ನೀತಿ ಸಂಹಿತೆ ಉಲ್ಲಂಘನೆ : ೧೦೬ ಪ್ರಕರಣ ದಾಖಲು

MK HasiruKranti
ನೀತಿ ಸಂಹಿತೆ ಉಲ್ಲಂಘನೆ : ೧೦೬ ಪ್ರಕರಣ ದಾಖಲು
WhatsApp Group Join Now
Telegram Group Join Now
ಬಾಗಲಕೋಟೆ : ಮಾರ್ಚ ೩೧ (ಕರ್ನಾಟಕ ವಾರ್ತೆ) : ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ ಒಟ್ಟು ೧೧೫ ಅಬಕಾರಿ ದಾಳಿಗಳನ್ನು ಜರುಗಿಸಿ ೧೦೬ ಪ್ರಕರಣಗಳನ್ನು ದಾಖಲಿ, ೯೨ ಜನ ಆರೋಪಿಗಳನ್ನು ಬಂಧಿಸಿ ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ಪ್ರಕರಣಗಳಲ್ಲಿ ೨೯೫.೫೫೦ ಲೀಟ ಮಧ್ಯ, ೧೬.೫೦೦ ಲೀಟರ ಗೋವಾ ರಾಜ್ಯದ ಮದ್ಯ, ೧೧೩೨೬.೫೦೦ ಲೀ ಬಿಯರ್, ೫೦ ಲೀ ಕಳ್ಳಬಟ್ಟಿ ಸಾರಾಯಿ, ೫೦೦ ಲೀ ಕೊಳೆ, ೫ ದ್ವಿಚಕ್ರವಾಹನ, ೨ ಕಾರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವರುಗಳ ಅಂದಾಜು ಒಟ್ಟು ಮೌಲ್ಯ ರೂ.೪೧.೮೭ ಲಕ್ಷ ಗಳಾಗಿದೆ.
ಈ ಪ್ರಕ್ರಿಯೆಯು ನಿರಂತರವಾಗಿದ್ದು, ಜಿಲ್ಲೆಯ ಯಾವುದೇ ಸ್ಥಳದಲ್ಲಿ ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಆಯಾ ಕಾರ್ಯವ್ಯಾಪ್ತಿಯ ಅಬಕಾರಿ ಅಧಿಕಾರಿಗಳ ಸಂಚಾರಿ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡಿರುವಂತಹ ವ್ಯಕ್ತಿಗಳ ವಿವರವನ್ನು ಗೌಪ್ಯವಾಗಿಡುವದಲ್ಲದೇ ಸರ್ಕಾರದಿಂದ ದೊರೆಯುವಂತಹ ರಹಸ್ಯ ಸೇವಾನಿಧಿಯನ್ನು ಸಹ ಗೌಪ್ಯತೆಯ ಮೂಲಕ ಪಾವತಿಸಲಾಗುವುದೆಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article