ಯೋಗೇಶ್ವರ್ ಸ್ವಾರ್ಥಕ್ಕಾಗಿ ರಾಜಕೀಯ ಮಾಡುವ ವ್ಯಕ್ತಿ: ಡಿ.ವಿ. ಸದಾನಂದಗೌಡ ಸಿಪಿವೈ ವಿರುದ್ಧ ವಾಗ್ದಾಳಿ

Ravi Talawar
ಯೋಗೇಶ್ವರ್ ಸ್ವಾರ್ಥಕ್ಕಾಗಿ ರಾಜಕೀಯ ಮಾಡುವ ವ್ಯಕ್ತಿ: ಡಿ.ವಿ. ಸದಾನಂದಗೌಡ ಸಿಪಿವೈ ವಿರುದ್ಧ ವಾಗ್ದಾಳಿ
WhatsApp Group Join Now
Telegram Group Join Now

ರಾಮನಗರ: “ಸ್ವಾರ್ಥಕ್ಕಾಗಿ ರಾಜಕೀಯ ಮಾಡುವ ವ್ಯಕ್ತಿ ಯೋಗೇಶ್ವರ್​​. ಸಿ.ಎಂ ಹಾಗೂ ಡಿಸಿಎಂ ನಿನ್ನೆ ಹಿಂದೆ ನಿಲ್ಲಿಸಿದ್ದರು. ಇದು ಮುಂದಿನ ದಿನಗಳ ಸೂಚನೆ ಏನೇ ಆದರೂ ಹಿಂದಿನ‌ ಬೆಂಚಿನಲ್ಲೇ ನಿಮಗೆ ಸೀಟು ಎಂಬ‌ ಸಂದೇಶ ರವಾನಿಸಿದ್ದಾರೆ” ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಸಿಪಿವೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ‌ ಸಲ್ಲಿಕೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಡಿ.ವಿ. ಸದಾನಂದಗೌಡರು, “ಯೋಗೇಶ್ವರ್​ ಆಧುನಿಕ ಭಗೀರಥ ಅಲ್ಲವೇ ಅಲ್ಲ. ಅದು ಬಿಜೆಪಿಯಿಂದ ಆಗಿರುವ ಕೆಲಸವಾಗಿದೆ‌. ನಾನು ಸಿಎಂ‌ ಆಗಿದ್ದಾಗ ಆರು ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರು ತುಂಬಿಸಿರುವುದು. ಯೋಗೇಶ್ವರ್​ಗೆ ನಾಚಿಗೆ ಆಗಬೇಕು. ಕಾಂಗ್ರೆಸ್ ಹಗರಣದ ಸರ್ಕಾರ, ಈಗ ಯೋಗೇಶ್ವರ್​ ಕೂಡ ಸೇರಿಕೊಂಡಿದ್ದಾರೆ. ನಿಖಿಲ್​ ಕುಮಾರಸ್ವಾಮಿ ಯಾವುದೇ ಸಂಶಯ ಇಲ್ಲದೆ ಗೆದ್ದೇ ಗೆಲ್ಲುತ್ತಾರೆ. ಗೂಂಡಾ ರಾಜಕಾರಣಕ್ಕೆ ಯೋಗೇಶ್ವರ್ ಕೂಡ ಸೇರಿಕೊಳ್ಳುತ್ತಾರೆ” ಎಂದು ವಾಗ್ದಾಳಿ ನಡೆಸಿದರು.

WhatsApp Group Join Now
Telegram Group Join Now
Share This Article