ಸೌಹಾರ್ದ ಸಹಕಾರ ಸಂಘಗಳ ಸೇವೆ ಅಪಾರ ಈ ನಂಜನಗೌಡ 

Ravi Talawar
ಸೌಹಾರ್ದ ಸಹಕಾರ ಸಂಘಗಳ ಸೇವೆ ಅಪಾರ ಈ ನಂಜನಗೌಡ 
WhatsApp Group Join Now
Telegram Group Join Now
ಬೆಳಗಾವಿ. ಸಾರ್ವಜನಿಕರಿಗೆ ಸೌಹಾರ್ದ ಸಹಕಾರ ಸಂಘಗಳಿಂದ ಉನ್ನತ ಮಟ್ಟದ ಸೇವೆ ಸಿಗುತ್ತಿದ್ದು ಅದಕ್ಕಾಗಿ ಸೌಹಾರ್ದ ಸಹಕಾರ ಸಂಘಗಳ ಸೇವೆ ಅಪಾರವಾದದ್ದು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿ, ಇದರ ಅಧ್ಯಕ್ಷರಾದ ಈ ನಂಜನಗೌಡ ಹೇಳಿದರು.
 ಅವರು ಶುಕ್ರವಾರದಂದು ನಗರದ ಕೆಪಿಟಿಸಿಎಲ್ ಸಭಾಭಾವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯ ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ಖಾನಾಪುರ, ಸವದತ್ತಿ, ರಾಮದುರ್ಗ, ಯರಗಟ್ಟಿ, ಗೋಕಾಕ, ಮೂಡಲಗಿ, ತಾಲೂಕಾ ಮತ್ತು ಯಮಕನಮರಡಿ ಭಾಗದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ  ಸಹಕಾರ  ನಿ, ಬೆಳಗಾವಿ ಪ್ರಾಂತದ ಆಡಳಿತ ಮಂಡಳಿ ಸಭೆ ಮತ್ತು ವಿಷಯಾದರಿತ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜಗದೀಶ ಕವಟಗಿಮಠ, ಹಾಸ್ಯ ಕಲಾವಿದ ವೈ ವಿ. ಗುಂಡೂರಾವ, ಎಚ್ ಎಸ್. ಗಿರಡ್ಡಿ, ಶ್ರೀ ಚಿದಂಬರೇಶ್ವರ ಸೌಹಾರ್ದ ಸಹಕಾರಿ ಅಧ್ಯಕ್ಷ ಶ್ರೀಕಾಂತ ಮಹಜನ,ರಾಚಯ್ಯ ಹಿರೇಮಠ ಸೇರಿದಂತೆ ಸಹಕರಿಗಳು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article