ಧಾರವಾಡ : ವಿಶ್ವ ಪರಿಸರದ ದಿನದ ಅಂಗವಾಗಿ ಮಾಜಿಮಹಾಪೌರರಾದ ಈರೇಶ ಅಂಚಟಗೇರಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಆವರಣದ ರಾಜೀವಗಾಂಧಿ ಸಿಬಿಎಸಸಿ ಶಾಲೆಯ ಮಕ್ಕಳೊಂದಿಗೆ ಬಹುಪಯೋಗಿ ಸಸಿಗಳನ್ನು ನೆಟ್ಟು ಮಕ್ಕಳಿಗೆ ಹಾಗು ಶಿಕ್ಷಕರಿಗೆ ವಿಶ್ವ ಪರಿಸರ ದಿನಾಚರಣೆ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿಮಹಾಪೌರರೊಂದಿಗೆ ಬಸವರಾಜ ತಾಳಿಕೋಟಿ, ಬಸವರಾಜ ವಸ್ತ್ರದ ,ಜಗದೀಶ್ ಮಳಗಿ, ಪ್ರಾಂಶುಪಾಲರು ಶ್ರೀಧರ ಜಾಧವ, ಬಾಳೆಕುಂದ್ರಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.