ಹಿಡಕಲ್ ಡ್ಯಾಂ ಹಿನ್ನಿರಿನಲ್ಲಿ ಈಜಲು ಹೋಗಿ ಇಬ್ಬರು ಬಾಲಕರ ಸಾವು

Hasiru Kranti
ಹಿಡಕಲ್ ಡ್ಯಾಂ ಹಿನ್ನಿರಿನಲ್ಲಿ ಈಜಲು ಹೋಗಿ ಇಬ್ಬರು ಬಾಲಕರ ಸಾವು
WhatsApp Group Join Now
Telegram Group Join Now

ಉಳ್ಳಾಗಡ್ಡಿ-ಖಾನಾಪೂರ:-ಹಳೆ ಗುಡಗನಟ್ಟಿ ಗ್ರಾಮದ ಬಳಿ ಹಿಡಕಲ್ ಡ್ಯಾಮಿನ ಹಿನ್ನಿರಿನ ಪ್ರದೇಶದಲ್ಲಿ ಸೋಮವಾರ ದಿ, ೩೦ ರಂದು ಐವರು ಬಾಲಕರು ಈಜಲು ನೀರಿಗಿಳಿದಿದ್ದರು ಈ ಬಾಲಕರಲ್ಲಿ ಇಬ್ಬರು ಬಾಲಕರು ನೀರು ಪಾಲಾಗಿ ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕಘಟನೆ ನಡೆದಿದೆ,


ಈ ಘಟನೆ ಮುಂಜಾನೆ ೧೦ ರಿಂದ ೧೧ ಗಂಟೆಯ ಸಮಯದಲ್ಲಿ ನಡೆದಿದ್ದು ಈ ಘಟನೆಯಲ್ಲಿ ಸಾವನಪ್ಪಿದ ಬಾಲಕರನ್ನು ,ಕು||ಪ್ರಜ್ವಲ್ ಮುತ್ತೆಪ್ಪಾ ಗೋಕಾರ, (೧೪) ಸಾ||ದಾದಬಾನಟ್ಟಿ ಆರ್,ಸಿ, ಹಾಗೂ ಕು||ಕೃಷ್ಣಾ ವಿಠ್ಠಲ ಖಾನಾಪೂರೆ,(೧೪) ಸಾ||ದಾದಬಾನಟ್ಟಿ ಆರ್,ಸಿ, ಎಂದು ಗುರುತಿಸಲಾಗಿದ್ದು ಈ ವಿದ್ಯಾರ್ಥಿಗಳು ಗುಡಗನಟ್ಟಿ ಆರ್,ಸಿ, ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇಯ ತರಗತಿಯಲ್ಲಿ ಓದುತ್ತಿದ್ದರು,


ಹಿನ್ನೆಲೆ:-ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಈ ಐವರು ಬಾಲಕರು ಈಜಲು ಹಳೇ ಗುಡಗನಟ್ಟಿ ಗ್ರಾಮದ ಬಳಿಯಲ್ಲಿ ಹಿಡಕಲ್ ಜಲಾಶಯದ ಹಿನ್ನಿರಿಗೆ ಇಳಿದಿದ್ದು ಈ ಘಟನೆ ನಡೆದಿದ್ದರಿಂದ ಈ ಬಾಲಕರ ಜೊತೆಗಿದ್ದ ಮೂವರು ಬಾಲಕರು ಯಾರು ಎಂಬುದು ತಿಳಿದಿಲ್ಲಾ ಈ ಬಾಲಕರು ಇಬ್ಬರು ಬಾಲಕರು ಮುಳುಗುತ್ತಿದ್ದರಿಂದ ಭಯ ಭೀತರಾಗಿರಬಹುದೆಂದು ಊಹಿಸಲಾಗಿದೆ, ಈ ಘಟನೆಯ ಬಗ್ಗೆ ಸಾರ್ವಜನಿಕರಿಗೆ ಪೋಲಿಸರಿಗೆ ತಿಳಿಸಿದ್ದರಿಂದ ಯಮಕನಮರಡಿಯ ಅಗ್ನಿಶ್ಯಾಮಕ ದಳದ ಸಿಬ್ಬಂದಿಗಳು ಹಿನ್ನಿರಿನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಬಾಲಕರ ಮೃತ ದೇಹಗಳನ್ನು ಮಧ್ಯಾನ್ಹ ೨.೩೦ ರ ಸುಮಾರಿಗೆ ಹಿನ್ನಿರಿನಿಂದ ಹೊರ ತೆಗೆಯಲಾಯ್ತು,
ಮುಗಿಲು ಮುಟ್ಟಿದ ಪಾಲಕರ ಆಕ್ರಂದನ:-ಈ ಘಟನೆಯಲ್ಲಿ ಸುತ್ತಲಿನ ಗ್ರಾಮಗಳಿಂದ ತಂಡೋಪ ತಂಡವಾಗಿ ಜನ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು ಮಕ್ಕಳನ್ನು ಕಳೆದುಕೊಂಡಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು
ಕಾರ್ಯಾಚರಣೆ:-ಅಗ್ನಿಶ್ಯಾಮಕದಳದ ಠಾಣಾಧೀಕಾರಿಗಳಾದ ವಾಯ್,ಜಿ,ಕೋಲಕಾರ, ಹೇಮಂತ ಬಾಳೆಕುಂದ್ರಿ, ಅಶೋಕ ಪಾಟೀಲ, ಬಸವರಾಜ ಬಂಬರಗಿ, ರಫೀಕ್ ಬಡೆಭಾಯಿ, ಯಲ್ಲಪ್ಪಾ ಪಾಟೀಲ, ಇಬ್ಬರು ಮಕ್ಕಳನ್ನು ಹೊರ ತಗೆಯುವಲ್ಲಿ ಸಹಕರಿಸಿದರು, ಪ್ರಕರಣ ಯಮಕನಮರಡಿ ಠಾಣೆಯಲ್ಲಿ ದಾಖಲಾಗಿದೆ,

WhatsApp Group Join Now
Telegram Group Join Now
Share This Article