ಪತಿಗಾಗಿ ಕಾದು ಕೂತ ಪತ್ನಿ: ಠಾಣೆಗೆ ದೂರು

Ravi Talawar
ಪತಿಗಾಗಿ ಕಾದು ಕೂತ ಪತ್ನಿ: ಠಾಣೆಗೆ ದೂರು
WhatsApp Group Join Now
Telegram Group Join Now
ಬಳ್ಳಾರಿ, ಜು.02: ಅದು ಒಂದು ಸುಂದರ ಕುಟುಂಬ. ಕಳೆದ 9 ವರ್ಷಗಳ ಹಿಂದೆ ವಿವಾಹಿತರಾಗಿದ್ದ ಆ ದಂಪತಿಗೆ ಮೂವರು ಮಕ್ಕಳು. ಎರಡು ಹೆಣ್ಣು, ಒಂದು ಗಂಡು. 9 ಆ ಕುಟುಂಬದಲ್ಲಿ ತಿಂಗಳ ಹಿಂದಷ್ಟೇ ಗಂಡು ಮಗುವಿನ ಪ್ರವೇಶ ಆಗಿತ್ತು. ಆದರೆ ಅದು ಯಾರ ದೃಷ್ಟಿ ತಾಗಿತೋ? ವಿಧಿ ಬರಹದ ಆಟವೋ? ಗೊತ್ತಿಲ್ಲ. ಕುಟುಂಬದ ಯಜಮಾನ, ಲಲಿತಮ್ಮನ ಪತಿ ನಾಗೇಂದ್ರ ಮನೆ ಬಿಟ್ಟು ಹೊರಟು ಹೋಗಿದ್ದಾನೆ.
ಹೌದು! ಹೊಸಪೇಟೆಯ ಕೋಳಿಪೇಟೆಯ ನಿವಾಸಿ ನಾಗೇಂದ್ರ ಕಳೆದ 9 ವರ್ಷಗಳ ಹಿಂದೆ ಬಳ್ಳಾರಿಯ ಮಿಂಚೇರಿ ಗ್ರಾಮದ ಮಡಿವಾಳರ ರಾಮಣ್ಣ ಅವರ ಪುತ್ರಿ ಲಲಿತಾ ಅವರನ್ನು ವಿವಾಹ ಆಗಿದ್ದ. ಲಲಿತಾ ಪತಿ ನಾಗೇಂದ್ರ ವಾಸವಾಗಿದ್ದ ಹೊಸಪೇಟೆಯ ಕೋಳಿಪೇಟೆಯ ನಿವಾಸದಲ್ಲೇ ಇದ್ದರು. ಆದರೆ ಕಳೆದ 6 ತಿಂಗಳ ಹಿಂದೆ ಉಡಿ ಅಕ್ಕಿ ಹಾಕಿಸಿಕೊಂಡು ತವರು ಮನೆಗೆ ಬಂದ ಮೇಲೆ ಪತ್ನಿಯೊಂದಿಗೆ ಮಾತು ನಿಲ್ಲಿಸಿದ. ಕಾರಣ ಕೇಳಿದರೆ ಹೇಳಲಿಲ್ಲ. ಈಗ ಕಳೆದ ಒಂದು ತಿಂಗಳಿನಿಂದ ಹೊಸಪೇಟೆಯಿಂದ ನಾಪತ್ತೆ ಆಗಿರುವ ನಾಗೇಂದ್ರ ಎಲ್ಲಿದ್ದಾನೆಂದು ಗೊತ್ತಿಲ್ಲ.
ಇದರಿಂದ ಆತಂಕಕ್ಕೀಡಾದ ಲಲಿತಮ್ಮ ಹಾಗೂ ತವರು ಮನೆಯವರು ನಾಗೇಂದ್ರನ ಕುಟುಂಬದ ಹಿರಿಯರಿಗೆ ವಿಚಾರಿಸಿದರು. ಅವರ ಬಳಿಯೂ ಉತ್ತರ ಇಲ್ಲ.
ನಾಪತ್ತೆಯಾಗಿರುವ ತನ್ನ ಪತಿಯನ್ನು ಹುಡುಕಿ ಕೊಡುವಂತೆ ಲಲಿತಮ್ಮ ಹೊಸಪೇಟೆಯ ಬಡಾವಣೆ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ತನ್ನ ಪತಿ ಎಲ್ಲೇ ಇದ್ದರೂ ಮರಳಿ ತನ್ನನ್ನು ತನ್ನ ಮನೆಗೆ ಕರೆದೊಯ್ಯಬೇಕೆಂದು ಮನವಿ ಮಾಡಿದ್ದಾರೆ.
ಚೀಟಿ ಹಣ ದುರ್ಬಳಕೆ: ನಾಪತ್ತೆಯಾಗಿರುವ ನಾಗೇಂದ್ರ ಚೀಟಿ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಚೀಟಿ ಹಾಕಿದವರ ಒಟ್ಟು ಮೊತ್ತ ಅಂದಾಜು 2 ಲಕ್ಷ ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದ್ದು, ಹಣ ವಾಪಸ್ ನೀಡಲು ಸಾಧ್ಯ ಆಗುವುದಿಲ್ಲ ಎಂಬ ಕಾರಣಕ್ಕೆ ಮನೆಯಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
WhatsApp Group Join Now
Telegram Group Join Now
Share This Article