ನೇಸರಗಿ. ಇಲ್ಲಿನ ಭಜಂತ್ರಿ ಸಮಾಜ ಸಂಘ ನೇಸರಗಿ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಶಿವಶರಣ ಶ್ರೀ ಬಸವ ಅನುಯಾಯಿ ನೂಲಿ ಚಂದ್ರಯ್ಯ ಅವರ ಜಯಂತಿಯನ್ನು ದೇಶನೂರ ರಸ್ತೆಯ ಕುಡಿಯುವ ನೀರಿನ ಟ್ಯಾಂಕ ಹತ್ತಿರ ಶಿವಶರಣ ನೂಲಿ ಚಂದ್ರಯ್ಯ ಅವರ ಭಾವಚಿತ್ರ ಹಾಗೂ ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವುದರ ಮೂಲಕ ನೂಲಿ ಚಂದ್ರಯ್ಯ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ನಿಂಗಪ್ಪ ತಳವಾರ, ಗುರು ತುಬಚಿ,ಡಿ ಎಸ್ ಎಸ್ ಅಧ್ಯಕ್ಷ ರಮೇಶ ರಾಯಪ್ಪಗೋಳ,ಯಮನಪ್ಪ ಪೂಜೇರಿ, ಸತ್ತಾರ ಮೋಕಾಶಿ, ಮಂಜು ಮದೇನ್ನವರ, ಪ್ರಕಾಶ ತೋಟಗಿ,ಸುಜಾತ ತುಬಾಕಿ, ಸಮಾಜದ ಮುಖಂಡರಾದ ಲಕ್ಷ್ಮಣ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಗಂಗಪ್ಪ ಭಜಂತ್ರಿ, ಕಿರಣ ಭಜಂತ್ರಿ, ವಿಠ್ಠಲ ಭಜಂತ್ರಿ, ಉದಯ ಭಜಂತ್ರಿ, ಅಶೋಕ ಭಜಂತ್ರಿ, ಯಮನಪ್ಪ ಭಜಂತ್ರಿ, ವಿಜಯ ಭಜಂತ್ರಿ, ಮಲ್ಲಪ್ಪ ಭಜಂತ್ರಿ, ವೆಂಕಪ್ಪ ಭಜಂತ್ರಿ, ಹಾಗೂ ಭಜಂತ್ರಿ ಸಮಾಜದ ಸಮಸ್ತ ಜನತೆ ಭಾಗವಹಿಸಿದ್ದರು.