ಮನಸ್ಸು ಮತ್ತು ದೇಹವನ್ನು ಆರೋಗ್ಯ ಪೂರ್ಣಗೊಳಿಸುವುದೇ ಯೋಗ : ಕೆ ಬಿ ಕುಂಬಾಳಿ

Pratibha Boi
ಮನಸ್ಸು ಮತ್ತು ದೇಹವನ್ನು ಆರೋಗ್ಯ ಪೂರ್ಣಗೊಳಿಸುವುದೇ ಯೋಗ : ಕೆ ಬಿ ಕುಂಬಾಳಿ
WhatsApp Group Join Now
Telegram Group Join Now

ರನ್ನ ಬೆಳಗಲಿ: ಜೂ.೨೦., ಪಟ್ಟಣದ ಶ್ರೀ ಬಂದ ಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಬೆಳಗಲಿ ವಿದ್ಯಾವರ್ಧಕ ಸಂಘ ರನ್ನ ಬೆಳಗಲಿ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಉಚಿತ ಯೋಗ ಶಿಬಿರ ಒಂದು ವಾರದವರೆಗೆ ನಿರಂತರವಾಗಿ ಜರುಗಿದೆ.

ದೈಹಿಕ ಶಿಕ್ಷಕರಾದ ಕೆ ಬಿ ಕುಂಬಾಳಿ ಯೋಗ ಶಿಬಿರದ ರೂವಾರಿಗಳಾದ ಅವರು ಮನಸ್ಸು ಮತ್ತು ದೇಹವನ್ನು ಆರೋಗ್ಯ ಪೂರ್ಣಗೊಳಿಸುವುದೇ ಯೋಗವಾಗಿದೆ. ಈ ಏಳು ದಿನದಲ್ಲಿ ಕಲಿತ ಎಲ್ಲಾ ಆಸನಗಳಲ್ಲಿ ಪ್ರಮುಖ ಆಸನಗಳನಾದರು ಪ್ರತಿನಿತ್ಯ ಮನೆಯಲ್ಲಿ,ಮನೆಯ ಅಂಗಳದಲ್ಲಿ ದಿನದ ಒಂದು ಮುಂಜಾನೆ ಅಥವಾ ಸಾಯಂಕಾಲ ಅವಧಿಗಳಲ್ಲಿ ಮುಂದುವರೆಸಿಕೊಂಡು ಬನ್ನಿ ನಿಮ್ಮ ಆರೋಗ್ಯದ ಜೊತೆಗೆ ಶೈಕ್ಷಣಿಕ ಸಾಧನೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಪ್ರಾಣಾಯಾಮ ಅಭ್ಯಾಸವು ನಾಡಿಗಳನ್ನು ಸುದ್ದಿಗೊಳಿಸಿ, ಮಾನಸಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ. ಆಸನ, ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸ, ಆಧ್ಯಾತ್ಮಿಕವಾಗಿ ನಿಮ್ಮನ್ನು ಉನ್ನತ ಮನಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ ಹಾಗೂ ನಿಮ್ಮ ಬುದ್ಧಿ ಶಕ್ತಿಯ ಮೇಲೆಯು ಪ್ರಭಾವ ಬೀರುತ್ತದೆ ಎಂದು ತಿಳಿಸಿ, ಸೂರ್ಯ ನಮಸ್ಕಾರ, ಆಸನ,ಪ್ರಾಣಾಯಾಮ ಮತ್ತು ಯೋಗ ಕ್ರಿಯೆಗಳ ಬಗ್ಗೆ ತರಬೇತಿ ನೀಡಿದರು.

ಕಾರ್ಯಕ್ರಮದ ಆಯೋಜಕರಾದ ಎಸ್ ಬಿ ರಡರಟ್ಟಿ ಶಿಕ್ಷಕರು ಯೋಗ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿ ಸಮೂಹಕ್ಕೆ ಪ್ರತಿನಿತ್ಯ ಯೋಗ ಆಹಾರವನ್ನು ನೀಡಿ, ನಿತ್ಯ ಜೀವನದಲ್ಲಿ ಸಾತ್ವಿಕ ಆಹಾರದ ಬಳಕೆಯನ್ನು ಮಾಡಿ, ನಿಮ್ಮ ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಯೋಗದ ಜೊತೆಗೆ ಸಾತ್ವಿಕ ಆಹಾರ ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಶಿಕ್ಷಕರಾದ ಹನಮಂತ ಕುಂಬಾರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ವಿದ್ಯಾರ್ಥಿ,ವಿದ್ಯಾರ್ಥಿನಿಯರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article