ಮುಧೋಳ: ಜೂ.೦೭., ತಾಲೂಕಿನ ಮೆಟಗುಡ್ಡ ಗ್ರಾಮದ ಡೋಣಿಯವರ ತೋಟದ ಶಾಲೆಯಲಿ ವಿಶ್ವಪರಿಸರ ದಿನಾಚರಣೆಯ ಜೊತೆಗೆ ರನ್ನಬೆಳಗಲಿಯ ರನ್ನ ಭೂಮಿ ಪ್ರಕಾಶನ ದಿಂದ ನೇತ್ರಾವತಿ ಎಸ್.ರಾಜಮಾನೆ ಅವರು ಸುರೇಶ ಎಲ್.ರಾಜಮಾನೆ ಅವರ ಸಾಹಿತ್ಯಕೃತಿಗಳ ಮೇಲೆ ಸಂಪಾದಿಸಿದ ಮಿಮರ್ಶಾಸಂಕಲನಗಳ ಕೃತಿ ಸೂಯಾಂತರಂಗ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಿತು.ಸಸಿ ನೆಡುವುದರಮೂಲಕ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು
ಬಾಗಲಕೋಟೆಯ ವೈದ್ಯರು ಸಾಹಿತಿಗಳೂ ಆಗಿರುವ ಡಾ.ಪ್ರಕಾಶ ಡಂಗಿ, ಸರಕಾರಿ ಅಭಿಯಂತರರಾಗಿರುವ ವೈ.ಎಸ್.ಮೇತ್ರಿ, ಸತ್ಯ ಸಾಯಿ ಟ್ರ? ನ ಚಂದ್ರಶೇಖರ ಮಾಸರೆಡ್ಡಿ, ರನ್ನಭೂಮಿ ಪ್ರಕಾಶನದ ಪ್ರಕಾಶಕರಾದ ನೇತ್ರಾವತಿ, ಬಹುತ್ವ ಭಾರತ ಪೌಂಡೇ?ನ್ ನ ಪೋ?ಕರಾದ ಚಿರಂಜೀವಿ ರೋಡಕರ್ ಶಾಲೆಯ ಮುಖ್ಯಗುರುಗಳಾದ ಸುರೇಶ ಎಲ್.ರಾಜಮಾನೆ, ವಿಶ್ವಾಸ, ಅಕ್ಷರ ಪುಸ್ತಕ ಬಿಡುಗಡೆಗೊಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರನ್ನ ಭೂಮಿ ಪ್ರಕಾಶನದ ಪ್ರಕಾಶಕರಾದ ಶ್ರೀಮತಿ ನೇತ್ರಾವತಿ ನಮ್ಮ ಪ್ರಕಾಶನದಿಂದ ಪ್ರಕಟಗೊಂಡ ಮೂರನೆ ಕೃತಿ ಇದಾಗಿದ್ದು, ಯುವಕವಿ ಸುರೇಶ ರಾಜಮಾನೆಯವರ ಈವರೆಗಿನ ಸಾಹಿತ್ಯ ಕೃಷಿಯಲ್ಲಿ ಮೂಡಿಬಂದ ಅವರ ಕವನಸಂಕಲನಗಳಿಗೆ ನಾಡಿನ ಹಿರಿಯ,ಕಿರಿಯರು ಬರೆದ ವಿಮರ್ಶೆ ಅಭಿಪ್ರಾಯಗಳ ಲೇಖನಗಳ ಸಂಗ್ರಹ ಇದಾಗಿದ್ದು “ಸೂಯಾಂತರಂಗ”ದ ಮೂಲಕ ಕಾವ್ಯಾಂತರಂಗವನ್ನು ಕಾಪಿಡುವ ಕೆಲಸಮಾಡಿದ ತೃಪ್ತಿ ಇದೆ ಎಂದರು. ಕೃತಿ ಪರಿಚಯಿಸಿದ ಚಿರಂಜೀವಿ ರೋಡಕರ್ ಅವರು ಮಾತನಾಡಿ ಸಾಹಿತ್ಯ ಸರ್ವರಿಗೂ ಒಲಿಯುವುದಿಲ್ಲ ಸುರೇಶ ರಾಜಮಾನೆಯವರು ಹೈಸ್ಕೂಲಿನಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು ಇಂದು ಆರು ಕೃತಿಗಳನ್ನು ರಚಿಸಿದ್ದಲ್ಲದೆ ಬದುಕಿನೊಂದಿಗೆ ಬರಹವನ್ನು ಸಮ್ಮಿಳಿತಗೊಳಿಸಿ ಕಾವ್ಯದ ಮೂಲಕ ಹೊರಹಾಕಿ ಶಿಕ್ಷಕರಾಗಿಯೂ ಬರಹಗಾರರಾಗಿಯು ಎಲ್ಲರಿಗೂ ಮಾದರಿಯಾಗಿದ್ದಾರೆ. ಸುಮಾರು ೨೦ ಜನ ಹಿರಿಯ ಕಿರಿಯ ಲೇಖಕರು ಇವರ ಕಾವ್ಯದ ಕುರಿತು ಬರೆದ ಲೇಖನಗಳು ಈ ಕೃತಿಯಲ್ಲಿವೆ ಅವು ಅವರ ಸಾಹಿತ್ಯದ ವಿವಿಧ ಆಯಾಮಗಳನ್ನು ಪರಿಚಯಿಸುವುದರಲ್ಲಿ ವಿಶೇ?ವೆನಿಸುವಂತಿವೆ ಎಂದರು. ಸತ್ಯ ಸಾಯಿ ಟ್ರಸ್ಟ್ ನ ಚಂದ್ರಶೇಖರ ಮಾಸರಡ್ಡಿ ಅವರು ಪರಿಸರ ದಿನಾಚರಣೆಯ ಕುರಿತು ಮಾತನಾಡಿದರು. ಶಿಕ್ಷಕ ವೃತ್ತಿಯಲ್ಲಿ ಹದಿನೈದು ವ?ಗಳನ್ನು ಪೂರೈಸಿದ ಸವಿನೆನಪಿಗಾಗಿ ಶಾಲಾ ಅವರಣದಲ್ಲಿ ಸಸಿಗಳನ್ನು ನೆಡುವುದಲ್ಲದೆ ಸೂಯಾಂತರಂಗ ಪುಸ್ತಕದ ಮೂಲಕ ಶುಭಹಾರೈಸಿ ಸರ್ವರಿಗೂ ಕೃತಜ್ಞತೆಯನ್ನು ಶಾಲೆಯ ಮುಖ್ಯಗುರುಗಳಾದ ಸುರೇಶ ಎಲ್.ರಾಜಮಾನೆ ಸಲ್ಲಿಸಿದರು ಹುಟ್ಟುಹಬ್ಬಗಳ ನಿಮಿತ್ಯ ಮಾತ್ರ ಅವುಗಳನ್ನು ಸಾರ್ವಜನಿಕಗೊಳಿಸಿಕೊಂಡು ಸಮಾಜದ ಕಾರ್ಯ ಮಾಡುವಲ್ಲಿ ತುಂಬಾ ಸಾರ್ಥಕತೆಯಿದೆ ಎಂದರು. ಬಹುತ್ವ ಭಾರತ ಪೌಂಡೇ?ನ್ ವಿಶ್ವಖುಷಿ ಪ್ರಕಾಶನ, ಸತ್ಯ ಸಾಯಿ ಟ್ರಸ್ಟ್ ನ ಎಲ್ಲರೂ ಶ್ರೀಮತಿ ನೇತ್ರಾವತಿ ಸುರೇಶ ರಾಜಮಾನೆ ದಂಪತಿಗಳಿಗೆ ಸನ್ಮಾನಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲೆ ಮುದ್ದುಮಕ್ಕಳು, ಡೋಣಿತೋಟದ ಶಾಲೆಯ ಮೇಲುಸ್ತುವಾರಿ ಸಮಿತಿಯ ಪದಾದಿಕಾರಿಗಳು, ಸತ್ಯ ಸಾಯಿ ಟ್ರಸ್ಟನ ಸರ್ವ ಸದಸ್ಯರು ಉಪಸ್ಥಿತರಿದ್ದರು.