ಬಿಸಿಲಿನ ಬೇಗೆಯಲ್ಲಿದ್ದ ಬೆಳಗಾವಿಗೆ ತಂಪೆರೆದ ವರುಣರಾಯ

Ravi Talawar
ಬಿಸಿಲಿನ ಬೇಗೆಯಲ್ಲಿದ್ದ ಬೆಳಗಾವಿಗೆ ತಂಪೆರೆದ ವರುಣರಾಯ
WhatsApp Group Join Now
Telegram Group Join Now

ಬೆಳಗಾವಿ,ಏ.12: ಬಿಸಿಲಿನಿ ಬೇಗೆಯಲ್ಲಿ ಬೆಂದು ಹೋಗುತ್ತಿದ್ದ ಬೆಳಗಾವಿಗರಿಗೆ ವರುಣರಾಯ ತಂಪೆನ್ನೆರೆದಿದ್ದಾನೆ. ಮಧ್ಯಾಹ್ನದಿಂದಲೇ ಮೋಡ ಕವಿದು ೪ ಸುಮಾರಿಗೆ ಶುರುವಾದ ಮಳೆ ಅರ್ಧಗಂಟೆ ಸುರಿದಿದೆ.

ಕೆಎಲ್‌ಇ, ಕ್ಯಾಂಪ ಪ್ರದೇಶ, ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಖಡೆಬಜಾರ್, ಗಣಪತಿಗಲ್ಲಿ, ಕಾಲೇಜು ರಸ್ತೆ, ಕೋರ್ಟ್ ರಸ್ತೆಗಳಲ್ಲಿ ಜನರು ಮಳೆಯ ಸಿಂಚನಕ್ಕೆ ಸಂತಸಪಟ್ಟರು.

ಗುಡುಗು, ಮಿಂಚು, ಗಾಳಿಯೊಂದಿಗೆ ಶುರುವಾದ ಮಳೆಯು ದಟ್ಟ ಹನಿಗಳೊಂದಿಗೆ ರಭಸವಾಗಿ ಸುರಿಯಿತು. ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ಭಾರೀ ಬಿಸಿಲಿನ ಪ್ರತಾಪಕ್ಕೆ ರೋಸಿ ಹೋಗಿದ್ದ ಬೆಳಗಾವಿಗರಿಗೆ ಇದೀಗ ಕೊಂಚ ತಂಪೆನಿಸಿದೆ.

WhatsApp Group Join Now
Telegram Group Join Now
Share This Article