ಯಾವ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತರಾಗಬಾರದು: ಆರ್ ಬಿ ತಿಮ್ಮಾಪುರ

Ravi Talawar
ಯಾವ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತರಾಗಬಾರದು: ಆರ್ ಬಿ ತಿಮ್ಮಾಪುರ
WhatsApp Group Join Now
Telegram Group Join Now

ರನ್ನ ಬೆಳಗಲಿ: ಜೂ.೨೪., ಪಟ್ಟಣದ ಶ್ರೀ ಲಕ್ಷ್ಮೀ ನಗರದಲ್ಲಿ ಜಿಲ್ಲಾ ಪಂಚಾಯತ, ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಬಾಗಲಕೋಟೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಆಶ್ರಯದಲ್ಲಿ
ಮುಧೋಳ ತಾಲೂಕಿನ ರನ್ನ ಬೆಳಗಲಿ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕಟ್ಟಡದ ಕಾಮಗಾರಿಯ ಭೂಮಿ ಪೂಜಾ ಸಮಾರಂಭ ಜರಗಿತು.

ಭೂಮಿ ಪೂಜೆ ನೆರವೇರಿಸಿದ ಆರ್. ಬಿ. ತಿಮ್ಮಾಪೂರ ಮಾನ್ಯ ಅಬಕಾರಿ ಸಚಿವರು ಕರ್ನಾಟಕ ಸರ್ಕಾರ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಯಾವ ವಿದ್ಯಾರ್ಥಿಯು ಶಿಕ್ಷಣದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನು ಬಾಗಲಕೋಟೆ ಇದರ ಕಟ್ಟಡ ಕಾಮಗಾರಿಯನ್ನು ನೀರಾವರಿ ಇಲಾಖೆಯಿಂದ ಎಸ್.ಸಿ.ಎಸ್.ಪಿ / ಬಿ.ಎಸ್.ಪಿ ಅನುದಾನದಡಿ ರೂ ೪೯೫.೦೦ ಲಕ್ಷಗಳಲ್ಲಿ ಪ್ರಾರಂಭಿಸಲಾಗಿದ್ದು, ಪಟ್ಟಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವನ್ನು ಬಾಡಿಗೆ ಕಟ್ಟಡದಲ್ಲಿ ನಿರ್ವಹಿಸಲಾಗುತ್ತಿದ್ದು, ಈ ಕಾಮಗಾರಿ ಪೂರ್ಣಗೊಂಡ ನಂತರ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತಮ ವ್ಯವಸ್ಥೆ ಅಡಿಯಲ್ಲಿ ವ್ಯಾಸಂಗ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ ಕಿವಡಿ, ಪ,ಪಂ ಸದಸ್ಯರಾದ ಪ್ರವೀಣ ಪಾಟೀಲ,ನೀಲಕಂಠ ಸೈದಾಪುರ, ಮುಬಾರಕ ಅತ್ತಾರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಮೋಹನ್ ಕೋರಡ್ಡಿ, ತಾಲೂಕ ಪಂಚಾಯತ್ ಕಾರ್ಯ ನಿರ್ವಣಾಧಿಕಾರಿ ಉಮೇಶ ಸಿದ್ನಾಳ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರಾದ ಮಹೇಶ ದಂಡನ್ನವರ, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕರಾದ ಗೋವಿಂದ ರಾಟೋಡ, ಇಂಜಿನಿಯರ್ ರೂಪಾ ಹೊಸಮನಿ, ಪಟ್ಟಣ ಮುಖ್ಯಾಧಿಕಾರಿಗಳಾದ ಎನ್ ಎ ಲಮಾಣಿ,ಗುತ್ತಿಗೆದಾರರಾದ ಮುರಳಿ ಗೌರ,ಮುಖಂಡರಾದ ಸಂಗಪ್ಪ ಅಮಾತಿ, ಮಲ್ಲಪ್ಪ ಮಲಾವಡಿ, ಸದಾಶಿವ ಹಿಡಕಲ, ಲಕ್ಕಪ್ಪ ಹಂಚಿನಾಳ, ಮುದಕಪ್ಪ ದೋಬಸಿ, ಯಮಣಪ್ಪ ದೊಡಮನಿ, ಚೆನ್ನಪ್ಪ ಜಾಲಿಕಟ್ಟಿ, ಕರೆಪ್ಪ ಬಾವಿಮನಿ, ಮಹಾದೇವ ಹಾದಿಮನಿ,ಮಲ್ಲಪ್ಪ ಹೊಸಪೇಟೆ,ಯಮನಪ್ಪ ಪೂಜೇರಿ, ಅಶೋಕಗೌಡ ಪಾಟೀಲ, ಶಿವು ಗೌರಣ್ಣವರ, ಸಿದ್ದು ಮಾಳಿ, ಮಹಾಲಿಂಗಪ್ಪ ಹಿಕಡಿ, ಮಲ್ಲಪ್ಪ ಸವಳಿ, ಸಂಗಪ್ಪ ಸಂಕ್ರಟ್ಟಿ, ಹಣಮಂತ ಪೂಜೇರಿ,ಮುತ್ತಪ್ಪ ಶಂಕ್ರಟ್ಟಿ, ಸಂತೋ? ಮಲಾವಡಿ, ಲಕ್ಷ್ಮಣ ಡೋಕ್ವಗೋಳ,ಸಾಗರ ಹವಾಲ್ದಾರ, ಲಕ್ಷ್ಮಣ ಹಂಚಿನಾಳ, ಈರಪ್ಪ ಗಾಣಿಗೇರ ಇನ್ನಿತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article