ಲೋಕ ಕಲ್ಯಾಣಾರ್ಥಕ್ಕಾಗಿ 365 ದಿನಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ-ಕಲ್ಲೂರು ವೆಂಕಟೇಶುಲು ಶೆಟ್ಟಿ

Ravi Talawar
ಲೋಕ ಕಲ್ಯಾಣಾರ್ಥಕ್ಕಾಗಿ 365 ದಿನಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ-ಕಲ್ಲೂರು ವೆಂಕಟೇಶುಲು ಶೆಟ್ಟಿ
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 128;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 40;
WhatsApp Group Join Now
Telegram Group Join Now

ಬಳ್ಳಾರಿ ಜುಲೈ 08. ಬಳ್ಳಾರಿ ನಗರದ ವಿವಿ ಎಸ್ ಎಸ್ ಟ್ರಸ್ಟ್ ಕಚೇರಿಯಲ್ಲಿ ಫೆಬ್ರವರಿ 16 2025 ರಿಂದ ಲೋಕಕಲ್ಯಾಣಾರ್ಥಕ್ಕಾಗಿ 25-30 ಮಹಿಳೆಯರಿಂದ ವಿಷ್ಣು ಸಹಸ್ರನಾಮ ಪಾರಾಯಣವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮ ನಿರಂತರವಾಗಿ ಒಂದು ವರ್ಷ ಕಾಲ ನಡೆಯುತ್ತಿದೆ ಎಂದು ವಿವಿಎಸ್ಎ ಸ್ ಟ್ರಸ್ಟ್ ಅಧ್ಯಕ್ಷರಾದ ಕಲ್ಲೂರು ವೆಂಕಟೇಶುಲು ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮ ವಿವಿಎಸ್ ಎಸ್ ಟ್ರಸ್ಟಿನ ಅಧ್ಯಕ್ಷರಾದ ವೆಂಕಟೇಶುಲು ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.
ಪ್ರತಿದಿನ ಸಾಯಂಕಾಲ 6:00 ಗಂಟೆಯಿಂದ 7:30 ವರೆಗೆ ವಿಷ್ಣು ಸಹಸ್ರನಾಮ ಪಾರಾಯಣ ಇದರ ಜೊತೆಗೆ ಓಂಕಾರ ನಾದ, ಕನಕಧಾರ ಮಹಾಲಕ್ಷ್ಮಿ ಸ್ತೋತ್ರ , ಅಷ್ಠ ಲಕ್ಷ್ಮಿ ಸ್ತೋತ್ರ , ಇದರ ಜೊತೆಗೆ ಪ್ರತಿ ಮಂಗಳವಾರ ಮಣಿದೀಪ ವರ್ಣನೆ ಇನ್ನೂ ಇತರ ಕಾರ್ಯಕ್ರಮಗಳು ನಡೆಯುತ್ತವೆ ಎಂದು , ಹಾಗೂ ಪ್ರತಿದಿನ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಲಲಾಗಿದೆ ಎಂದು ವೆಂಕಟೇಶುಲು ಶೆಟ್ಟಿ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article