ಯುಕೆಪಿ- 3ನೇ ಹಂತದ ಯೋಜನೆ ಮೂರು ವರ್ಷದ ಅವಧಿಯಲ್ಲಿ ರೈತರಿಗೆ ಪರಿಹಾರ – ಎಚ್‌.ಕೆ.ಪಾಟೀಲ

Pratibha Boi
WhatsApp Group Join Now
Telegram Group Join Now

ಹಸಿರು ಕ್ರಾಂತಿ ವರದಿ ,

ಜಮಖಂಡಿ; ಉತ್ತರಕರ್ನಾಟಕದ ಬಹು ದೊಡ್ಡ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು ಮೂರು ವರ್ಷಗಳ ಅವಧಿಯಲ್ಲಿ ಭೂಮಿ ಕಳೆದು ಕೊಳ್ಳುವ ರೈತರಿಗೆ ಪರಿಹಾರ ವದಗಿಸಲಾಗುವದು ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದಿಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು. ಮಂಗಳವಾರ ತಾಲೂಕಿನ ತುಂಗಳ ಗ್ರಾಮದ ವೆಂಕಟೇಶ್ವರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳಂತೆ ಯುಕೆಪಿ ಮೂರನೇ ಹಂತದ ಯೋಜನೆಯನ್ನು ಜಾರಿಗೊಳಿಸಲಾಗುವದು. 75 ಸಾವಿರ ಎಕರೆ ಭೂಸ್ವಾಧೀನಕ್ಕೆ 30 ಸಾವಿರ ಕೋಟಿ ರೂ. ಹಾಗೂ ಎಡ ಮತ್ತು ಬಲದಂಡೆ ಕಾಲುವೆಗಳ ನಿರ್ಮಾಣಕ್ಕೆ 50 ಸಾವಿರ ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ ಅದಕ್ಕಾಗಿ 25 ಸಾವಿರ ಕೋಟಿ ರೂಗಳನ್ನು ಮೂರು ವರ್ಷಗಳ ಅವಧಿಯಲ್ಲಿ ರೈತರಿಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದರಿಂದ 5.04 ಹೆಕ್ಟೇರ್‌ ಪ್ರದೇಶ ನೀರಾವರಿ ಸೌಲಭ್ಯ ಪಡೆದುಕೊಳ್ಳಲಿದೆ. ಅಂದರೆ ಸರಿ ಸುಮಾರು12 ಲಕ್ಷ ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವ ಯೋಜನೆಗೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 519ಮೀ ನೀರು ಸಂಗ್ರಹಣೆ ಯಿಂದ 524.265 ಮೀಟರ್‌ ನೀರು ನಿಲ್ಲಿಸಲು ಕೇಂದ್ರ ಸರ್ಕಾರ ರಾಜ್ಯ ಪತ್ರದಲ್ಲಿ ಅವಾರ್ಡ ಮಾಡುವ ಮೂಲಕ ಪರವಾನಿಗೆ ನೀಡಬೇಕಿದೆ ಅದಕ್ಕಾಗಿ ಸುಮಾರು 2.5ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಇಲ್ಲವಾದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗ ಬೇಕಾಗುತ್ತದೆ ಎಂದು ವಿವರಿಸಿದರು.ನೀರಾವರಿ ಯಿಂದ ಜನರ ಬದುಕು ಹಸನಾಗಲಿದೆ. ಪಂಚ ಗ್ಯಾರಂಟಿಗಳಿಂದ ಪ್ರತಿ ಬಡ ಕುಟುಂಬಗಳಿಗೆ ತಿಂಗಳಿಗೆ 5 ಸಾವರಿರ ರೂಗಳನು ಮುಟ್ಟುತ್ತಿವೆ ಇದರ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗ ಬೇಕು ಎಂದು ಹೇಳಿದರು.

