ಚನ್ನಮ್ಮನ ಕಿತ್ತೂರ. ಇಡೀ ಜಗತ್ತಿಗೆ ಯೋಗದ ಮಹತ್ವವನ್ನು ಸಾರಿದ್ದು ನಮ್ಮ ಭಾರತ ದೇಶ, ಈ ಯೋಗದ ಮಹತ್ವವನ್ನು ಹೆಚ್ಚಿನ ಮಟ್ಟದಲ್ಲಿ ಅನುಷ್ಠಾನಕ್ಕೆ ತಂದು ಯೋಗ ದಿನಾಚರಣೆಯನ್ನು ಆಚರಣೆಗೆ ತಂದಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿಜೀಯವರು ಅದಕ್ಕಾಗಿ ನಾವೆಲ್ಲರೂ ಕೇವಲ ಇವತ್ತು ಒಂದು ದಿನ ಯೋಗ ಮಾಡದೆ ಪ್ರತಿಯೊಬ್ಬರೂ ಪ್ರತಿದಿನವೂ ನಮ್ಮ ಮನೆಗಳಲ್ಲಿ ಯೋಗ ಅಭ್ಯಾಸ ಮಾಡಿ ತಮ್ಮ ಶರೀರ ಹಾಗೂ ಸ್ವಾಸ್ತ್ಯ ಭಾರತ ನಿರ್ಮಾಣ ಮಾಡಲು ಯೋಗದಲ್ಲಿ ಪಾಲ್ಗೊಳ್ಳಬೇಕೆಂದು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಶನಿವಾರದಂದು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಇಂದು 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಿತ್ತೂರು ಮಂಡಲ ಅಧ್ಯಕ್ಷರಾದ ಶ್ರೀಕರ್ ಕುಲಕರ್ಣಿ, ಕಿರಣ ಪಾಟೀಲ, ಸಂದೀಪ ದೇಶಪಾಂಡೆ, ಸಿದ್ದು ಬೊಳನ್ನವರ, ಶಿವಾನಂದ ಹನುಮಸಾಗರ, ಪಾಪು ನರಗುಂದ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.