Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶೂಟಿಂಗ್​ನಲ್ಲಿ ಕಂಚು ಗೆದ್ದ  ಭಾರತದ ಸ್ವಪ್ನಿಲ್​ ಕುಸಾಲೆ

ಪ್ಯಾರಿಸ್​ (ಫ್ರಾನ್ಸ್​): ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ 50 ಮೀಟರ್ ಏರ್ ರೈಫಲ್ 3 ಪೊಸಿಶನ್​ ಫೈನಲ್​ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಇಂದು ನಡೆದ ಫೈನಲ್​ ಪಂದ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡರು. ಇದರೊಂದಿಗೆ ಭಾರತ ಶೂಟಿಂಗ್​ ಸ್ಪರ್ಧೆಯಲ್ಲಿ ಮೂರನೇ ಪದಕ ಜಯಿಸಿದೆ. ಅವರು 451.4 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಪ್ಯಾರಿಸ್ ಒಲಿಂಪಿಕ್ಸ್‌ನ ಆರನೇ ದಿನವಾದ ಇಂದು ಭಾರತದ ಏಕೈಕ ಪದಕದ ಭರವಸೆ ಅವರ ಮೇಲಿತ್ತು. ಅದರಂತೆ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ವಪ್ನೀಲ್​ ತನ್ನ ಮೊದಲ ಶಾಟ್‌ನಲ್ಲಿ 9.6 ಅಂಕಗಳನ್ನು ಕಲೆಹಾಕಿಉತ್ತಮ ಆರಂಭವನ್ನು ಪಡೆದರು. ನಂತರ ಮೊಣಕಾಲಿನ ಭಂಗಿಯ ಹಂತದ ಮೊದಲ ಸರಣಿಯ ಸುತ್ತುಗಳಲ್ಲಿ 10 ಕ್ಕೂ ಹೆಚ್ಚು ಹೊಡೆತಗಳನ್ನು ಹೊಡೆದರು. ಎರಡನೇ ಸರಣಿಯನ್ನು 10.1 ಪಾಯಿಂಟರ್‌ನೊಂದಿಗೆ ಪ್ರಾರಂಭಿಸಿದರು, ಆದರೆ ಇದೇ ವೇಗವನ್ನು ಕಾಯ್ದುಕೊಳ್ಳಲು ವಿಫಲರಾದ ಅವರು ಮುಂದಿನ ಹಂತದಲ್ಲಿ 9.9-ಪಾಯಿಂಟ್ ಅಂಕ ಗಳಿಸಿದರು. ಆದಾಗ್ಯೂ, ಮಂಡಿಯೂರಿ ಹಂತದ ಮೂರನೇ ಮತ್ತು ಅಂತಿಮ ಸರಣಿಯಲ್ಲಿ ಅವರು ಕಮ್​ ಬ್ಯಾಕ್​ ಮಾಡಿದರು. ಈ ಸುತ್ತಿನ ಬಳಿಕ 153.3 ಅಂಕಗಳೊಂದಿಗೆ ಆರನೇ ಸ್ಥಾನಕ್ಕೇರಿ ಅರ್ಹತಾ ಹಂತದಲ್ಲೂ ಸ್ಥಾನ ಪಡೆದರು.




ಆಟ ಮುಂದುವರೆದಂತೆ, ಅವರ ಹೊಡೆತಗಳ ನಿಖರತೆ ಸುಧಾರಿಸಿತು. ಮುಂದಿನ 15 ಪ್ರಯತ್ನಗಳಲ್ಲಿ ಸತತವಾಗಿ 10+ ಪಾಯಿಂಟ್ ಶಾಟ್‌ಗಳನ್ನು ಗಳಿಸಿ 310.1 ಅಂಕಗಳೊಂದಿಗೆ ಪ್ರೋನ್ ಹಂತಕ್ಕೆ ಎಂಟ್ರಿ ಪಡೆದರು. ಇದರಲ್ಲಿ ಮೊದಲ ಸುತ್ತಿನಲ್ಲಿ 52.7 ಅಂಕಗಳನ್ನು ಗಳಿಸಿ, ಎರಡನೇಯ ಸುತ್ತಿನಲ್ಲಿ 52.2 ಮತ್ತು ಮೂರನೇ ಸುತ್ತಿನಲ್ಲಿ 51.9 ಅಂಕಗಳನ್ನು ಗಳಿಸಿದರು, ಇದರಲ್ಲಿ ಅವರ ಅತ್ಯುತ್ತಮ ಹೊಡೆತ 10.8 ಆಗಿತ್ತು.


ಬಳಿಕ ಅಂತಿಮ ಹಂತದ ಮೊದಲ ಪ್ರಯತ್ನದಲ್ಲಿ 9.9-ಪಾಯಿಂಟ ಸಾಧಿಸಿದರು, ನಂತರ 10.7-ಪಾಯಿಂಟ್ ಶಾಟ್ನೊಂದಿಗೆ ಅದ್ಭುತ ಪುನರಾಗಮನ ಮಾಡಿದರು. ಅವರು ಮೊದಲ ಸುತ್ತಿನಿಂದ 51.1 ಅಂಕ ಮತ್ತು ನಂತರ ಎರಡನೇ ಸುತ್ತಿನಿಂದ 50.4 ಅಂಕ ಕಲೆ ಹಾಕಿದರು. ಒಟ್ಟಾರೇ 411.6 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು ಎಲಿಮಿನೇಷನ್ ಸರಣಿಯನ್ನು ಪ್ರವೇಶಿಸಿದರು.


ಮೂರನೇ ಮತ್ತು ಅಂತಿಮ ಎಲಿಮಿನೇಷನ್ ಸುತ್ತಿನಲ್ಲಿ, ಅವರು ಮೊದಲ ಹಂತದಲ್ಲಿ 10.5 ಅಂಕ ಕಲೆಹಾಕಿ ಮೂರನೇ ಸ್ಥಾನ ಭದ್ರಪಡಿಸಿಕೊಂಡರು. ಕೊನೆಯಲ್ಲಿ 451.4 ಅಂಕಗಳೊಂದಿಗೆ ಕಂಚಿನ ಪದಕವನ್ನು ವಶಪಡಿಸಿಕೊಂಡರು.



Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