ಮುಧೋಳ: ಆ.೨೦.,ತಾಲೂಕಿನ ಮೆಟಗುಡ್ಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಡೋಣಿತೋಟದಲ್ಲಿ ತಂತ್ರಜ್ಞಾನದ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಪತ್ರ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ’ಪತ್ರ ಬರೆಯಿರಿ, ಹತ್ತಿರವಾಗಿರಿ’ ಎಂಬ ವಿಶಿ? ಪತ್ರ ಅಭಿಯಾನ ನಡೆಯಿತು.
ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (Iಈಂ) ವತಿಯಿಂದ ಯೋಜನಾ ಸಂಯೋಜಕ ಸುರೇಶ ರಾಜಮಾನೆ ಅವರ ಸಂಯೋಜನೆಯಲ್ಲಿ ನಡೆಯುತ್ತಿರುವ ’ಬೇಟೆ-ನಾಯಿಗಳ ಕೋಟೆ ಮುದುವೊಳಲು’ ಕಲಾ ಅಂತರ್ಗತ ಯೋಜನೆಯ ಭಾಗವಾಗಿ ಈ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.
ತಂತ್ರಜ್ಞಾನದ ವಿವಿಧ ಆವಿ?ರಗಳಿಂದ ಪತ್ರ ಬರೆಯುವ ಸಂಸ್ಕೃತಿ ಕ್ರಮೇಣ ಮರೆಯಾಗುತ್ತಿರುವ ಸಂದರ್ಭದಲ್ಲಿ, ಮಕ್ಕಳಲ್ಲಿ ಪತ್ರ ಬರೆಯುವ ಆಸಕ್ತಿ ಹಾಗೂ ಬರವಣಿಗೆಯ ಕೌಶಲ್ಯ ಬೆಳೆಸುವ ಉದ್ದೇಶದಿಂದ ಈ ಅಭಿಯಾನ ಆಯೋಜಿಸಲಾಯಿತು. ಮಕ್ಕಳು ತಾವು ಕಲಿಯುತ್ತಿರುವ ವಿ?ಯಗಳ ಕುರಿತು ತಮ್ಮ ಪಾಲಕರಿಗೆ ಅಂಚೆಪತ್ರದ ಮೂಲಕ ಪತ್ರಗಳನ್ನು ಬರೆದು, ತಮ್ಮದೇ ಮುದ್ದಾದ ಕೈಬರಹವನ್ನು ದಾಖಲಿಸಿದರು.
ಈ ಚಟುವಟಿಕೆಯ ಮೂಲಕ ಮಕ್ಕಳಿಗೆ ಪ್ರಾಣಿಗಳ ಕುರಿತು ಅಧ್ಯಯನ ಮಾಡುವುದರ ಜೊತೆಗೆ ಪರಿಸರ, ಕನ್ನಡ ಹಾಗೂ ಗಣಿತ ವಿ?ಯಗಳಿಗೆ ಸಂಬಂಧಿಸಿದ ಕಲಿಕಾಫಲಗಳನ್ನು ಅನುಭವಾತ್ಮಕವಾಗಿ ಅರ್ಥಮಾಡಿಕೊಳ್ಳಲು ಅವಕಾಶ ದೊರೆಯಿತು. ಪತ್ರ ಬರೆಯುವ ಮೂಲಕ ವಿ?ಯವನ್ನು ರವಾನಿಸುವ ಪ್ರಕ್ರಿಯೆ, ಪತ್ರದ ವಿನ್ಯಾಸ ಹಾಗೂ ಪತ್ರ ಬರವಣಿಗೆಯ ಶೈಲಿಯನ್ನೂ ಮಕ್ಕಳು ಕಲಿತರು. ಮಕ್ಕಳ ಕಲಿಕೆಯ ಕುರಿತು ಪಾಲಕರಿಗೆ ನೇರವಾಗಿ ತಿಳಿಯುವ ಅವಕಾಶವೂ ಇದರಿಂದ ದೊರೆಯಿತು.
ಮನು? ಮತ್ತು ಪ್ರಾಣಿಗಳ ನಡುವಿನ ವ್ಯತ್ಯಾಸ, ಮನೆಯ ಸದಸ್ಯನಂತೆಯೇ ಬೆರೆತುಹೋಗುವ ನಾಯಿಯ ಸ್ವಭಾವ, ಮುಧೋಳ ನಾಯಿಗಳ ವೈಶಿ?, ಅವುಗಳ ಕಾರ್ಯವೈಖರಿ ಹಾಗೂ ಸಾಮಾನ್ಯ ನಾಯಿಗಳ ದಿನಚರಿ ಕುರಿತು ಮಕ್ಕಳಲ್ಲಿ ಮೂಡಿರುವ ಕುತೂಹಲಕ್ಕೂ ಈ ಪತ್ರ ಅಭಿಯಾನ ಮತ್ತ? ಪುಷ್ಟಿ ನೀಡಿದೆ.
ಈ ಕುರಿತು ಯೋಜನೆಯ ಸಂಯೋಜಕ ಸುರೇಶ ರಾಜಮಾನೆ ಮಾತನಾಡಿ, ಪತ್ರ ಅಭಿಯಾನವು ಮಕ್ಕಳ ಬರವಣಿಗೆಯ ಕೌಶಲ್ಯವನ್ನು ಸುಧಾರಿಸುವುದರ ಜೊತೆಗೆ ಪತ್ರ ಬರೆಯುವ ಶೈಲಿಯನ್ನು ಪರಿಚಯಿಸುತ್ತದೆ. ತಾವು ಕಲಿಯುತ್ತಿರುವ ವಿ?ಯವನ್ನು ಪಾಲಕರೊಂದಿಗೆ ಹಂಚಿಕೊಳ್ಳುವ ಮೂಲಕ ಮಕ್ಕಳಲ್ಲಿ ಕಲಿಕೆಯ ದೃಢೀಕರಣವೂ ಆಗುತ್ತದೆ. ಪಾಲಕರಲ್ಲಿಯೂ ಮಕ್ಕಳ ಬರವಣಿಗೆ ಹಾಗೂ ಕಲಿಕೆಯ ಬಗ್ಗೆ ಸಕಾರಾತ್ಮಕ ಭಾವನೆ ಮೂಡುತ್ತದೆ ಎಂದು ಹೇಳಿದರು.