ನಾನು ಮಾಡಿದ ಸೇವೆ. ಮಾಡಿದ ಕೆಲಸ ಜಿಲ್ಲೆಯ ಜನ ಮರೆತಿಲ್ಲ : ವಿನಯ ಕುಲಕರ್ಣಿ

Ravi Talawar
ನಾನು ಮಾಡಿದ ಸೇವೆ. ಮಾಡಿದ ಕೆಲಸ ಜಿಲ್ಲೆಯ ಜನ ಮರೆತಿಲ್ಲ : ವಿನಯ ಕುಲಕರ್ಣಿ
WhatsApp Group Join Now
Telegram Group Join Now
ಕಿತ್ತೂರು: ನ್ಯಾಯಾಲಯದ ಆದೇಶಕ್ಕೆ ನಾನು ತಲೆಬಾಗುತ್ತೇನೆ. ಆದೇಶದಂತೆ ನಾನು ಶುಕ್ರವಾರ ಬೆಂಗಳೂರು ನ್ಯಾಯಾಲಯದ ಎದುರು ಹಾಜರಾಗುತ್ತೇನೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು.

ಬಿಜೆಪಿ ಮುಖಂಡ ಯೋಗೇಶಗೌಡ ಕೊಲೆ ಪ್ರಕರಣ ಧಾರವಾಡ ಜಿಲ್ಲಾ ಪ್ರವೇಶ ನಿರ್ಬಂಧ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತರೂಗೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಒಂದು ವೇಳೆ ಕ್ಷೇತ್ರದಲ್ಲಿ ಇಲ್ಲದೇ ಹೋದರೂ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಬಾರದು. .

ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಕ್ಷೇತ್ರದಲ್ಲಿ ಯಾವುದೇ ಕೆಲಸ ನಿಲ್ಲಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾನು ಕ್ಷೇತ್ರದಲ್ಲಿ ಇಲ್ಲದೇ ಇದ್ದರೂ ನನ್ನ ಕುಟುಂಬದವರು ಹಾಗೂ ಕಾರ್ಯಕರ್ತರಿಗ ಸಹಕಾರ ನೀಡುವಂತೆ ಹೇಳಿದ್ದೇನೆ.

ನಾನು ಕ್ಷೇತ್ರದಲ್ಲಿ ಇಲ್ಲದೇ ಇದ್ದರೂ ಫೋನ್ ಮುಖಾಂತರ ಕೆಲಸ ಮಾಡಿಸಿದ್ದೇನೆ. ಇಲ್ಲಿಯವರೆಗೆ ಯಾವ ಯಾವ ಕೆಲಸಗಳು ಆಗಿವೆ ಎಂದು ವಿವರವಾಗಿ ತಳಿಸಿದ ಅವರು ಧಾರವಾಡ ಪ್ರತ್ಯೇಕ ಪಾಲಿಕೆ ಯಾಗಿ ಘೋಷಣೆ ಆಗುವುದು ತಮ್ಮ ಹೋರಾಟ ದ ಬಗ್ಗೆ ಮತ್ತು ನಂತರ ದ ಕೆಲ ಅಡೆ ತಡೆ ಬಗ್ಗೆ ವಿವರಿಸಿದರು.

ಈ ಇಡೀ ಪ್ರಕರಣ ರಾಜ್ಯದ ಜನತೆಗೆ ಗೊತ್ತೇ ಇದೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಮಾಧ್ಯಮದವರು ಯಾರದ್ದೋ ಒತ್ತಡಕ್ಕೆ ಮಣಿಯಬಾರದು. ಒತ್ತಡಕ್ಕೆ ಮಣಿದು ಏನೇನೋ ತೋರಿಸುವ ಕೆಲಸ ಆಗಬಾರದು. ಈ ಪ್ರಕರಣದ ಬಗ್ಗೆ ಮುಂದಿನ ಕಾನೂನು ಹೋರಾಟ ಮಾಡುತ್ತೇವೆ.

ಸದ್ಯ ಈ ಪ್ರಕರಣ ಕೋರ್ಟ್‌ನಲ್ಲಿದೆ. ಕೋರ್ಟ್‌ನಲ್ಲೇ ತೀರ್ಮಾನ ಆಗಲಿದೆ. ಈ ಪ್ರಕರಣದಲ್ಲಿ ನಮ್ಮ ಪಕ್ಷ ಮತ್ತು ಕ್ಷೇತ್ರದ ಜನ ನನ್ನ ಬೆನ್ನಿಗೆ ಇದ್ದಾರೆ.ನಾನು ಶುಕ್ರವಾರ ನ್ಯಾಯಾಲಯದ ಎದುರು  ಹಾಜರಾಗುತ್ತೇನೆ ಎಂದು  ಬಾವುಕರಾಗಿ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿನಯ ಕುಲಕರ್ಣಿಯವರ ಪತ್ನಿ ಶಿವಲೀಲಾ ಕುಲಕರ್ಣಿ ಯವರು ಮತ್ತು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ರಾದ ಅರವಿಂದ ಏಗನಗೌಡರ. .ಈಶ್ವರ ಶಿವಳ್ಳಿ ಮುಂತಾದವರು  ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article