♦ ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು : ಡಾ.ವೀರಣ್ಣ ಚರಂತಿಮಠ
ಬಾಗಲಕೊಟೆ: ದೇಶದ ಸಮರ್ಥ ನಾಯಕ ಹಾಗೂ ಸಮರ್ಥ ಸೈನಿಕರಿಂದ ಅಪರೇಷನ್ ಸಿಂಧೂರ್ ಮೂಲಕ ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯ ಗೋತ್ತಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಭಾರತೀಯ ಜನತಾ ಪಕ್ಷ ನಗರ ಮಂಡಳವತಿಯಿಂದ ಶ್ರೀ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪಾಕ್ ವಿರುದ್ದ ಯುದ್ದದಲ್ಲಿ ಭಾರತ ಜಯಶಾಲಿಯಾಗಲಿ, ದೇಶದ ವೀರ ಯೋಧರಿಗೆ ಶಕ್ತಿ ತುಂಬಿ ಆತ್ಮಸ್ಥೈರ್ಯ ಬಲಗೊಳ್ಳಲಿ, ಯೋಧರಿಗೆ ಹಾಗೂ ಯೋಧರ ಕುಟುಂಬಕ್ಕೂ ದೇವರ ಅನುಗ್ರಹ ಇರಲೆಂದು ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಮಾತನಾಡಿದರು.
ಸುಮಾರು ೭೫ ವರ್ಷಗಳಿಂದ ಈ ಮಗ್ಗಲ ಮುಳ್ಳು ಪಾಕಿಸ್ತಾನ ಒಂದಿಲ್ಲಾ ಒಂದು ಕಾರಣದಿಂದ ಭಾರತ ತಂಟೆಗೆ ಬರುತ್ತಿತ್ತು, ಆದರೆ ಇವತ್ತು ಸತ್ತ ಹಾವು ಆದಂಗ ಆಗಿದೆ, ಅದು ಒಂದು ದೇಶ ಎಂಬ ಭಾವನೆನೆ ಇಲ್ಲದಾಗಿದೆ, ಆದರೆ ಭಾರತದ ನೇತೃತ್ವ ಬಹಳ ಸದೃಡವಾಗಿದೆ, ಪ್ರಧಾನ ಮಂತ್ರಿಗಳು ಅತಿ ಸೂಕ್ಷಾತ್ಮಿ ಸೂಕ್ಷ್ಮ ವಿಚಾರಗಳನ್ನು ತೆಗೆದುಕೋಂಡು, ಎಲ್ಲ ರೀತಿ ದಾಳಿಯನ್ನು ಭಾರತ ಮಾಡಿದೆ, ಪಾಕಿಸ್ತಾನದ ೧೫ ಪ್ರಮುಖ ನಗರ ಮೇಲೆ ದಾಳಿ ಮಾಡಿ ಅವರ ಉತ್ತರಕ್ಕೆ ತಕ್ಕ ಪತ್ಯುತ್ತರ ಕೋಡುವಲ್ಲಿ ಭಾರತ ಯಶಸ್ವಿಯಾಗಿದೆ, ಈ ಭಾರಿ ಮಾತ್ರ ಪಾಕಿಸ್ತಾನ ಛಿದ್ರ ಛಿದ್ರವಾಗುವಲ್ಲಿ ಎರಡು ಮಾತಿಲ್ಲಾ, ಪಾಕಿಸ್ತಾನದ ಹುಟ್ಟನ್ನು ಅಡಗಿಸುವಲ್ಲಿ ಯಾವುದೆ ಸಂಶಯವಿಲ್ಲ, ಪ್ರಧಾನ ಮಂತ್ರಿಗಳು, ಗೃಹ ಸಚಿವರು, ರಕ್ಷಾ ಮಂತ್ರಿಗಳು, ಮೂರು ಸೇನಾ ಮುಖ್ಯಸ್ಥರು ಕೂಡಿಕೊಂಡು ಎಲ್ಲರೂ ವಾರ್ ರೂಮ್ ನಲ್ಲಿ ಕುಳಿತು ಸತತ ಮಾನೆಟ್ರಿಂಗ್ ಮಾಡತಿದ್ದರು, ಮಿಸಲೆಗಳನ್ನು ಆಕಾಶದಲ್ಲಿಯೇ ಹೊಡೆದಾಕಿದರು, ಯಾರಿಗೂ ಕೂಡಾ ಹಾನಿಯಾಗದಂತೆ ಜಾಗೃತವಹಿಸಿದ್ದರು, ಅತ್ಯಾಧುನಿಕ ತರಬೇತಿಯನ್ನು ನಮ್ಮ ಸೈನಿಕರು ಹೊಂದಿದ್ದಾರೆ, ವಿಶ್ವಕ್ಕೆ ಭಾರತದ ತಾಕತ್ತು ಗೊತ್ತಾಗಿದೆ, ಒಬ್ಬ ಸದೃಡ ಪ್ರಧಾನಿಯಿದ್ದರೆ ದೇಶ ಯಶಸ್ವಿಯಾಗಿ ನಡೆಯುತ್ತದೆ ಎಂಬುದಕ್ಕೆ ಇದು ಉದಾರಣೆಯಾಗಿದೆ ಎಂದರು.
ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ ಪಾಕಿಸ್ತಾನದ ಜೋತೆ ಇದು ಭಾರತದ ಕೋನೆ ಯುದ್ದವಾಗಿದೆ, ಜಗತ್ತಿನ ನಕಾಶದಿಂದಲೆ ಪಾಕಿಸ್ತಾನವನ್ನು ಕಿತ್ತುಹಾಕುವ ಸಂಕಲ್ಪ ಮಾಡಿದ್ದಾರೆ, ನಮ್ಮ ಸೈನೀಕರ ಎಷ್ಟು ಪ್ರಶಂಶೆ ಮಾಡಿದರು ಕಡಿಮೆ, ಯಾವುದೆ ನಾಗರಿಕರನ್ನು ಹೊಡಿಯದೆ ಬರಿ ಉಗ್ರ ಹಾಗೂ ಉಗ್ರರ ಕ್ಯಾಂಪಗಳ ಮೇಲೆ ದಾಳಿ ಮಾಡಿದ್ದು ಇಡಿ ಜಗತ್ತೆ ಮೆಚ್ಚಿಕೊಳ್ಳುತ್ತಿದೆ, ಜಗತ್ತು ಭಾರತದ ಜೋತಗೆ ಇದೆ, ಜೋತಗೆ ಭಾರತದೊಳಗಿನ ಅನೇಕ ದೇಶದ್ರೋಹಿಗಳ ವಿರುದ್ದವವು ಹೋರಾಡಬೇಕಿದೆ, ಬರುವಂತ ದಿನಗಲ್ಲಿ ಉಗ್ರಗಾಮಿ ಎಂಬ ಪದವೆ ನಿರ್ನಾಮವಾಗುತ್ತದೆ ಎಂದರು.
ಮುಖಂಡರಾದ ಜಿ.ಎನ್. ಪಾಟೀಲ. ಡಾ.ಎಂ.ಎಸ್.ದಡ್ಡೆನ್ವರ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ.ಶ್ರೀಧರ ನಾಗರಬೇಟ್ಟ, ರಾಜು ನಾಯ್ಕರ, ನಗರಸಭೇ ಅಧ್ಯಕ್ಷೆ ಸವಿತಾ ಲಂಕೆನ್ನವರ, ಯಲಪ್ಪ ನಾರಾಯಣಿ, ಭಾಗೀರತಿ ಪಾಟೀಲ, ಭುವನೇಶ್ವರಿ ಕುಪ್ಪಸ್ತ, ಲಕ್ಷ್ಮೀ ನಾರಯಣ ಕಾಸಟ, ಬಸವರಾಜ ಯಂಕಂಚಿ, ಸಂಗಣ್ಣ ಶಿರೂರ, ಮಲ್ಲಿಕಾರ್ಜುನ ಮಠ, ಸಂಗಪ್ಪ ಕುಪ್ಪಸ್ತ, ಪರಮೇಶ್ವರ ಮದೂರ, ಕಲ್ಲಪ್ಪ ಭಗವತಿ, ಕ್ಯಾಪ್ಟನ್ ಅರ್ಜುನ ಕೋರಿ, ರಾಜು ದಂಡಿಗಿ, ಮಾನೆಶ ಅಂಬಿಗೇರ, ನೀಲಪ್ಪ ಬೇವೂರ, ಶಂಕರ ತೇಲಕರ, ಶಂಕರ ಅರಷಿಣಗುಡಿ, ಶ್ರೀಶೈಲ ಗಾಣಿಗೇರ, ಅಂಬಾಜಿ ಜೋಷಿ, ಚೆನ್ನಯ್ಯ ಹಿರೇಮಠ, ದ್ಯಾವಪ್ಪ ರಾಕುಂಪಿ, ರೇಖಾ ಕಲಬುರಗಿ, ಸುಜಾರ ಮಜ್ಜಗಿ, ಪ್ರೇಮಾ ಅಂಬಿಗೇರ, ಅನಿತಾ ಸರೋಧೆ, ಮುತ್ತಣ್ಣ ಕುರಬರ, ಚಂದ್ರಕಾಂತ ಖಾತೆದಾರ, ಚಂದ್ರು ರಾಮವಡಗಿ, ಅಶೋಕ ಪವಾರ, ನಾಗರಾಜ ನಾರಾಯಣಕರ, ರವಿ ನಾಯಕ್, ದೂಳಪ್ಪ ಕೊಪ್ಪದ,ಆನಂದ ಕೋಟಗಿಸೇರಿದಂತೆ ಅನೇಕರು ಇದ್ದರು.
ಪೋಟೋ ೦೧ -೦೨ ಶ್ರೀ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪಾಕ್ ವಿರುದ್ದ ಯುದ್ದದಲ್ಲಿ ಭಾರತ ಜಯಶಾಲಿಯಾಗಲಿ, ದೇಶದ ವೀರ ಯೋಧರಿಗೆ ಶಕ್ತಿ ತುಂಬಿ ಆತ್ಮಸ್ಥೈರ್ಯ ಬಲಗೊಳ್ಳಲಿ, ಯೋಧರಿಗೆ ಹಾಗೂ ಯೋಧರ ಕುಟುಂಬಕ್ಕೂ ದೇವರ ಅನುಗ್ರಹ ಇರಲೆಂದು ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.