ಎರಡು ಬಸ್​ಗಳು ನದಿಗೆ ಬಿದ್ದಿದ್ದು 63 ಪ್ರಯಾಣಿಕರು ನಾಪತ್ತೆ

Ravi Talawar
ಎರಡು ಬಸ್​ಗಳು ನದಿಗೆ ಬಿದ್ದಿದ್ದು 63 ಪ್ರಯಾಣಿಕರು ನಾಪತ್ತೆ
WhatsApp Group Join Now
Telegram Group Join Now

ನೇಪಾಳ: ನೇಪಾಳದಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಭೂಕುಸಿತ ಉಂಟಾಗಿದ್ದು, ಎರಡು ಬಸ್​ಗಳು ನದಿಗೆ ಬಿದ್ದಿದ್ದು 63 ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಮದನ್-ಆಶೀರ್ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ, ಈ ವೇಳೆ ಎರಡು ಬಸ್‌ಗಳು ಅವಶೇಷಗಳಡಿ ಸಿಲುಕಿ ತ್ರಿಶೂಲಿ ನದಿಯಲ್ಲಿ ಕೊಚ್ಚಿ ಹೋಗಿವೆ.

ಭಾರಿ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ತಿಳಿದುಬಂದಿದೆ. ಚಿತ್ವಾನ್ ಮುಖ್ಯ ಜಿಲ್ಲಾ ಅಧಿಕಾರಿ ಇಂದ್ರದೇವ್ ಯಾದವ್ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ ಮತ್ತು ಎಎನ್‌ಐಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಫೋಟೋಗಳೂ ಹೊರಬಿದ್ದಿವೆ. ಭೂಕುಸಿತದಿಂದ ರಸ್ತೆಯ ಮಧ್ಯದಲ್ಲಿಯೇ ಅವಶೇಷಗಳು ಶೇಖರಣೆಗೊಂಡು ರಸ್ತೆ ಸಂಚಾರ ಸ್ಥಗಿತಗೊಂಡಿರುವುದು ಕಂಡು ಬರುತ್ತಿದೆ.

ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಪ್ರಯಾಣಿಕರನ್ನು ಹುಡುಕಲು ಮತ್ತು ರಕ್ಷಿಸಲು ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ. ಮುಂಗಾರು ಆರಂಭವಾದಾಗಿನಿಂದ ನೇಪಾಳದಲ್ಲಿ 62 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 90 ಜನರು ಗಾಯಗೊಂಡಿದ್ದಾರೆ. ಅಲ್ಲಿ ಸುರಿದ ಭಾರೀ ಮಳೆಗೆ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಕನಿಷ್ಠ 121 ಮನೆಗಳು ಮುಳುಗಿವೆ ಮತ್ತು 82 ಇತರವುಗಳಿಗೆ ಹಾನಿಯಾಗಿದೆ. ದೇಶಾದ್ಯಂತ ಒಟ್ಟು 1,058 ಕುಟುಂಬಗಳನ್ನು ಸ್ಥಳಾಂತರಿಸಿವೆ.

ಅಪಘಾತಕ್ಕೀಡಾದ ಒಂದು ಬಸ್ ಬಿರ್‌ಗಂಜ್‌ನಿಂದ ಕಠ್ಮಂಡುವಿಗೆ ಹೋಗುತ್ತಿತ್ತು ಮತ್ತು ಇನ್ನೊಂದು ಬಸ್ ಗೌರ್‌ನಿಂದ ಕಠ್ಮಂಡುವಿಗೆ ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ. ಪರ್ವತದ ಮೇಲೆ ಭೂಕುಸಿತದಿಂದ ಈ ಅವಘಡ ಸಂಭವಿಸಿದೆ. ನಾರಾಯಣಘಟ್ಟ ಮತ್ತು ಮುಗ್ಲಿಂಗ್ ನಡುವೆ ಈ ಘಟನೆ ನಡೆದಿದೆ.

WhatsApp Group Join Now
Telegram Group Join Now
Share This Article