ಬೆಟಗೇರಿ : ಇಲ್ಲಿನ ಶ್ರೀಕಾಳಿಕಾ ದೇವಿ ಸಮುದಾಯ ಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಬೆಂಗಳೂರ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ (ರಿ), ಗದಗ ಇವರ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ದೊಡ್ಡಾಟ ಕಲಾವಿದರಾದ ಪ್ರಕಾಶ ಬಡಿಗೇರ ಹಾಗೂ ಶ್ರೀಕ್ಷೇತ್ರ ವರವಿಯ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟನ ನೂತನ ಸದಸ್ಯರಾದ ಶ್ರೀಧರ ಕೊಣ್ಣೂರ ಅವರನ್ನು ಸನ್ಮಾನಿಸಲಾಯಿತು. ಹಿರಿಯ ರಂಗ ಕಲಾವಿದರಾದ ಪ್ರೊ. ಮುರಲೀಧರ ಸಂಕನೂರ, ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಕಡ್ಲಿಕೊಪ್ಪ, ಅಧ್ಯಾಪಕರಾದ ವಿಶ್ವನಾಥ ಯ. ಕಮ್ಮಾರ,
ರಂಗ ನಿರ್ದೇಶಕರಾದ ಫಣೀಂದ್ರಚಾರ್ಯ ದ್ಯಾಮೇನಹಳ್ಳಿ, ರಂಗ ಕಲಾವಿದರಾದ ವಿಜಯಕುಮಾರ ಜಿತೂರಿ, ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ಮೌನೇಶ ಸಿ. ಬಡಿಗೇರ(ನರೇಗಲ್ಲ) ಸೇರಿದಂತೆ ಗಣ್ಯರು ಭಾಗವಹಿಸಿದ್ದರು.


