ನೌಕರರಿಗೆ ರಕ್ಷಣೆ ನೀಡಿ ವೀರಶೈವ ಲಿಂಗಾಯತ ನೌಕರರ ಸಂಘ

MK HasiruKranti
ನೌಕರರಿಗೆ ರಕ್ಷಣೆ ನೀಡಿ ವೀರಶೈವ ಲಿಂಗಾಯತ ನೌಕರರ ಸಂಘ
WhatsApp Group Join Now
Telegram Group Join Now
ಬಳ್ಳಾರಿ, ಏ.06.: ಪಾಲಿಕೆಯ ಕಿರಿಯ ಅಭಿಯಂತರ ಜಿ.ಎಂ. ವೀರೇಶ್ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕವು  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ನಿನ್ನೆ ದಿನ  ಪಾಲಿಕೆ ಸದಸ್ಯ ವಿ. ಕುಬೇರ ಎಂಬುವವರು. ವಿನಾಕಾರಣ ವೀರೇಶ್ ಅವರ ಮೇಲೆ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ. ಒಬ್ಬ ಸರ್ಕಾರಿ ನೌಕರನ ಮೇಲೆ ಸಾರ್ವಜನಿಕವಾಗಿ ನಡೆದ ಈ ದೌರ್ಜನ್ಯವು ನೌಕರರ ವಲಯದಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸಿದೆ.
ಸರ್ಕಾರಿ ನೌಕರರ ರಕ್ಷಣೆ:
ಕರ್ತವ್ಯನಿರತ ಅಥವಾ ಸಾರ್ವಜನಿಕ ಸೇವೆಯಲ್ಲಿರುವ ನೌಕರರ ಮೇಲೆ ಕೈ ಮಾಡುವುದು ಕಾನೂನುಬಾಹಿರವಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಆರೋಪಿಗಳ ವಿರುದ್ಧ ಕ್ರಮ:
ಜನಪ್ರತಿನಿಧಿಯಾಗಿ ಸಮಾಜಕ್ಕೆ ಮಾದರಿಯಾಗಬೇಕಾದ ಪಾಲಿಕೆ ಸದಸ್ಯರು, ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕವಾಗಿ ಹಲ್ಲೆ ನಡೆಸಿರುವುದು ಅವರ ಸ್ಥಾನಕ್ಕೆ ತಕ್ಕುದಲ್ಲದ ನಡವಳಿಕೆಯಾಗಿದೆ. ಹಲ್ಲೆ ನಡೆಸಿದ ವಿ. ಕುಬೇರ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಕರ್ತವ್ಯಕ್ಕೆ ಅಡ್ಡಿ:
ಸರ್ಕಾರಿ ನೌಕರನ ಕೆಲಸಕ್ಕೆ ಅಡ್ಡಿಪಡಿಸಿದ ಮತ್ತು ದೈಹಿಕವಾಗಿ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಬೇಕು.
ನೌಕರರ ಹಿತರಕ್ಷಣೆ ಮತ್ತು ನ್ಯಾಯದ ಪರವಾಗಿ ತಾವು ತಕ್ಷಣವೇ ಸ್ಪಂದಿಸಿ, ನೊಂದ ನೌಕರರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದೆ.
ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಂ.ಭದ್ರಯ್ಯ, ರಾಜಶೇಖರಗೌಡ, ಶಶಿಧರ,  ಕೋಳೂರು ವೆಂಕಟೇಶಗೌಡ, ಅಕ್ಕಿ ದರ್ಮೇಂದ್ರ, ಪಲ್ಲೇದ   ಜಗದೀಶ್ ಅನ್ನದಾನಯ್ಯಸ್ವಾಮಿ ಮೊದಲಾದವರಿದ್ದರು.
WhatsApp Group Join Now
Telegram Group Join Now
Share This Article