ಮದುವೆ ವಿನೋದ ಒಗಟುಗಳು; ಸಾಹಿತ್ಯ ಭವನದಲ್ಲಿ ಜೂನ್‌.14ರಂದು

Ravi Talawar
ಮದುವೆ ವಿನೋದ ಒಗಟುಗಳು; ಸಾಹಿತ್ಯ ಭವನದಲ್ಲಿ ಜೂನ್‌.14ರಂದು
WhatsApp Group Join Now
Telegram Group Join Now
ಬೆಳಗಾವಿ 11 – ನಗರದ ಹಾಸ್ಯಕೂಟ ಮತ್ತು ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೧೪ ಶನಿವಾರ ಸಾ. ೪-೩೦ ಕ್ಕೆ ಸಾಹಿತ್ಯ ಭವನದಲ್ಲಿ “ಮದುವೆ ವಿನೋದ ಒಗಟುಗಳು” ಎಂಬ ಹಾಸ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಧ್ಯಕ್ಷತೆಯನ್ನು ಸಾಹಿತಿ ಪ್ರೊ ಎಂ.  ಎಸ್. ಇಂಚಲ ವಹಿಸಿಕೊಳ್ಳಲಿದ್ದು ನಗೆಮಾತುಗಾರ ಜಿ. ಎಸ್. ಸೋನಾರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಪ್ರಾಯೋಜಕತ್ವವನ್ನು  ಕೇಂದ್ರ ಉಗ್ರಾಣ ನಿವೃತ್ತ ಅಧಿಕಾರಿ ಕೀರ್ತಿನಾಥ ವೆಂ. ಮುಳಗುಂದ ವಹಿಸಿಕೊಂಡಿದ್ದಾರೆ.
ಶ್ರೀಮತಿ ಶೈಲಜಾ ಕುಲಕರ್ಣಿ, ಶ್ರೀಮತಿ ಸುನಂದಾ ಹಾಲಬಾವಿ, ಎ ಎ ಸನದಿ ಮತ್ತು ಶ್ರೀಮತಿ   ರಾಜೇಶ್ವರಿ ಹಿರೇಮಠ, ಡಾ. ಅ. ಬ.  ಇಟಗಿ  ಮದುವೆಯಲ್ಲಿರುವ ವಿನೋದ ಒಡಪುಗಳನ್ನು ಹಂಚಿಕೊಳ್ಳಲಿದ್ದಾರೆ. ತಾನಾಜಿ ನಿರೂಪಿಸಲಿದ್ದಾರೆ.
WhatsApp Group Join Now
Telegram Group Join Now
Share This Article