ಬೆಂಗಳೂರು, ಅಕ್ಟೋಬರ್ 07: ಕರ್ನಾಟಕದ ಕರಾವಳಿ ಸೇರಿ 14 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ, ವಿಜಯನಗರದಲ್ಲಿ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿಯಲ್ಲಿ ಕೂಡ ಜೋರು ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 9ರಿಂದ ಮಳೆ ಹೆಚ್ಚಾಗಲಿದೆ.
ಭಾಲ್ಕಿ, ರಾಯಲ್ಪಾಡು, ಶಾಹಪುರ, ಚಾಮರಾಜನಗರ, ಗೋಪಾಲನಗರ, ಹೆಸರಘಟ್ಟ, ಕೃಷ್ಣರಾಜಪೇಟೆ, ದೇವರಹಿಪ್ಪರಗಿ, ಹೆಸರಘಟ್ಟ, ಹೊಸಕೋಟೆ, ಮುದ್ದೇಬಿಹಾಳ, ಟಿಜಿ ಹಳ್ಳಿ, ಬೆಂಗಳೂರು ಕೆಐಎಎಲ್, ಚಿಕ್ಕಬಳ್ಳಾಪುರ, ಹಗರಿಬೊಮ್ಮನಹಳ್ಳಿ, ಕನಕಪುರ, ಕೆಂಭಾವಿ, ಅಫ್ಝಲ್ಪುರ, ಎಂಎಂ ಹಿಲ್ಸ್, ಮದ್ದೂರು, ನಾಗಮಂಗಲ, ಸೇಡಂ, ಶಿರಹಟ್ಟಿ, ಥೊಂಡೇಭಾವಿಯಲ್ಲಿ ಹೆಚ್ಚಿನ ಮಳೆಯಾಗಿದೆ.