ಮಹಾರಾಷ್ಟ್ರದಲ್ಲೂ ನೀಟ್ ಪ್ರಶ್ನೆ ಪತ್ರಿಕೆ ಲೀಕ್​: ಇಬ್ಬರು ಶಿಕ್ಷಕರ ಬಂಧನ

Ravi Talawar
ಮಹಾರಾಷ್ಟ್ರದಲ್ಲೂ ನೀಟ್ ಪ್ರಶ್ನೆ ಪತ್ರಿಕೆ ಲೀಕ್​: ಇಬ್ಬರು ಶಿಕ್ಷಕರ ಬಂಧನ
WhatsApp Group Join Now
Telegram Group Join Now

ಲಾತೂರ್​ : ವೈದ್ಯಕೀಯ ಪ್ರವೇಶ ಪರೀಕ್ಷೆ (NEET) ಪತ್ರಿಕೆ ಸೋರಿಕೆ ಪ್ರಕರಣ ಇದೀಗ ಮಹಾರಾಷ್ಟ್ರದ ಲಾತೂರ್​ನಲ್ಲೂ ಸದ್ದು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ನಾಂದೇಡ್‌ನ ಎಟಿಎಸ್‌ ತಂಡವು ಶನಿವಾರ ಬಂಧಿಸಿದೆ.

ಸಂಜಯ್​ ತುಕಾರಾಮ್​ ಜಾಧವ್​ ಮತ್ತು ಜಾಲೀಲ್​ ಉಮಾರ್​ ಖಾನ್​ ಪಠಾಣ್​​ ಅವರನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆ ಆರೋಪದ ಮೇಲೆ ಬಂಧಿಸಲಾಗಿದ್ದು, ಭಾನುವಾರ ನೋಟಿಸ್​ ನೀಡಿ ಬಿಡುಗಡೆ ಮಾಡಲಾಗಿತು. ಆದರೆ, ಭಾನುವಾರ ಸಂಜೆ ಜಿಲ್ಲಾ ಪರಿಷದ್​ ಶಾಲೆಯ ಶಿಕ್ಷಕರಾಗಿದ್ದ ಸಂಜಯ್​ ತುಕಾರಂ ಜಾಧವ್​ ಮತ್ತು ಜಾಲೀಲ್​ ಉಮಾರ್​ ಖಾನ್​ ಬಂಧಿಸಲಾಗಿದೆ. ಸದ್ಯ ಪ್ರಕರಣದಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಲಾತೂರ್‌ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೆಹಲಿಯ ಈರಣ್ಣ ಮಷ್ಣಜಿ ಕೊಂಗಾಲ್ವಾರ್ ಮತ್ತು ಗಂಗಾಧರ್ (ಪೂರ್ಣ ಹೆಸರು ಮರೆ ಮಾಚಲಾಗಿದೆ) ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್​ 3(ವಿ), ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಕಾಯಿದೆ 4 ಮತ್ತು 10, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 120 (ಬಿ) ಮೇಲೆ ಪ್ರಕರಣ ದಾಖಲಿಸಲಾಗಿದೆ.

ಜೊತೆಗೆ​ ಲಾತೂರ್ ಸಿಟಿ ಉಪವಿಭಾಗದ ಪೊಲೀಸ್ ಅಧಿಕಾರಿ ಭಗವತ್ ಫಂಡೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ನಾಂದೇಡ್​ನ ಎಟಿಎಸ್​ ತಂಡವೂ ಶನಿವಾರ ಲಾತೂರ್​ನಲ್ಲಿ ನೀಟ್​ ಪರೀಕ್ಷೆ ಅಕ್ರಮದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ದಾಳಿ ನಡೆಸಿತು. ಈ ಇಬ್ಬರು ಶಿಕ್ಷಕರು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಲಾಗಿದೆ.

ಲಾತೂರ್​ ನಿವಾಸಿಯಾಗಿರುವ ಸಂಜಯ್​ ಜಾಧವ್​​ ಸೋಲಾಪುರದ ಟಕ್ಲಿ ಜಿಲ್ಲಾ ಪರಿಷದ್​​ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಅಂಬಜೊಗಯ್​ ರಸ್ತೆಯಲ್ಲಿ ವಾಸವಾಗಿರುವ ಉಮರ್​ ಖಾನ್​ ಪಠಾಣ್​​​ ಲಾತೂರ್​ ತಾಲೂಕಿನಲ್ಲಿರುವ ಕಟ್ಪುರ್​​ನ ಜಿಲ್ಲಾ ಪರಿಷದ್​ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಬ್ಬರೂ ಲಾತೂರ್​ನಲ್ಲಿ ಖಾಸಗಿಯಾಗಿ ಕೋಚಿಂಗ್​ ಕೇಂದ್ರವನ್ನು ನಡೆಸುತ್ತಿದ್ದು, ಶನಿವಾರ ಇಬ್ಬರ ಬಂಧನದ ಬಳಿಕ ನಾಂದೇಡ್​ನ ಎಟಿಎಸ್​ ರಾತ್ರಿ ಪೂರ್ತಿ ತನಿಖೆಯನ್ನು ನಡೆಸಿದರು. ಸದ್ಯ ಶಿವಾಜಿನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಗವತ್​​ ಪಂಡೆ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

ಈ ಇಡೀ ಪ್ರಕರಣದಿಂದ ಲಾತೂರ್ ಅಕಾಡೆಮಿಗಳ ಹೆಸರಿಗೆ ಧಕ್ಕೆ ಉಂಟಾಗಿದ್ದು, ಭವಿಷ್ಯದಲ್ಲಿ ಇನ್ನು ಕೆಲವರ ಹೆಸರು ಪ್ರಕರಣದಲ್ಲಿ ಸೇರಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.

 

WhatsApp Group Join Now
Telegram Group Join Now
Share This Article