ಸಮರ್ಥನಂ ಅಂಗವಿಕಲ ಸಂಸ್ಥೆಯಿಂದ ಯೋಗ ಮತ್ತು ಧ್ಯಾನ ಕಾರ್ಯಕ್ರಮ

Ravi Talawar
ಸಮರ್ಥನಂ ಅಂಗವಿಕಲ ಸಂಸ್ಥೆಯಿಂದ ಯೋಗ ಮತ್ತು ಧ್ಯಾನ ಕಾರ್ಯಕ್ರಮ
WhatsApp Group Join Now
Telegram Group Join Now
 ಹೊಸ ಚೈತನ್ಯಕ್ಕೆ ಯೋಗ, ಧ್ಯಾನ ಸಹಕಾರಿ : ಮಂಜುಳಾ ಚುನಮರಿ

ಬೆಳಗಾವಿ:   .ಯೋಗವು ದೇಹದ ಸರ್ವಾಂಗಗಳಿಗೆ ಆಸನವಾದರೆ, ಧ್ಯಾನವು ಮನಸ್ಸು ಮತ್ತು ದೇಹವನ್ನು ನಿಯಂತ್ರಿಸುವ ವಜ್ರಾಯುಧವಾಗಿದೆ. ಯೋಗ, ಧ್ಯಾನ  ಇವರೆಡೂ ಮನುಷ್ಯನ  ಹೊಸ ಚೈತನ್ಯಕ್ಕೆ ಸಹಕಾರಿವಾಗಿವೆ ಎಂದು ಮಂಜುಳಾ ಚುನಮರಿ ಅವರು  ಸಂದೇಶ ನೀಡಿದರು.

ನಗರದ  ಸಮರ್ಥನಂ ಅಂಗವಿಕಲ ಸಂಸ್ಥೆಯ ಆವರಣದಲ್ಲಿ ಯೋಗದಾ ಸತ್ಸಂಗ ಧ್ಯಾನ ಮಂಡಳಿಯ ವತಿಯಿಂದ ಆಯೋಜಿಸಲಾದ ಅಂತರರಾಷ್ಟ್ರೀಯ ಯೋಗ ದಿನದ  ನಿಮಿತ್ತವಾಗಿ “ಯೋಗ ಮತ್ತು ಧ್ಯಾನದ ಮಹತ್ವ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯೋಗದ ಸತ್ಸಂಗ ಮಂಡಳಿಯವರು ಕೆಲವು ತಿಂಗಳುಗಳಿಂದ ವಾರಕ್ಕೆ ಒಂದು ಸಲ ಈ ಶಾಲೆಗೆ ಭೇಟಿ ನೀಡಿ, ವಿಶೇಷ ಚೇತನ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ, ಧೃಢಿಕರಣ ತಂತ್ರ ಹಾಗೂ ಪ್ರಾಣಾಯಾಮವನ್ನು ಕಲಿಸುತ್ತಿದ್ದು, ಅದರ ಪರಿಣಾಮವಾಗಿ ಅತೀ ಚಟುವಟಿಕೆಯ ಈ ಮಕ್ಕಳು ಕಾರ್ಯಕ್ರಮದಲ್ಲಿ ತಲ್ಲೀನರಾಗಿ, ಶಾಂತವಾಗಿ ಆಲಿಸಿದ್ದು ಈ ಕಾರ್ಯಕ್ರಮಕ್ಕೆ ಒಂದು ಹೊಸ ಮೆರಗನ್ನು ತಂದು ಕೊಟ್ಟಿತು.

ಯೋಗದ ಸತ್ಸಂಗ ಧ್ಯಾನ ಮಂಡಳಿಯ ಮುಖ್ಯಸ್ಥರಾದ  ಶಶಿಕಾಂತ ಚುನಮರಿ ,    ಬೆಳಗಾವಿ ಶಾಖೆಯ ಸಮರ್ಥನಂ ಅಂಗವಿಕಲ ಸಂಸ್ಥೆಯ ಮುಖ್ಯಸ್ಥರಾದ ಅರುಣ ಕುಮಾರ ಎಂ. ಜಿ.  ಸ್ವಾಗತಿಸಿದರು. 75 ಶಾಲಾ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಮತ್ತು ಯೋಗದ ಸತ್ಸಂಗ ಮಂಡಳಿಯ ಸದಸ್ಯರಾದ ಕರ್ನಲ್ ಮಾರನಬಸರಿ, ಪಟ್ಟಣಶೆಟ್ಟಿ  ಹಾಗೂ ಇತರರು  ಇದ್ದರು.

3 Attachments • Scanned by Gmail

WhatsApp Group Join Now
Telegram Group Join Now
Share This Article