ್ರಾಮದ ರೈತರು ಆಡಳಿತ ಸೌಧ ಎದುರು ಪ್ರತಿಭಟನೆ ನಡೆಸಿದರು.
ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ ಮಿರಗಿ ಹಳ್ಳಕ್ಕೆ ಕೃಷ್ಣಾ ಕಾಲುವೆ ನೀರು ಹರಿಸಿದರೆ ಮಿರಗಿ, ಗೋಳಸಾರ, ನಾದ ಸಂಗೋಗಿ, ಶಿರಶ್ಯಾಡ ಈ ಎಲ್ಲ ಗ್ರಾ.ಪಂ ಗಳಿಗೆ ಕುಡಿಯುವ ನೀರಿನ ಅನುಕೂಲವಾಗುತ್ತದೆ ಕಾರಣ ಕಾಲುವೆ ಮುಖಾಂತರ ಹಳ್ಳಕ್ಕೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಶ್ರೀಶೈಲ ಮದರಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಬಸವರಾಜ ಖಸ್ಕಿ, ಭೀಮಣ್ಣ ಅವಟಿ, ಬಸವರಾಜ ಭಂಥನಾಳ, ಶಿವಲಿಂಗಪ್ಪ ರೋಡಗಿ, ಯಲ್ಲಪ್ಪ ಗಾಳಿ, ಶಿವಾನಂದ ಕಲಶೆಟ್ಟಿ, ರವಿಕಾಂತ ರೋಡಗಿ, ಭೀಮರಾಯ ಹಳ್ಳಿ, ಕಾಂತಪ್ಪ ಗಡೆಕರ, ಸುರೇಸ ಪಾಟೀಲ, ನಾಮದೇವ ಸಾಳುಂಕೆ, ಅಶೋಕ ಆನೂರ, ಶಿವಲಿಂಗಪ್ಪ ರೋಡಗಿ ಮತ್ತಿತರಿದ್ದರು.
ತಹಸೀಲ್ದಾರ ಬಿ.ಎಸ್.ಕಡಕಬಾವಿ ಇವರಿಗೆ ಮನವಿ ಸಲ್ಲಿಸಿದರು.

 

WhatsApp Group Join Now
Telegram Group Join Now
Share This Article