MK HasiruKranti
WhatsApp Group Join Now
Telegram Group Join Now

ರಾಯಬಾಗ: ತಾಲೂಕಿನ ನಿಡಗುಂದಿ ಗ್ರಾಮದ ಲಕ್ಷ್ಮೀದೇವಿ, ಗುರು ಸಿದ್ದೇಶ್ವರ, ಬಸವೇಶ್ವರ ಜಾತ್ರಾ ಮಹೋತ್ಸವವು ಭಾನುವಾರ ಮಹಾನೈವೇದ್ಯದೊಂದಿಗೆ ವಿಜೃಂಭಣೆಯಿಂದ ಜರುಗಿತು.

ಜಾತ್ರೆಯ ನಿಮಿತ್ತ ವಿವಿಧ ಶರ್ಯತ್ತುಗಳು ಜರುಗಿದವು.ಓಡುವ ಶರ್ಯತ್ತು: ಶಿವಾನಂದ ನಾಯಿಕ ಪ್ರಥಮ, ಚೇತನ ಕೊಣ್ಣುರ ದ್ವಿತೀಯ, ಕುಮಾರ ಬಳಗಾನೆ ತೃತೀಯ ಬಹುಮಾನ ಪಡೆದರು.

ಕುದುರೆ ಶರ್ಯತ್ತು: ಸಿದ್ರಾಮ ಕೆಂಪಟ್ಟಿ ಪ್ರಥಮ, ಗಣಪತಿ ನಿಲಜಿ ದ್ವಿತೀಯ, ಮಾಳಪ್ಪ ಹಿರೇಕೊಡಿ ತೃತೀಯ ಬಹುಮಾನ ಪಡೆದರು.
ಸಾಯಕಲ್ ಶರ್ಯತ್ತು: ಮಾರುತಿ ಬಡಿಗವಾಡ ಪ್ರಥಮ, ಬಾಳು ಹಿರೇಮಠ ದ್ವಿತೀಯ, ಬಸು ಧರ್ಮಟ್ಟಿ ತೃತೀಯ ಬಹುಮಾನ ಪಡೆದರು.
ರಂಗೋಲಿ ಸ್ಪರ್ಧೆ: ಪ್ರೇಮಾ ಪಾಟೀಲ ಪ್ರಥಮ, ಪ್ರೀತಿ ಕಟಾಂವಿ ದ್ವಿತೀಯ, ದೀಪಾ ಹಳಾಜೆ ತೃತೀಯ ಸ್ಥಾನ ಪಡೆದರು.
ಸ್ಲೋ ಸಾಯಕಲ್ ಶರ್ಯತ್ತು: ಸುಪ್ರೀತ ಪತ್ತಾರ ಪ್ರಥಮ, ಆದರ್ಶ ಹಳಾಜೆ ದ್ವಿತೀಯ, ನವೀನ ಮಠಪತಿ ತೃತೀಯ ಬಹುಮಾನ ಪಡೆದರು.
ಜೋಡು ಕುದುರೆ ಗಾಡಿ ಶರ್ಯತ್ತು: ಚೇತನ ಖನದಾಳೆ ಪ್ರಥಮ, ಉಮೇಶ ಕುಡಚಿ ದ್ವಿತೀಯ ಹಾಗೂ ಸುನೀಲ ಪೂಜೇರಿ ತೃತೀಯ ಬಹುಮಾನ ಪಡೆದರು.
ವಿಜೇತರಿಗೆ ಬಾಳಪ್ಪ ಪೂಜೇರಿ, ಅಣ್ಣಾಸಾಹೇಬ ಖೆಮಲಾಪೂರೆ, ಲಕ್ಷ್ಮಣ ಗವಾನೆ, ಗೋರಖ ನಾಯಿಕ, ಜಿನೇಂದ್ರ ಖೆಮಲಾಪೂರೆ, ಬಾಳೇಶ ಹಳಾಜೆ, ಪ್ರಭು ಭಿರಡಿ, ಸದಾಶಿವ ಠೋಮರೆ, ಸಿದ್ರಾಯ ಹಿರೇಕೊಡಿ, ಸುಕುಮಾರ ಖೆಮಲಾಪೂರೆ, ವಿರೂಪಾಕ್ಷ ಗೌಡಾಡಿ, ಯಮನಪ್ಪ ಭಜಂತ್ರಿ, ಭೂಪಾಲ ಪುಣೇಕರ, ಮೋಹನ ಮೇಖಳಿ, ಧನಂಜಯ ಖೆಮಲಾಪೂರೆ, ಪ್ರಮೋದ ಖೆಮಲಾಪೂರೆ, ಮಾಯಪ್ಪ ಭಜಂತ್ರಿ, ಮಾಯಪ್ಪ ಹಿರೇಕೊಡಿ, ಸದಾಶಿವ ಹಿರೇಕೊಡಿ ವಿತರಿಸಿದರು.
WhatsApp Group Join Now
Telegram Group Join Now
Share This Article