ಬಾಕ್ಸ –

ನೀರು ತಂದುಕೊಟ್ಟ ಬೀಗರು ; ಜಿಲ್ಲಾಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಮಾತನಾಡಿ ಸಚಿವ ಎಚ್‌.ಕೆ. ಪಾಟೀಲರು ತುಂಗಳ ಗ್ರಾಮದ ಬೀಗರು ಅವರು ಶ್ರಮ ಪಟ್ಟು ಸಾವಳಗಿ-ತುಂಗಳ ಏತ ನೀರಾವರಿ ಯೊಜನೆಯನ್ನು ಜಾರಿಗೆ ತರುವ ಮೂಲಕ ನೀರು ತಂದು ಕೊಟ್ಟಿದ್ದಾರೆ, ಇಂಥಹ ಬೀಗರಿದ್ದರೇ ನಮ್ಮೆಲ್ಲ ಸಮಸ್ಯೆಗಳು ಪರಿಹಾರ ವಾಗುತ್ತವೆ ಎಂದು ಸಭೆಯ ಗಮನ ಸೆಳೆದರು. ಸಾವಳಗಿ ತುಂಗಳ ಏತ ನೀರಾವರಿ ಯೋಜನೆಯ ನಿರ್ವಹಣೆಗೆ ಪ್ರಯತ್ನಿಸಲಾಗುವದು ಎಂದು ಹೇಳಿದರು. ಸರ್ಕಾರದ ಯೋಜನೆಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು. ಬಿಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಗಮದ ಆದ್ಯಕ್ಷ ಜೆ.ಟ.ಪಾಟೀಲ ಮಾತನಾಡಿದರು. ಬರಗಾಲ ಪ್ರದೇಶವಾಗಿದ್ದ ಜಮಖಂಡಿ ಕ್ಷೇತ್ರದ ಕೊನೆಯ ಭಾಗದ ಹಳ್ಳಿಗಳಿಗೆ ಅನುಕೂಲವಾಗುವ ತುಬಚಿ ಏತನೀರಾವರಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಮನವಿ ಸಲ್ಲಿಸಿದರು. ಸಾವಳಗಿ ತುಂಗಳ ಏತ ನೀರಾವರಿಯ ನೀರು ತಾಲೂಕಿನ ಕೊನೆಯ ಭಾಗದ ಹಳ್ಳಿಗೆಳಿಗೆ ತಲುಪುತ್ತಿಲ್ಲ. ಅಥಣಿ ಭಾಗದಿಂದ ಬರುವ ನೀರು ಕೊನೆ ಭಾಗಕ್ಕೆ ತಲುಪುತ್ತಿಲ್ಲ ಎಂದು ವಿವರಿಸಿದರು. ಸರ್ಕಾರ ಯುಕೆಪಿ ಮೂರನೇ ಹಂತದ ಯೋಜನೆಯನ್ನು ಜಾರಿಗೊಳಿಸಲು ಒಪ್ಪಿದೆ ಮೂರು ವರ್ಷಗಳ ಆವಧಿಯಲ್ಲಿ ಪರಿಹಾರ ವಿತರಿಸುವ ಕೆಲಸವಾಗಲಿದೆ ಎಂದು ಹೇಳಿದರು. ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಆನಂದ ನ್ಯಾಮಗೌಡ ಮಾತನಾಡಿದರು. ವೇಮನ ವಿವಿಯ ಸಂಯೋಜಕ ಎಚ್‌.ಬಿ.ನಿಲಗುಂದ, ಪ್ರಾಚಾರ್ಯ ಟಿ.ಪಿ.ಗಿರಡ್ಡಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕೊಕಟನೂರಿನ ಗುರುಶಾಂತಲಿಂಗ ಸ್ವಾಮಿಗಳು, ಸಿದ್ಧಲಿಂಗ ಆಶ್ರಮದ ಅನುಸೂಯಾತಾಯಿ, ಈಶ್ವರಿ ವಿವಿಯ ವೈಷ್ಣವೀ ಅಕ್ಕ, ದೇವಸ್ಥಾನದ ಅರ್ಚಕ ಶಂಕರ ಕುಲಕರ್ಣಿ, ಏಗಪ್ಪಸವದಿ, ಅರ್ಬನ್‌ಬ್ಯಾಂಕ್‌ ಅಧ್ಯಕ್ಷ ರಾಹುಲ್‌ ಕಲೂತಿ ನಿರ್ದೇಶ ಕ ಅರುಣಕುಮಾರ ಶಾ, ವರ್ಧಮಾನ ನ್ಯಾಮಗೌಡ, ಫಕ್ಕೀರಸಾಬ ಬಾಗವಾನ, ಶ್ರೀಶೈಲ ದಳವಾಯಿ, ಅರ್ಜುನ ದಳವಾಯಿ, ಮುತ್ತಣ್ಣ ಹಿಪ್ಪರಗಿ, ಸುಶೀಲ ಕುಮಾರ ಬೆಳಗಲಿ, ನ್ಯಾಯವಾದಿ ಎಲ್‌.ಆರ್‌. ಉದಪುಡಿ, ತುಕಾರಾಮ ಹಾಜುವಳ್ಳಗೋಳ, ಕಲ್ಲಪ್ಪ ಗಿರಡ್ಡಿ, ವಿಜಯಲಕ್ಷ್ಮೀ ಹೊಸೂರು ಪಿಡಿಓ ಅಶೋಕ ಜನಗೌಡ ವೇದಿಕೆಯಲ್ಲಿದ್ದರು ಬಸವಂತಣ್ಣ ಕನಾಳ ಸ್ವಾಗತಿಸಿದರು

WhatsApp Group Join Now
Telegram Group Join Now
Share This Article