ಬೈಲಹೊಂಗಲ. ಪ್ರತಿಷ್ಠಿತ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅವರ ಧರ್ಮಪತ್ನಿ ಶಾಸಕಿ ಶ್ರೀಮತಿ ಶಶಿಕಲಾ ಜೊಲ್ಲೆ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕರಾದ ಅಪ್ಪಾಸಾಹೇಬ ಕುಲಗುಡೆ, ಅರವಿಂದ ಪಾಟೀಲ, ನೀಲಕಂಠ ಕಪ್ಪಲಗುದ್ದಿ, ವೀರೂಪಾಕ್ಷ ಮಾಮನಿ ಇವರನ್ನು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ಹಿರಿಯ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಮಂಜುಳಾ ದೊಡ್ಡಗೌಡರ ಅವರು ಬೈಲಹೊಂಗಲ ಸ್ವಗ್ರಹದಲ್ಲಿ ಸತ್ಕರಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಉದ್ಯಮಿ ವಿಜಯ ಮೆಟಗುಡ್ಡ, ಡಾ. ಮಂಜುನಾಥ ಮುದಕನಗೌಡರ, ಪ್ರಕಾಶ ಮುಗಬಸವ, ಸಿ ಆರ್ ಪಾಟೀಲ,ಎಸ್ ಎಮ್ ಪಾಟೀಲ, ಸುನೀಲ ಮರಕುಂಬಿ,ಮಲ್ಲಿಕಾರ್ಜುನ ಉಳ್ಳೆಗಡ್ಡಿ, ಮಹಾಂತೇಶ ಮೋಹರೆ ಸೇರಿದಂತೆ ಪಿಕೆಪಿಎಸ್ ಅಧ್ಯಕ್ಷರು, ಬಿಜೆಪಿ ಮುಖಂಡರು,ಸಹಕಾರಿ ಬಂದುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


